ಬಲಿಯಾ: ಮೂವರು ದುಷ್ಕರ್ಮಿಗಳು ಪತ್ರಕರ್ತರೊಬ್ಬರನ್ನು ಬೆನ್ನಟ್ಟಿ ಹೋಗಿ ಗುಂಡು ಹಾರಿಸಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯಲ್ಲಿ ಸೋಮವಾರ ತಡರಾತ್ರಿ ನಡೆದಿದೆ.
ಸ್ಥಳೀಯ ಪತ್ರಕರ್ತ ರತನ್ ಸಿಂಗ್ (42) ಮೃತ ದುರ್ದೈವಿ. ಆಸ್ತಿ ವಿವಾದವೇ ಕೊಲೆ ಕಾರಣ ಎಂದು ತಿಳಿದುಬಂದಿದ್ದು, ಗುಂಡು ಹಾರಿಸಿ ದುಷ್ಕರ್ಮಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸೋಮವಾರ ರಾತ್ರಿ 9 ಗಂಟೆ ಸುಮಾರಿಗೆ ರಾಜಧಾನಿ ಲಖನೌದಿಂದ 260 ಕಿ.ಮೀ ದೂರವಿರುವ ಪೂರ್ವ ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯಲ್ಲಿ ಘಟನೆ ನಡೆದಿದೆ. ರತನ್ ಸಿಂಗ್ ಸ್ಥಳೀಯ ಖಾಸಗಿ ನ್ಯೂಸ್ ಚಾನೆಲ್ನಲ್ಲಿ ಕೆಲಸ ಮಾಡುತ್ತಿದ್ದರು.
ಇದನ್ನೂ ಓದಿ: ದೇವರ ಕೋಣೆಯಲ್ಲಿತ್ತು ಮಗುವಿನ ಶವ: ತಂದೆ-ತಾಯಿಯಿಂದಲೇ ಕೃತ್ಯ, ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!
ಬಲಿಯಾ ಜಿಲ್ಲೆಯ ನಗರ ಭಾಗದಲ್ಲಿ ಸಿಂಗ್ ನೆಲೆಸಿದ್ದರು. ಇವರ ಕುಟುಂಬ ಮಾತ್ರ ಹಳ್ಳಿಯಲ್ಲಿಯೇ ವಾಸಿಸುತ್ತಿತ್ತು. ಅಲ್ಲದೆ, ಆರೋಪಿಯೊಂದಿಗೆ ಕಳೆದ ಕೆಲ ವರ್ಷಗಳಿಂದ ಜಮೀನು ವಿವಾದದಲ್ಲಿ ಸಿಲುಕಿತ್ತು. ವಿವಾದ ಸಂಬಂಧ ಮಾತನಾಡಲು ತಮ್ಮ ಹಳ್ಳಿ ತೆರಳುವಾಗ ಬೆನ್ನಟ್ಟಿ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ತಪ್ಪಿಸಿಕೊಳ್ಳಲು ಸಿಂಗ್ ಯತ್ನಿಸಿದಾದರೂ ಸಫಲವಾಗದೇ ಗುಂಡಿನ ದಾಳಿಗೆ ಸಿಂಗ್ ಪ್ರಾಣ ಬಿಟ್ಟಿದ್ದಾರೆ.
ಆರೋಪಿ ಜಮೀನಿನ ಸುತ್ತ ಗೋಡೆಯೊಂದನ್ನು ನಿರ್ಮಿಸಿದ್ದ. ಇದನ್ನು ತಿಳಿದಿದ್ದ ಸಿಂಗ್ ಗೋಡೆಯನ್ನು ತೆರವುಗೊಳಿಸಿದ್ದರು. ಈ ವೇಳೆ ಆರೋಪಿ ಹಾಗೂ ಸಿಂಗ್ ನಡುವೆ ಮಾತಿನ ಚಕಮಕಿಯು ನಡೆದಿತ್ತು. ಇದೇ ದ್ವೇಷದಲ್ಲಿ ಸಿಂಗ್ರನ್ನು ನಿನ್ನೆ ರಾತ್ರಿ ಬೆನ್ನಟ್ಟಿ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ ಎಂದು ಅಜಾಮ್ಗಢ ವಲಯದ ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. (ಏಜೆನ್ಸೀಸ್)
ಇದನ್ನೂ ಓದಿ: ಜಾಮೀನು ನೀಡಬೇಕಾದರೆ ನನ್ನೊಂದಿಗೆ ಮಲಗು ಎಂದ ಎಸ್ಐಗೆ ಮಹಿಳೆ ಮಾಡಿದ್ದೇನು?
VIRAL VIDEO: 16 ವರ್ಷದ ಹುಡುಗಿ ಜತೆ ಮಹೇಶ್ ಭಟ್ ಮಾಡ್ತಿರೋದೇನು?; ಆಲಿಯಾ ತಂದೆ ವಿರುದ್ಧ ಟೀಕೆಯ ಸುರಿಮಳೆ