ಶ್ರೀಕಾಕುಳಂ: ಆಂಧ್ರ ಪ್ರದೇಶದ ಪೊಲೀಸ್ ಅಧಿಕಾರಿಯೊಬ್ಬರು ಮತ್ತೊಮ್ಮೆ ಟೀಕೆಗೆ ಗುರಿಯಾಗಿದ್ದಾರೆ. ಇತ್ತೀಚಿನ ಘಟನೆಯೊಂದರಲ್ಲಿ ಶ್ರೀಕಾಕುಳಂ ಜಿಲ್ಲೆಯ ಪಂಡೂರು ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಕೊಲ್ಲಿ ರಾಮಕೃಷ್ಣ ಸೆಕ್ಸ್ಗೆ ಬೇಡಿಕೆ ಇಟ್ಟಿರುವುದಾಗಿ ಪಂಡೂರು ಮೂಲದ ಮಹಿಳೆಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.
ಅಕ್ರಮ ಮದ್ಯ ಮಾರಾಟ ಪ್ರಕರಣದಲ್ಲಿ ಜಾಮೀನು ನೀಡಬೇಕಾದರೆ ನಿನ್ನ ಮೈಮಾಟ ನನಗೊಪ್ಪಿಸೂ ಎಂದು ಸಬ್ ಇನ್ಸ್ಪೆಕ್ಟರ್ ಬೇಡಿಕೆ ಇಟ್ಟಿರುವುದು ಇದೀಗ ಬಹಳಷ್ಟು ಆಕ್ರೋಶಕ್ಕೆ ಗುರಿಯಾಗಿದೆ.
ಇದನ್ನೂ ಓದಿ: ಹೆಂಡತಿಯರ ಸಂಖ್ಯೆಯ ಮೇಲೆ ಆಸ್ತಿ ವಿಭಾಗ ಆಗುತ್ತದೆಯೆ?
ಘಟನೆ ಹಿನ್ನೆಲೆ ಏನು?
ಅಕ್ರಮ ಮದ್ಯ ಮಾರಾಟ ಮಾಹಿತಿ ಮೇರೆಗೆ ಆಗಸ್ಟ್ 22ರಂದು ಪಂಡೂರು ಠಾಣೆಯ ಪೊಲೀಸರು ಸಬ್ ಇನ್ಸ್ಪೆಕ್ಟರ್ ಕೊಲ್ಲಿ ರಾಮಕೃಷ್ಣ ನೇತೃತ್ವದಲ್ಲಿ ಪಂಡೂರಿನ ತುಂಗಪೇಟ ಗ್ರಾಮದ ಮನೆಯೊಂದರ ಮೇಲೆ ದಾಳಿ ನಡೆಸುತ್ತಾರೆ. ಈ ವೇಳೆ 48 ಮದ್ಯದ ಬಾಟಲ್ಗಳನ್ನು ಪೊಲೀಸರು ವಶಪಡಿಸಿಕೊಳ್ಳುತ್ತಾರೆ.
ಹೀಗಿದ್ದರೂ ಎಸ್ಐ ರಾಮಕೃಷ್ಣ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ತಂದೆ ಹಾಗೂ ಮಗಳ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿರುವುದಿಲ್ಲ. ಇದರ ನಡುವೆ ಭಾನುವಾರ ಮಹಿಳೆಗೆ ದೂರವಾಗಿ ಕರೆ ಮಾಡುವ ಎಸ್ಐ, ಪ್ರಕರಣ ಸಂಬಂಧ ಚರ್ಚಿಸಬೇಕು ನಮ್ಮ ಮನೆಗೆ ಬಾ ಎಂದು ಹೇಳುತ್ತಾನೆ. ಅಲ್ಲದೆ, ಪ್ರಕರಣದಿಂದ ಹೊರಬರಬೇಕಾದರೆ ಸಹಾಯ ಮಾಡಲು ಪರೋಕ್ಷವಾಗಿ ಆಕೆಯ ಬಳಿ ಸೆಕ್ಸ್ಗೆ ಬೇಡಿಕೆ ಇಡುತ್ತಾನೆ.
ಇದನ್ನೂ ಓದಿ: ಹಣ ಲೂಟಿಗೆ ಬಂದ ದುಷ್ಕರ್ಮಿಗಳಿಂದ ಎಟಿಎಂ ಸೆಕ್ಯುರಿಟಿ ಗಾರ್ಡ್ ಬರ್ಬರ ಹತ್ಯೆ
ಎಸ್ಐ ದುರುದ್ದೇಶ ತಿಳಿದ ಮಹಿಳೆ ಅದಕ್ಕೆ ಒಪ್ಪುವುದಿಲ್ಲ. ಬದಲಾಗಿ ಎಸ್ಐ ವರ್ತನೆಯಿಂದ ಬೇಸತ್ತು, ತನ್ನೊಂದಿಗೆ ಮೊಬೈಲ್ನಲ್ಲಿ ಕೆಟ್ಟದಾಗಿ ಮಾತನಾಡಿದ ರೆಕಾರ್ಡಿಂಗ್ಸ್ ಅನ್ನು ಸಾಕ್ಷಿಯಾಗಿ ನೀಡಿ ಪಂಡೂರು ಠಾಣೆಯಲ್ಲೇ ಮಹಿಳೆ ಸೋಮವಾರ ದೂರು ದಾಖಲಿಸುತ್ತಾಳೆ.
ಈ ಸಂಬಂಧ ತನಿಖೆ ನಡೆಸುತ್ತಿರುವುದಾಗಿ ಇನ್ಸ್ಪೆಕ್ಟರ್ ಮಲ್ಲೇಶ್ವರ ರಾವ್ ತಿಳಿಸಿದ್ದು, ಎಸ್ಐ ಕೊಲ್ಲಿ ರಾಮಕೃಷ್ಣನನ್ನು ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಬರ್ಧಾರ್ ಅಮಾನತ್ತು ಮಾಡಿದ್ದಾರೆ. ಅಲ್ಲದೆ, ಸಮಗ್ರ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ. (ಏಜೆನ್ಸೀಸ್)
ಹಣ, ಶಿಫಾರಸಿದ್ದರಷ್ಟೇ ಹಾಸಿಗೆ, ಜನರ ಕೈಗೆಟುಕುತ್ತಿಲ್ಲ ಸರ್ಕಾರಿ ಆಸ್ಪತ್ರೆ