ಜಾರ್ಖಂಡ್: ಮದುವೆ ಎಂದರೆ ಸಡಗರ ಸಂಭ್ರಮವಾಗಿದೆ. ಗಿರಿದಿಹ್ನಲ್ಲಿ ನಡೆದ ಮದುವೆಯೊಂದರಲ್ಲಿ ಅತಿಥಿಗಳು ಬಿಸಿ ಪೂರಿ ಸಲುವಾಗಿ ಗಲಾಟೆ ಮಾಡಿದ್ದಾರೆ.
ಮಂಗಳವಾರ ರಾತ್ರಿ ಮುಫಾಸಿಲ್ ಠಾಣೆ ವ್ಯಾಪ್ತಿಯ ಪಟರೋಡಿ ಪ್ರದೇಶದಲ್ಲಿ ಶಂಕರ್ ಯಾದವ್ ಎಂಬವರು ಆಯೋಜಿಸಿದ್ದ ವಿವಾಹ ಸಮಾರಂಭದಲ್ಲಿ ಯುವಕರ ಗುಂಪು ಭಾಗವಹಿಸಿತ್ತು ಈ ವೇಳೆ ಆಹಾರದ ಬಗ್ಗೆ ವಿವಾದದ ನಂತರ ಜಗಳ ಪ್ರಾರಂಭವಾಯಿತು.
ಇದನ್ನೂ ಓದಿ: ಏರ್ಪೋರ್ಟ್ ಗೇಟ್ನಲ್ಲೇ ಮಹಿಳೆಯರ ಬಟ್ಟೆ ಬಿಚ್ಚಿಸಿದ ಏರ್ಲೈನ್ಸ್ ಸಿಬ್ಬಂದಿ!: ಕಾರಣವೇನು ಗೊತ್ತಾ?
ಮದುವೆಯಲ್ಲಿ ಪೂರಿ ಆಹಾರವನ್ನು ನೀಡದ ನಂತರ ಯುವಕರು ಉದ್ದೇಶಪೂರ್ವಕವಾಗಿ ಗಲಾಟೆ ಮಾಡಲು ಪ್ರಾರಂಭಿಸಿದರು. ಮುಂಜಾನೆ 2 ಗಂಟೆ ಸುಮಾರಿಗೆ ಬಿಸಿ ಪೂರಿಗಳಿಗೆ ಬೇಡಿಕೆ ಇಡಲು ಪ್ರಾರಂಭಿಸಿದ ಯುವಕರಲ್ಲಿ ಒಬ್ಬರು ಈ ಗಲಾಟೆಯನ್ನು ಪ್ರಾರಂಭಿಸಿದರು. ಪರಿಸ್ಥಿತಿ ಉಲ್ಬಣಗೊಂಡಿತು ಘಟನೆಯಲ್ಲಿ ಮೂರು ಅಥವಾ ನಾಲ್ಕು ಜನರು ಗಾಯಗೊಂಡರು ಎನ್ನಲಾಗಿದೆ. ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.