More

    ಪಾಳ್ಯ ಡೇರಿಗೆ ಅವಿರೋಧ ಆಯ್ಕೆ

    ಕೊಳ್ಳೇಗಾಲ: ತಾಲೂಕಿನ ಪಾಳ್ಯ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಪಿ.ವಿ ನಟರಾಜು, ಉಪಾಧ್ಯಕ್ಷರಾಗಿ ಶಿವಪ್ರಸಾದ್ ಅವಿರೋಧ ಆಯ್ಕೆಯಾದರು.

    ಸಂಘದ ಸಂಘದ ಕಚೇರಿಯಲ್ಲಿ ಬುಧವಾರ ಚುನಾವಣಾ ಪ್ರಕ್ರಿಯೆ ನಡೆಯಿತು. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಇಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ತ್ಯಾಗರಾಜ್ ಪ್ರಸಾದ್ ಅವಿರೋಧ ಆಯ್ಕೆ ಘೋಷಿಸಿದರು. ಚುನಾವಣೆಯಲ್ಲಿ 13 ನಿರ್ದೇಶಕರ ಪೈಕಿ 8 ಜನ ಹಾಜರಿದ್ದರು.

    ನಿರ್ದೇಶಕರಾದ ಬಾಲಸುಬ್ರಮಣ್ಯ, ಎಸ್.ಎಂ.ಜಗದೀಶ್ ನಾಯಕ, ಹೂ.ಸುರೇಶ್, ಸುಮಿತ್ರಾ, ನೀಲಕಂಠನಾಯಕ, ಮಹೇಶ್, ಬಿಎಂಸಿ ಕೇಂದ್ರದ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಆರ್.ನಾಗರಾಜು, ಸಿದ್ದ ನಂಜನಾಯಕ, ನಂಜುಂಡಸ್ವಾಮಿ, ಕೆ.ಮಂಜುದಾಸ., ಬಿ.ಶಿವಮಲ್ಲು, ವಸಂತಮ್ಮ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts