More

    ಅನಧಿಕೃತ ಫ್ಲೆಕ್ಸ್ ಅಪಾಯಕ್ಕೆ ಆಹ್ವಾನ

    ಗುರುಪುರ: ಹೆದ್ದಾರಿ, ರಸ್ತೆಗಳಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್ ಹಾವಳಿ ವ್ಯಾಪಕವಾಗಿದ್ದು, ರಾಷ್ಟ್ರೀಯ ಹೆದ್ದಾರಿ ಪಕ್ಕ ಅನಧಿಕೃತವಾಗಿ ಅಳವಡಿಸಲಾದ ಫ್ಲೆಕ್ಸ್‌ಗಳು ಅಪಘಾತಕ್ಕೆ ದಾರಿ ಮಾಡಿಕೊಡುತ್ತಿವೆ.

    ಕುಲಶೇಖರದಿಂದ ಮೂಡುಬಿದಿರೆವರೆಗೆ ರಾಷ್ಟ್ರೀಯ ಹೆದ್ದಾರಿ ಪಕ್ಕ ಹಲವು ಫ್ಲೆಕ್ಸ್, ಜಾಹೀರಾತು ಫಲಕಗಳು ರಾರಾಜಿಸುತ್ತಿವೆ. ಫ್ಲೆಕ್ಸ್ ಅಳವಡಿಕೆಗೆ ಹೆದ್ದಾರಿ ಇಲಾಖೆಯಿಂದ ಅನುಮತಿ ಪಡೆದಿಲ್ಲ ಎಂಬ ಆರೋಪವಿದೆ. ಗುರುಪುರ ಕೈಕಂಬ ಕಾನ್ವೆಂಟ್ ತಿರುವಿನಲ್ಲಿರುವ ಫ್ಲೆಕ್ಸ್ ಫಲಕಗಳು ಅಪಾಯಕಾರಿಯಾಗಿವೆ. ಕುಲಶೇಖರ, ವಾಮಂಜೂರು, ಕೆತ್ತಿಕಲ್, ಪರಾರಿ, ಗುರುಪುರ, ಕೈಕಂಬ, ಗಂಜಿಮಠ, ಮಿಜಾರು ಪ್ರದೇಶದಲ್ಲಿ ಇದರಿಂದ ಅಪಘಾತಗಳು ಸಂಭವಿಸಿವೆ.

    ತಿರುವುಗಳಲ್ಲೇ ಅಳವಡಿಕೆ: ಹೆದ್ದಾರಿ ತಿರುವುಗಳಲ್ಲಿ ಅಳವಡಿಸಲಾದ ಬೃಹತ್ ಜಾಹೀರಾತು ಫಲಕಗಳು ಹೆಚ್ಚು ಅಪಾಯಕಾರಿ. ಮುಂದಿನಿಂದ ಬರುವ ವಾಹನಗಳು ಸವಾರರಿಗೆ ಕಾಣದೆ ಅಪಘಾತ ಉಂಟಾಗುವ ಸಾಧ್ಯತೆ ಹೆಚ್ಚಿದೆ.

    ಹೆದ್ದಾರಿಯಲ್ಲಿ ಜಾಹೀರಾತು ಫ್ಲೆಕ್ಸ್ ಅಳವಡಿಸುವಂತಿಲ್ಲ. ಹೆದ್ದಾರಿ ಪಕ್ಕ ವ್ಯಾಣಿಜ್ಯೋದ್ಯಮಗಳ ಫ್ಲೆಕ್ಸ್ ಅಳವಡಿಸಲು ಪರವಾನಗಿ ನೀಡುವ ಅಧಿಕಾರ ಸ್ಥಳೀಯ ಗ್ರಾಪಂ ಆಡಳಿತಕ್ಕೆ ಇಲ್ಲ. ಕೆಲವು ಖಾಸಗಿ ಸಂಸ್ಥೆಯವರು ಅನಧಿಕೃತ ಫ್ಲೆಕ್ಸ್ ಅಳವಡಿಸಿದ್ದಾರೆ. ಅವುಗಳ ತೆರವು ನಿಟ್ಟಿನಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಯುತ್ತಿದ್ದು, ಜಿಲ್ಲಾಧಿಕಾರಿ ಗಮನ ಸೆಳೆಯಲಾಗಿದೆ. ಗ್ರಾಮ ಪಂಚಾಯತಿ ಪಿಡಿಒ ಮತ್ತು ಆಡಳಿತಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದೇವೆ.
    ಮುರುಗೇಶ್
    ರಾಷ್ಟ್ರೀಯ ಹೆದ್ದಾರಿ ಮಂಗಳೂರು ವಿಭಾಗ ಸಹಾಯಕ ಇಂಜಿನಿಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts