More

    ಜಾತಿ ಕಾಲಂ ರದ್ದು ಮಾಡಿ, ಎಲ್ಲರಿಗೂ ಸಂಸ್ಕೃತ ಕಲಿಸಿ

    ಉಡುಪಿ: ಸರ್ಕಾರಕ್ಕೆ ಜಾತಿ ಪದ್ಧತಿ ನಿವಾರಣೆಯಾಗಬೇಕು ಎಂಬ ಇಚ್ಛೆ ಇದ್ದರೆ ದಾಖಲೆಗಳಲ್ಲಿ ಜಾತಿ ಕಾಲಂ ರದ್ದು ಮಾಡಬೇಕು. ಜತೆಗೆ ಎಲ್ಲರಿಗೂ ಸಂಸ್ಕೃತವನ್ನು ಕಲಿಸುವ ಕಾರ್ಯವಾಗಬೇಕು. ಇದರಿಂದ ಶಾಸ್ತ್ರಗಳಲ್ಲಿ ಏನಿದೆ ಎಂಬುದನ್ನು ಜನರು ಸ್ವತಃ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ರಾಜಕೀಯ ಉದ್ದೇಶದ ಮಾತುಗಳನ್ನು ಪರಿಶೀಲನೆ ಮಾಡಲು ಇದು ಸಕಾಲ ಎಂದು ಪರ್ಯಾಯ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಹೇಳಿದರು.

    ರಥಬೀದಿ ಕನಕ ಗುಡಿ ಮುಂಭಾಗ ಕೃಷ್ಣ ಮಠ ಹಾಗೂ ಪರ್ಯಾಯ ಅದಮಾರು ಮಠ ಆಶ್ರಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಾಮರಸ್ಯ ಗತಿವಿಧಿ ವತಿಯಿಂದ ಆಯೋಜಿಸಿದ್ದ ಕನಕದಾಸ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಕೃಷ್ಣ ಮಠದಲ್ಲಿ ಕನಕದಾಸರ ಹೆಸರಿನಲ್ಲಿ ನೈವೇದ್ಯ ನೀಡಲಾಗುತ್ತಿದೆ. ಅವರ ‘ಈಶ ನಿನ್ನ ಚರಣ ಭಜನೆ’ ಹಾಡು ತುಳುನಾಡಿನ ಮನೆಮನೆಗಳಲ್ಲಿ ಹಾಡಲಾಗುತ್ತಿದೆ. ಈ ಮೂಲಕ ಕನಕದಾಸರಿಗೆ ಅಗ್ರಮಾನ್ಯ ಸ್ಥಾನ ನೀಡಲಾಗಿದೆ. ಕನಕ ಜಯಂತಿ ಆಚರಣೆ ಒಂದು ದಿನಕ್ಕೆ ಸೀಮಿತಗೊಳ್ಳದೆ ಪ್ರತಿನಿತ್ಯ ಅವರ ಸಾಹಿತ್ಯ ಅಧ್ಯಯನ ಮಾಡುವುದರಿಂದ ಅರ್ಥಪೂರ್ಣವಾಗಿ ಆಚರಿಸಬೇಕು ಎಂದರು.

    ಕನ್ನಡಕ್ಕೆ ಗೌರವ: ತುಳುನಾಡಿನಲ್ಲಿ ಕನ್ನಡವನ್ನು ಉಳಿಸುವ ಕಾರ್ಯವನ್ನು ಸ್ವಯಂಪ್ರೇರಣೆಯಿಂದ ಜನರು ಮಾಡುತ್ತಿದ್ದಾರೆ. ದಾಸ ಪರಂಪರೆ ಇದಕ್ಕೆ ಮಹತ್ವ ಕೊಡುಗೆ ನೀಡಿದೆ. ರಾಜಾಂಗಣದಲ್ಲಿ ನಡೆಯುವ ಶೇ.99ರಷ್ಟು ಕಾರ್ಯಕ್ರಮ ಕನ್ನಡದಲ್ಲೇ ನಡೆಯುತ್ತಿದೆ ಎಂದು ಈಶಪ್ರಿಯ ತೀರ್ಥ ಶ್ರೀಗಳು ನಾಮಫಲಕ ವಿವಾದದ ಬಗ್ಗೆ ಸ್ಪಷ್ಟೀಕರಣ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts