More

    ಇಬ್ಬರು ಉಗ್ರವಾದಿಗಳನ್ನು ಸದೆಬಡಿದ ಜಮ್ಮು ಕಾಶ್ಮೀರ ಪೊಲೀಸರು

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಮತ್ತು ಬಂಡಿಪೋರ ಜಿಲ್ಲೆಗಳಲ್ಲಿ ನಡೆದ ಭದ್ರತಾ ಕಾರ್ಯಾಚರಣೆಗಳಲ್ಲಿ ಇಬ್ಬರು ಉಗ್ರವಾದಿಗಳನ್ನು ಸದೆಬಡಿಯಲಾಗಿದೆ. ಈ ಮೃತ ಉಗ್ರವಾದಿಗಳಲ್ಲಿ ಒಬ್ಬ ಇತ್ತೀಚಿಗೆ ವರದಿಯಾಗಿದ್ದ ನಾಗರಿಕ ಹತ್ಯೆಗೆ ಕಾರಣನಾಗಿದ್ದ ಇಮ್ತಿಯಾಜ್​ ಅಹ್ಮದ್​ ದರ್​ ಎಂಬ ಎಲ್​ಇಟಿ ಉಗ್ರವಾದಿ ಎಂದು ಗುರುತಿಸಲಾಗಿದೆ.

    ಇಂದು ಬೆಳಿಗ್ಗೆ ಬಂಡಿಪೋರ ಜಿಲ್ಲೆಯ ಗುಂದ್​ಜಹಂಗೀರ್​ ಎಂಬಲ್ಲಿ ಉಗ್ರವಾದಿಗಳ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಮೃತನಾದ ಇಮ್ತಿಯಾಜ್​, ಎಲ್​ಇಟಿಯ ‘ದ ರೆಸಿಸ್ಟೆನ್ಸ್​ ಫ್ರಂಟ್’​ ಉಗ್ರವಾದಿ ಗುಂಪಿಗೆ ಸೇರಿದವನಾಗಿದ್ದು, ಬಂಡಿಪೋರದ ಶಹಗುಂದ್​ ಪ್ರದೇಶದಲ್ಲಿ ನಡೆದಿದ್ದ ಹತ್ಯಾಕಾಂಡದಲ್ಲಿ ಭಾಗವಹಿಸಿದ್ದ ಎಂದು ಕಾಶ್ಮೀರ ಐಜಿಪಿ ವಿಜಯ್ ಕುಮಾರ್​ ಟ್ವೀಟ್ ಮಾಡಿ ತಿಳಿಸಿದ್ದಾರೆ.

    ಇದನ್ನೂ ಓದಿ: ಕುಡಿವ ನೀರಲ್ಲಿ ಸತ್ತ ಮಹಿಳೆ ಕಾಲು ಪತ್ತೆ: ದೇಹದ ಉಳಿದ ಭಾಗವೆಲ್ಲಿ? ಖಾಕಿಗೆ ಕಗ್ಗಂಟಾದ ಕೇಸ್​

    ಅನಂತನಾಗ್​ ಜಿಲ್ಲೆಯ ವೆರಿನಾಗ್ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಮತ್ತೊಬ್ಬ ಆತಂಕವಾದಿ ಹತನಾಗಿದ್ದಾನೆ. ಈ ಕಾರ್ಯಾಚರಣೆಯಲ್ಲಿ ಪೊಲೀಸ್​ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದಾರೆ. ಒಂದು ಪಿಸ್ತೂಲ್ ಮತ್ತು ಹ್ಯಾಂಡ್​ ಗ್ರೆನೇಡ್​ಅನ್ನು ಸ್ಥಳದಿಂದ ಜಪ್ತಿಪಡಿಸಿಕೊಳ್ಳಲಾಗಿದೆ. (ಏಜೆನ್ಸೀಸ್)

    ಸರಗಳ್ಳನನ್ನು ಬೆನ್ನಟ್ಟಿ ಹೋಗಿ ಹಿಡಿದ ಆಟೋ ಡ್ರೈವರ್

    ಮೇಡ್​ ಇನ್​ ಚೈನಾ ಕಾರನ್ನು ಭಾರತದಲ್ಲಿ ಮಾರಬೇಡಿ ಅಂತ ಟೆಸ್ಲಾಗೆ ಹೇಳಿದೀನಿ – ಸಾರಿಗೆ ಸಚಿವ ನಿತಿನ್ ಗಡ್ಕರಿ

    ಟಾಟಾ ಕಂಪೆನಿ ತೆಕ್ಕೆಗೆ ಏರ್​ ಇಂಡಿಯಾ; ಖರೀದಿ ಬೆಲೆ ಎಷ್ಟು ಗೊತ್ತಾ?

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts