ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಮತ್ತು ಬಂಡಿಪೋರ ಜಿಲ್ಲೆಗಳಲ್ಲಿ ನಡೆದ ಭದ್ರತಾ ಕಾರ್ಯಾಚರಣೆಗಳಲ್ಲಿ ಇಬ್ಬರು ಉಗ್ರವಾದಿಗಳನ್ನು ಸದೆಬಡಿಯಲಾಗಿದೆ. ಈ ಮೃತ ಉಗ್ರವಾದಿಗಳಲ್ಲಿ ಒಬ್ಬ ಇತ್ತೀಚಿಗೆ ವರದಿಯಾಗಿದ್ದ ನಾಗರಿಕ ಹತ್ಯೆಗೆ ಕಾರಣನಾಗಿದ್ದ ಇಮ್ತಿಯಾಜ್ ಅಹ್ಮದ್ ದರ್ ಎಂಬ ಎಲ್ಇಟಿ ಉಗ್ರವಾದಿ ಎಂದು ಗುರುತಿಸಲಾಗಿದೆ.
ಇಂದು ಬೆಳಿಗ್ಗೆ ಬಂಡಿಪೋರ ಜಿಲ್ಲೆಯ ಗುಂದ್ಜಹಂಗೀರ್ ಎಂಬಲ್ಲಿ ಉಗ್ರವಾದಿಗಳ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಮೃತನಾದ ಇಮ್ತಿಯಾಜ್, ಎಲ್ಇಟಿಯ ‘ದ ರೆಸಿಸ್ಟೆನ್ಸ್ ಫ್ರಂಟ್’ ಉಗ್ರವಾದಿ ಗುಂಪಿಗೆ ಸೇರಿದವನಾಗಿದ್ದು, ಬಂಡಿಪೋರದ ಶಹಗುಂದ್ ಪ್ರದೇಶದಲ್ಲಿ ನಡೆದಿದ್ದ ಹತ್ಯಾಕಾಂಡದಲ್ಲಿ ಭಾಗವಹಿಸಿದ್ದ ಎಂದು ಕಾಶ್ಮೀರ ಐಜಿಪಿ ವಿಜಯ್ ಕುಮಾರ್ ಟ್ವೀಟ್ ಮಾಡಿ ತಿಳಿಸಿದ್ದಾರೆ.
ಇದನ್ನೂ ಓದಿ: ಕುಡಿವ ನೀರಲ್ಲಿ ಸತ್ತ ಮಹಿಳೆ ಕಾಲು ಪತ್ತೆ: ದೇಹದ ಉಳಿದ ಭಾಗವೆಲ್ಲಿ? ಖಾಕಿಗೆ ಕಗ್ಗಂಟಾದ ಕೇಸ್
ಅನಂತನಾಗ್ ಜಿಲ್ಲೆಯ ವೆರಿನಾಗ್ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಮತ್ತೊಬ್ಬ ಆತಂಕವಾದಿ ಹತನಾಗಿದ್ದಾನೆ. ಈ ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದಾರೆ. ಒಂದು ಪಿಸ್ತೂಲ್ ಮತ್ತು ಹ್ಯಾಂಡ್ ಗ್ರೆನೇಡ್ಅನ್ನು ಸ್ಥಳದಿಂದ ಜಪ್ತಿಪಡಿಸಿಕೊಳ್ಳಲಾಗಿದೆ. (ಏಜೆನ್ಸೀಸ್)
ಸರಗಳ್ಳನನ್ನು ಬೆನ್ನಟ್ಟಿ ಹೋಗಿ ಹಿಡಿದ ಆಟೋ ಡ್ರೈವರ್
ಮೇಡ್ ಇನ್ ಚೈನಾ ಕಾರನ್ನು ಭಾರತದಲ್ಲಿ ಮಾರಬೇಡಿ ಅಂತ ಟೆಸ್ಲಾಗೆ ಹೇಳಿದೀನಿ – ಸಾರಿಗೆ ಸಚಿವ ನಿತಿನ್ ಗಡ್ಕರಿ
ಟಾಟಾ ಕಂಪೆನಿ ತೆಕ್ಕೆಗೆ ಏರ್ ಇಂಡಿಯಾ; ಖರೀದಿ ಬೆಲೆ ಎಷ್ಟು ಗೊತ್ತಾ?