ಗುರುಗ್ರಾಮ: ರಸ್ತೆಯಲ್ಲಿ ಅಡ್ಡಗಟ್ಟಿ ಬೆದರಿಸಿ ಹಣ-ಆಭರಣ ಕಿತ್ತೊಯ್ಯುವುದು ಹೊಸದೇನಲ್ಲ. ಆದರೆ ಇಲ್ಲೊಂದಿಬ್ಬರು ದುಷ್ಕರ್ಮಿಗಳು ಹೆದ್ದಾರಿಯಲ್ಲೇ ಅಡ್ಡಗಟ್ಟಿದ್ದಲ್ಲದೆ, ಗನ್ ತೋರಿಸಿ ಬೆದರಿಸಿ, ಗುತ್ತಿಗೆದಾರರೊಬ್ಬರ ಕಾರನ್ನೇ ಚಲಾಯಿಸಿಕೊಂಡು ಪರಾರಿಯಾಗಿದ್ದಾರೆ.
ಇಂಥದ್ದೊಂದು ಘಟನೆ ಭಾನುವಾರ ರಾತ್ರಿ ದೆಹಲಿಯ ಗುರುಗ್ರಾಮದ ದ್ವಾರಕಾ ಎಕ್ಸ್ಪ್ರೆಸ್ ಹೆದ್ದಾರಿಯ ಧನ್ಕೋಟ್ ಗ್ರಾಮದಲ್ಲಿ ನಡೆದಿದೆ. ಗುರುಗ್ರಾಮದ ರೋಹ್ಟಕ್ ಸೆಕ್ಟರ್-15ರಲ್ಲಿ ನೆಲೆಸಿರುವ ಗುತ್ತಿಗೆದಾರ ನವೀನ್ ಕುಮಾರ್ ಎಂಬವರಿಗೆ ಕಾರು ಸೇರಿದೆ.
ಇದನ್ನೂ ಓದಿ: ಮಲತಾಯಿಯನ್ನೇ ರೇಪ್ ಮಾಡಿದ ಕಾಮುಕ ಮಗ! ವಿಚಾರ ಹೊರಬರದಿರುವಂತೆ ನೋಡಿಕೋ ಎಂದ ಕುಟುಂಬಸ್ಥರು!
ಭಾನುವಾರ ರಾತ್ರಿ ಗುರುಗ್ರಾಮದಿಂದ ರೋಹ್ಟಕ್ಗೆ ಕಾರಿನಲ್ಲಿ ಬರುತ್ತಿದ್ದಾಗ ದಾರಿಮಧ್ಯೆ ಕಾರು ನಿಲ್ಲಿಸಿದ್ದಾಗ ಎದುರಾದ ಇಬ್ಬರು ಅಪರಿಚಿತರು, ಗನ್ ತೋರಿಸಿ ಬೆದರಿಸಿ ಕೀ ಕಿತ್ತುಕೊಂಡು ಹ್ಯುಂಡೈ ಕ್ರೇಟಾ ಕಾರ್ ಚಲಾಯಿಸಿಕೊಂಡು ಪರಾರಿಯಾಗಿದ್ದಾರೆ ಎಂದು ನವೀನ್ ಪೊಲೀಸರಿಗೆ ತಿಳಿಸಿದ್ದಾರೆ. ನವೀನ್ ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ. (ಏಜೆನ್ಸೀಸ್)
ಬಾಬಾ ಕಾ ಡಾಬಾ ಈಗ ಸಣ್ಣ ಅಂಗಡಿಯಲ್ಲ, ದೊಡ್ಡ ರೆಸ್ಟೋರೆಂಟ್! ಇವೆಲ್ಲ ಸೋಶಿಯಲ್ ಮೀಡಿಯಾ ಎಫೆಕ್ಟ್!
20 ಮಂದಿ ಬರಬೇಕಾದ ಮದುವೆಗೆ ಬಂದದ್ದು 10 ಸಾವಿರ! ಈಗ ಈ ಕುತೂಹಲದ ಮದುವೆಯದ್ದೇ ಚರ್ಚೆ
‘ಎಂಆರ್’ ನಿಲ್ಲುವುದಿಲ್ಲ … ಚಿತ್ರ ಮುಂದುವರೆಸಲು ರವಿ ಶ್ರೀವತ್ಸ ನಿರ್ಧಾರ