More

    ಹೆದ್ದಾರಿಯಲ್ಲೇ ಅಡ್ಡಗಟ್ಟಿದರು.. ಗನ್​ ತೋರಿಸಿ ಬೆದರಿಸಿ ಕಾರನ್ನೇ ಕೊಂಡೊಯ್ದರು..!

    ಗುರುಗ್ರಾಮ: ರಸ್ತೆಯಲ್ಲಿ ಅಡ್ಡಗಟ್ಟಿ ಬೆದರಿಸಿ ಹಣ-ಆಭರಣ ಕಿತ್ತೊಯ್ಯುವುದು ಹೊಸದೇನಲ್ಲ. ಆದರೆ ಇಲ್ಲೊಂದಿಬ್ಬರು ದುಷ್ಕರ್ಮಿಗಳು ಹೆದ್ದಾರಿಯಲ್ಲೇ ಅಡ್ಡಗಟ್ಟಿದ್ದಲ್ಲದೆ, ಗನ್ ತೋರಿಸಿ ಬೆದರಿಸಿ, ಗುತ್ತಿಗೆದಾರರೊಬ್ಬರ ಕಾರನ್ನೇ ಚಲಾಯಿಸಿಕೊಂಡು ಪರಾರಿಯಾಗಿದ್ದಾರೆ.

    ಇಂಥದ್ದೊಂದು ಘಟನೆ ಭಾನುವಾರ ರಾತ್ರಿ ದೆಹಲಿಯ ಗುರುಗ್ರಾಮದ ದ್ವಾರಕಾ ಎಕ್ಸ್​ಪ್ರೆಸ್​ ಹೆದ್ದಾರಿಯ ಧನ್​ಕೋಟ್​ ಗ್ರಾಮದಲ್ಲಿ ನಡೆದಿದೆ. ಗುರುಗ್ರಾಮದ ರೋಹ್ಟಕ್​ ಸೆಕ್ಟರ್-15ರಲ್ಲಿ ನೆಲೆಸಿರುವ ಗುತ್ತಿಗೆದಾರ ನವೀನ್​ ಕುಮಾರ್ ಎಂಬವರಿಗೆ ಕಾರು ಸೇರಿದೆ.

    ಇದನ್ನೂ ಓದಿ: ಮಲತಾಯಿಯನ್ನೇ ರೇಪ್​ ಮಾಡಿದ ಕಾಮುಕ ಮಗ! ವಿಚಾರ ಹೊರಬರದಿರುವಂತೆ ನೋಡಿಕೋ ಎಂದ ಕುಟುಂಬಸ್ಥರು!

    ಭಾನುವಾರ ರಾತ್ರಿ ಗುರುಗ್ರಾಮದಿಂದ ರೋಹ್ಟಕ್​ಗೆ ಕಾರಿನಲ್ಲಿ ಬರುತ್ತಿದ್ದಾಗ ದಾರಿಮಧ್ಯೆ ಕಾರು ನಿಲ್ಲಿಸಿದ್ದಾಗ ಎದುರಾದ ಇಬ್ಬರು ಅಪರಿಚಿತರು, ಗನ್​ ತೋರಿಸಿ ಬೆದರಿಸಿ ಕೀ ಕಿತ್ತುಕೊಂಡು ಹ್ಯುಂಡೈ ಕ್ರೇಟಾ ಕಾರ್ ಚಲಾಯಿಸಿಕೊಂಡು ಪರಾರಿಯಾಗಿದ್ದಾರೆ ಎಂದು ನವೀನ್​ ಪೊಲೀಸರಿಗೆ ತಿಳಿಸಿದ್ದಾರೆ. ನವೀನ್ ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ. (ಏಜೆನ್ಸೀಸ್​)

    ಬಾಬಾ ಕಾ ಡಾಬಾ ಈಗ ಸಣ್ಣ ಅಂಗಡಿಯಲ್ಲ, ದೊಡ್ಡ ರೆಸ್ಟೋರೆಂಟ್​! ಇವೆಲ್ಲ ಸೋಶಿಯಲ್​ ಮೀಡಿಯಾ ಎಫೆಕ್ಟ್​!

    20 ಮಂದಿ ಬರಬೇಕಾದ ಮದುವೆಗೆ ಬಂದದ್ದು 10 ಸಾವಿರ! ಈಗ ಈ ಕುತೂಹಲದ ಮದುವೆಯದ್ದೇ ಚರ್ಚೆ

    ‘ಎಂಆರ್’ ನಿಲ್ಲುವುದಿಲ್ಲ … ಚಿತ್ರ ಮುಂದುವರೆಸಲು ರವಿ ಶ್ರೀವತ್ಸ ನಿರ್ಧಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts