ನವದೆಹಲಿ: ದೇಶಾದ್ಯಂತ ಹಠಾತ್ ಹೃದಯಾಘಾತ ಪ್ರಕರಣಗಳ ಸರಣಿ ಮುಂದುವರಿದಿದ್ದು, ಆ ಪಟ್ಟಿಗೆ ಇನ್ನಿಬ್ಬರ ಸೇರ್ಪಡೆಯಾಗಿದೆ. ಇಬ್ಬರು ಯುವಕರು ಕ್ರಿಕೆಟ್ ಆಡುವಾಗ ಹಠಾತ್ ಹೃದಯಾಘಾತಕ್ಕೆ ಒಳಗಾಗಿ ಕುಸಿದು ಬಿದ್ದು ಸಾವಿಗೀಡಾಗಿದ್ದಾರೆ.
ಪ್ರಶಾಂತ್ ಕಾಂತಿಭಾಯ್ ಭರೋಲಿಯಾ (27) ಮತ್ತು ಜಿಗ್ನೇಶ್ ಚೌಹಾನ್ (31) ಸಾವಿಗೀಡಾದವರು. ಈ ಪೈಕಿ ಒಬ್ಬರು ಸೂರತ್ನವರು, ಇನ್ನೊಬ್ಬರು ರಾಜ್ಕೋಟ್ನವರು. ಸೂರತ್ನಲ್ಲಿ ಪ್ರಶಾಂತ್ ಶನಿವಾರ ಕ್ರಿಕೆಟ್ ಆಡಿ ಮುಗಿಸುತ್ತಿದ್ದಂತೆ ಎದೆನೋವಿಗೆ ಒಳಗಾಗಿದ್ದು, ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಬದುಕಿಸಿಕೊಳ್ಳಲು ಆಗಿರಲಿಲ್ಲ.
ಇದನ್ನೂ ಓದಿ: ಊಟ ಮಾಡುತ್ತಲೇ ಕುಸಿದು ಬಿದ್ದು ಸಾವಿಗೀಡಾದ ನೌಕರ; ಸಿಸಿಟಿವಿಯಲ್ಲಿ ದೃಶ್ಯ ದಾಖಲು
ಜಿಗ್ನೇಶ್ ಚೌಹಾಣ್ ರಾಜ್ಕೋಟ್ನ ಮಾಧವರಾವ್ ಸಿಂಘ್ಯಾ ಮೈದಾನದಲ್ಲಿ ಭಾನುವಾರ ಕ್ರಿಕೆಟ್ ಆಡುತ್ತಿದ್ದಾಗ ಕುಸಿದು ಬಿದ್ದಿದ್ದರು. ಅಂದರೆ ಬ್ಯಾಟಿಂಗ್ ಮಾಡುತ್ತ ಔಟ್ ಆಗಿ ಬಂದು ಕುರ್ಚಿಯಲ್ಲಿ ಕುಳಿತಿದ್ದರು. ನಂತರ ಎದೆನೋವಿನಿಂದ ಬಳಲಿ ಕುಸಿದು ಬಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಿ ಅಸುನೀಗಿದ್ದರು.
ಮಗುವಿಗೆ ಹಾಲು ಕುಡಿಸುತ್ತಿದ್ದ ಬಾಣಂತಿ ಕುಸಿದು ಬಿದ್ದು ಸಾವು!