More

    ತಪ್ಪಿತು ಭಾರಿ ದುರಂತ: ಎಕ್ಸ್​ಪ್ರೆಸ್​ ರೈಲು ಚಲಿಸುತ್ತಿರುವಾಗಲೇ ಕಳಚಿಕೊಂಡವು ಎರಡು ಬೋಗಿ…

    ವಿಜಯಪುರ: ಎಕ್ಸ್​ಪ್ರೆಸ್ ರೈಲು ಚಲಿಸುತ್ತಿರುವಾಗಲೇ ಎರಡು ಬೋಗಿಗಳು ಕಳಚಿಕೊಂಡಿದ್ದರೂ ಅದೃಷ್ಟವಶಾತ್ ಭಾರಿ ದುರಂತವೊಂದು ತಪ್ಪಿಹೋಗಿದೆ. ವಿಜಯಪುರದ ವಜ್ರ ಹನುಮಾನ ದೇವಸ್ಥಾನದ ಬಳಿ ಈ ಘಟನೆ ಸಂಭವಿಸಿದೆ.

    ಸೊಲ್ಲಾಪುರ ವಿಜಯಪುರ ಮೈಸೂರ ಸಂಪರ್ಕಿಸುವ ಗೋಲಗುಂಬಜ್ ಎಕ್ಸ್​ಪ್ರೆಸ್ ರೈಲಿನಿಂದ ಈ ಬೋಗಿಗಳು ಕಳಚಿಕೊಂಡಿವೆ. ಬೋಗಿಗಳ ನಡುವಿನ ಸಂಪರ್ಕ ಕೊಂಡಿ ತುಂಡಾದ ಕಾರಣ ಬೋಗಿಗಳು ಕಳಚಿಕೊಂಡಿವೆ. ಬೋಗಿಗಳಿಂದ ಬೇರ್ಪಟ್ಟು ಒಂದಷ್ಟು ದೂರ ಹೋದ ಬಳಿಕ ರೈಲು ನಿಂತಿದೆ.

    ಇದನ್ನೂ ಓದಿ: ಸಿಡಿಎಸ್ ಬಿಪಿನ್​ ಸಂಬಂಧಿಕರ ಪೂರ್ವಜರ ಸಮಾಧಿ ಸ್ಥಳಕ್ಕೆ ಹಾನಿ; ರಾವತ್​ ಪತ್ನಿಯ ಸಹೋದರನಿಂದ ಕೇಂದ್ರ ಸರ್ಕಾರದ ವಿರುದ್ಧ ಆರೋಪ

    ಬೋಗಿ ಸಂಪರ್ಕ ಕಡಿದುಕೊಳ್ಳುತ್ತಿದ್ದಂತೆ ಎರಡೂ ಬೋಗಿಗಳಲ್ಲಿದ್ದ ಪ್ರಯಾಣಿಕರು ಕೆಲಕಾಲ ಗಾಬರಿಯಲ್ಲಿದ್ದರು. ಸದ್ಯಕ್ಕೆ ಈ ಮಾರ್ಗದಲ್ಲಿ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ. ಹೊಸ ಕೊಂಡಿ ಹಾಕಿ ಅಥವಾ ಕಟ್ ಆದ ಕೊಂಡಿ ದುರಸ್ತಿಗೊಳಿಸಿದ ಬಳಿಕ ಈ ರೈಲು ಪ್ರಯಾಣ ಮುಂದುವರಿಯಲಿದೆ. ಕಳಚಿಕೊಂಡಿರುವ ಬೋಗಿಗಳನ್ನು ನೋಡಲು ಜನರು ಜಮಾಯಿಸಿದ್ದು, ಸ್ಥಳಕ್ಕೆ ರೇಲ್ವೆ‌ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

    ಇದು ‘ಎಣ್ಣೆ-ಏಟು’: ಪಾನಮತ್ತ ಚಾಲಕ, ಕೋಪೋದ್ರಿಕ್ತ ಮಾಲೀಕ; ಮುಂದಾಗಿದ್ದೆಲ್ಲ ವೈರಲ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts