ಬೆಂಗಳೂರು: ಯುವತಿಯೊಬ್ಬಳ ವಿಚಾರದಲ್ಲಿ ಕಿತ್ತಾಡಿಕೊಂಡ ಕಾಲೇಜು ಸಹಪಾಠಿಗಳಿಬ್ಬರು, ಕೊನೆಗೆ ಒಬ್ಬನನ್ನು ಇನ್ನೊಬ್ಬ ಕೊಲೆ ಮಾಡುವ ಮಟ್ಟಿಗೆ ಹೋಗಿದೆ. ರಾಜಧಾನಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಹಾಡಹಗಲೇ ಕೊಲೆಯೊಂದು ನಡೆದು ಹೋಗಿದೆ.
ಬೆಂಗಳೂರಿನ ಲಾಲ್ ಬಹದ್ದೂರ್ ಶಾಸ್ತ್ರಿ ನಗರದಲ್ಲಿ ಈ ಕೊಲೆ ನಡೆದಿದೆ. ಲಿಖಿತ್ ಎಂಬಾತ ಕೊಲೆಯಾದವ. ನಯೀದ್ ಹಾಗೂ ಲಿಖಿತ್ ಎಂಬಿಬ್ಬರು ಕಾಲೇಜು ಸಹಪಾಠಿಗಳಾಗಿದ್ದು, ಯುವತಿಯೊಬ್ಬಳ ವಿಚಾರವಾಗಿ ವೈಮನಸ್ಸು ಹೊಂದಿದ್ದರು.
ಇದನ್ನೂ ಓದಿ: ಮೈಮನ ಪುಳಕಗೊಳಿಸುವ ಚಾರಣ: ಎಲ್ಲಿ, ಹೇಗೆ? ಏನಿರಬೇಕು, ಯಾರಿರಬಾರದು..; ಇಲ್ಲಿದೆ ಮಾಹಿತಿಗಳ ಸಂಪೂರ್ಣ ಹೂರಣ.
ಆ ಯುವತಿಯ ವಿಚಾರವಾಗಿ ಮಾತನಾಡಲು ಲಿಖಿತ್ ತನ್ನ ಸಹಪಾಠಿ ನಯೀದ್ನನ್ನು ಬರಲು ಹೇಳಿದ್ದ. ಈ ಸಂದರ್ಭದಲ್ಲಿ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ಹೋಗಿತ್ತು. ಈ ಸಂದರ್ಭದಲ್ಲಿ ಲಿಖಿತ್ ಡ್ಯಾಗರ್ನಿಂದ ನಯೀದ್ಗೆ ಇರಿಯಲು ಮುಂದಾಗಿದ್ದು, ಆಗ ಆ ಡ್ಯಾಗರ್ ಕಿತ್ತುಕೊಂಡ ನಯೀದ್ ಲಿಖಿತ್ಗೆ ಚುಚ್ಚಿದ್ದರಿಂದ ಆತ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ ಎನ್ನಲಾಗಿದೆ. ಸ್ಥಳಕ್ಕೆ ಎಚ್ಎಎಲ್ ಪೊಲೀಸರು ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರಾಜಧಾನಿಯ ನಿದ್ದೆ ಕೆಡಿಸಿದ ಕಟ್ಟಡ ಕುಸಿತ; ಬೆಂಗಳೂರಿನಲ್ಲಿ ಕುಸಿದು ಬಿತ್ತು ಮೂರು ಮಹಡಿಯ ಬಿಲ್ಡಿಂಗ್..