ಖಮ್ಮಮ್: ವಿದ್ಯುತ್ ಶಾಕ್ನಿಂದ ಹಸು ಕಳೆದುಕೊಂಡ ರೈತನಿಗೆ ಪರಿಹಾರವಾಗಿ 90 ಸಾವಿರ ರೂಪಾಯಿ ನೀಡುವಂತೆ ಗ್ರಾಹಕ ವಿವಾದ ಪರಿಹಾರ ಆಯೋಗವು ತೆಲಂಗಾಣ ರಾಜ್ಯ ಉತ್ತರ ವಿದ್ಯುತ್ ವಿತರಣಾ ಕಂಪನಿ ಲಿಮಿಟೆಡ್ (ಟಿಎಸ್ಎನ್ಪಿಡಿಸಿಎಲ್)ಗೆ ನಿರ್ದೇಶಿಸಿದೆ.
ಖಮ್ಮಮ್ ಜಿಲ್ಲೆಯ ಚಿಂತಕನಿ ಮಂಡಲದ ರೆಪಲ್ಲಿ ವಾಡ್ಡ ಗ್ರಾಮದ ರೈತ ವೆಂಕಟೇಶ್ವರಲು, ಮೇ 19ರಂದು ತನ್ನ ಮೂರು ಹಸುಗಳು ಮತ್ತು ಐದು ಎಮ್ಮೆಗಳನ್ನು ಮೈದಾನಕ್ಕೆ ಮೇಯಿಸಲು ಕರೆದೊಯ್ದಿದ್ದರು. ಇವುಗಳಲ್ಲಿ ಒಂದು ಹಸು ವಿದ್ಯುತ್ ತಂತಿಗೆ ಸಿಲುಕಿ ಶಾಕ್ನಿಂದ ಮೃತಪಟ್ಟಿತ್ತು.
ಇದಕ್ಕೂ ಮುನ್ನ ವಿದ್ಯುತ್ ತಂತಿಗಳು ಒಂದು ಅಡಿ ಎತ್ತರಕ್ಕೆ ನೇತಾಡುತ್ತಿವೆ. ತಕ್ಷಣ ವಿದ್ಯುತ್ ಸ್ಥಗಿತಗೊಳಿಸುವಂತೆ ಟಿಎಸ್ಎನ್ಪಿಡಿಸಿಎಲ್ ಗೆ ವೆಂಕಟೇಶ್ವರಲು ಮನವಿ ಮಾಡಿದ್ದ. ಆದರೆ, ವಿದ್ಯುತ್ ಸ್ಥಗಿತಗೊಂಡಿರಲಿಲ್ಲ. ಇದಾದ ಬಳಿಕ ಚಿಂತಕನಿ ಪೊಲೀಸ್ ಠಾಣೆಗೆ ರೈತ ದೂರು ನೀಡಿದ್ದ. ಪ್ರಕರಣವು ದಾಖಲಾಗಿತ್ತು. ಮೃತಪಟ್ಟು ಹಸು ವಿದ್ಯುತ್ ಶಾಕ್ನಿಂದ ಸಾವಿಗೀಡಾರುವುದು ಮರಣೋತ್ತರ ಪರೀಕ್ಷೆಯಲ್ಲಿ ದೃಢವಾಗಿತ್ತು.
ಹಸುವಿನ ಬೆಲೆ ಸುಮಾರು 50 ಸಾವಿರ ಇತ್ತು. ಅಲ್ಲದೆ, ದಿನವೊಂದಕ್ಕೆ 8 ಲೀಟರ್ ಹಾಲು ಸಹ ನೀಡುತ್ತಿತ್ತು. ಒಂದು ಹಸುವಿನ ಹಾಲು ಮಾರಿಯೇ ದಿನಕ್ಕೆ 320 ರೂಪಾಯಿ ಸಂಪಾದನೆ ಮಾಡುತ್ತಿದ್ದರು.
ಎಲ್ಟಿ ಲೈನ್ಗೆ ಅಳವಡಿಸಲಾಗಿದ್ದ ಕಂಬವು ಬಿರುಗಾಳಿಯಿಂದ ಹಾನಿಯಾಗಿತ್ತು. ಇದರಿಂದ ನೆಲಕ್ಕೆ ಜೋತುಬಿದ್ದಿತ್ತು. ಹಸು ಮೇಯಲು ಹೋದಾಗ ತಂತಿ ತಗುಲಿ ವಿದ್ಯುತ್ ಶಾಕ್ನಿಂದ ಮೃತಪಟ್ಟಿದೆ ಎಂದು ಟಿಎಸ್ಎನ್ಪಿಡಿಸಿಎಲ್ ಸಮರ್ಥಿಸಿಕೊಂಡಿದೆ.
ಇಬ್ಬರ ವಾದವನ್ನು ಆಲಿಸಿದ ಗ್ರಾಹಕ ವಿವಾದ ಪರಿಹಾರ ಆಯೋಗ, ಬಿರುಗಾಳಿಯ ಪ್ರಭಾವದಿಂದಾಗಿ ವಿದ್ಯುತ್ ಕಂಬಗಳು ಮುರಿದು ರಸ್ತೆಗಳಲ್ಲಿ ಅಥವಾ ಕೃಷಿ ಕ್ಷೇತ್ರಗಳಲ್ಲಿ ವಿದ್ಯುತ್ ತಂತಿಗಳು ಬಿದ್ದರೆ, ಅದರ ಬಗ್ಗೆ ಎಚ್ಚರಿಕೆ ವಹಿಸಿ ನಿರ್ವಹಿಸುವುದು ಅದಕ್ಕೆ ಸಂಬಂಧಿಸಿದ ಸಂಸ್ಥೆಯ ಜವಾಬ್ದಾರಿಯಾಗಿರಬೇಕು. ಕೆಲಸಕ್ಕೆ ಸರಿಯಾಗಿ ಹಾಜರಾಗಿ, ವಿದ್ಯತ್ ತಂತಿಗಳನ್ನು ಭದ್ರಪಡಿಸಿ, ಜನರು ಮತ್ತು ಪ್ರಾಣಿಗಳ ಪ್ರಾಣ ಉಳಿಸಬೇಕು ಎಂದಿದೆ.
ದೂರುದಾರನು ತನ್ನ ಹಸುಗಳನ್ನು ತನ್ನ ಮನೆಯಿಂದ ದೂರದಲ್ಲಿರುವ ಹೊಲದಲ್ಲಿ ಗಮನಿಸದೇ ಬಿಟ್ಟಿದ್ದಾನೆ. ತನ್ನ ಹಸುಗಳ ಬಗ್ಗೆ ಕಾಳಜಿ ವಹಿಸಿದ್ದರೆ ಅಪಘಾತ ಸಂಭವಿಸುತ್ತಿರಲಿಲ್ಲ ಎಂದು ಟಿಎಸ್ಎನ್ಪಿಡಿಸಿಎಲ್ ಸಮರ್ಥನೆ ನೀಡಿದ್ದು, ಇದಕ್ಕೆ ಉತ್ತರಿಸಿರುವ ಆಯೋಗ, ಘಟನೆಯ ಸಮಯದಲ್ಲಿ ದೂರುದಾರರು ಇರಲಿಲ್ಲ ಎಂಬುದಕ್ಕೆ ಯಾವುದೇ ಪುರಾವೆಗಳನ್ನು ನೀವು ಸಲ್ಲಿಸಿಲ್ಲ ಎಂದು ಹೇಳಿತು.
ವಿದ್ಯುತ್ ಕಂಪನಿಯ ನಿರ್ಲಕ್ಷ್ಯದಿಂದ ಜೀವನಕ್ಕೆ ಆಧಾರವಾಗಿದ್ದ ಹಸುವನ್ನು ರೈತ ಕಳೆದುಕೊಂಡಿದ್ದಾನೆ. ಇದಕ್ಕೆ ಪರಿಹಾರವಾಗಿ 90 ಸಾವಿರ ರೂ. ನೀಡಲು ಆಯೋಗ ಆದೇಶಿಸಿದೆ. (ಏಜೆನ್ಸೀಸ್)
ಬೆಡ್ರೂಮ್ಗೆ ಬಂದ ಏಲಿಯನ್: ಪುರುಷನಿಗಿಂತಲೂ ಇವೇ ಬೆಸ್ಟ್- ವಿಚಿತ್ರ ಅನುಭವ ಬಿಚ್ಚಿಟ್ಟ ನಟಿ!
ಅತ್ಯಾಚಾರ ಪ್ರಕರಣ ಹೆಚ್ಚಾಗಲು ಮಹಿಳೆಯರ ಉಡುಗೆಯೇ ಕಾರಣ: ಪಾಕ್ ಪ್ರಧಾನಿ ಇಮ್ರಾನ್ ಖಾನ್
ಲವರ್ ಜತೆಗೂಡಿ ಗಂಡನ ಕೊಲೆ: ಭಯಾನಕ ರಸಹ್ಯ ಬಿಚ್ಚಿಟ್ಟ ಪತ್ನಿಯ ಗೂಗಲ್ ಸರ್ಚ್ ಹಿಸ್ಟರಿ!