ಬೆಂಗಳೂರು:ವಾತಾವರಣದ ಕಾರಣದಿಂದಾಗಿ ಕೆಮ್ಮು, ಜ್ವರ, ನೆಗಡಿ ಕಾಣಿಸಿಕೊಳ್ಳುತ್ತವೆ. ಋತು ಬದಲಾದಾಗ ಜ್ವರ ಮತ್ತು ಶೀತಗಳು ಸಾಮಾನ್ಯವಾಗಿದೆ. ಶೀತ ಗಾಳಿಯಿಂದಾಗಿ ಒಣ ಕೆಮ್ಮು ಮತ್ತು ಶೀತವು ಕಿರಿಕಿರಿಯುಂಟುಮಾಡುತ್ತದೆ. ಸಮಯಕ್ಕೆ ಶೀತವನ್ನು ತಡೆಗಟ್ಟಲು ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಕೆಮ್ಮು ಮತ್ತು ನೆಗಡಿಗೆ ವೈದ್ಯರ ಬಳಿ ಹೋಗುವ ಮೊದಲು ಮನೆಯಲ್ಲಿರುವ ಕೆಲವು ವಸ್ತುಗಳನ್ನು ಬಳಸಿಕೊಂಡು ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.
1) ಅರಿಶಿನ ಬೆರೆಸಿದ ಹಾಲನ್ನು ದಿನವೂ ಕುಡಿಯಬೇಕು. ರಾತ್ರಿ ಮಲಗುವ ಮುನ್ನ ಒಂದು ಲೋಟ ಬೆಚ್ಚಗಿನ ಅರಿಶಿನ ಹಾಲನ್ನು ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
2) ಒಂದು ಲೋಟ ನೀರನ್ನು ಚೆನ್ನಾಗಿ ಕುದಿಸಿ, ಅದಕ್ಕೆ ಚಹಾ ಪುಡಿಯನ್ನು ಸೇರಿಸಿ. ನಂತರ ಸೋಸಿಕೊಂಡು, ಜೇನುತುಪ್ಪವನ್ನು ಮಿಶ್ರಣ ಮಾಡಿ ಕುಡಿಯಿರಿ. ಕೆಮ್ಮು ಶಮವಾಗುತ್ತದೆ.
3) ಒಂದು ಲೋಟ ನೀರಿಗೆ ತಾಜಾ ಶುಂಠಿಯ ಚೂರುಗಳನ್ನು ಹಾಕಿ ಚೆನ್ನಾಗಿ ಕುದಿಸಿ. ಜೇನುತುಪ್ಪವನ್ನು ನೀವು ಸೇರಿಸಿ ಕುಡಿಯಬಹುದು. ಕೆಮ್ಮನ್ನು ತಕ್ಷಣ ಹೊಡೆದೋಡಿಸಲು ಸಹಾಯ ಮಾಡುತ್ತದೆ.
4) ಉಪ್ಪು ನೀರಿಗೆ ಸ್ವಲ್ಪ ಅರಿಶಿಣವನ್ನು ಮಿಶ್ರಣ ಮಾಡಿ ಮುಕ್ಕಳಿಸುವುದರಿಂದ ಗಂಟಲಿನಲ್ಲಿರುವ ಕಫ ಕಡಿಮೆ ಮಾಡುತ್ತದೆ.
5) ಒಂದು ಲೋಟ ನೀರಿಗೆ ಚಹಾ ಪುಡಿ, ಒಂದು ಚಿಟಿಕೆ ದಾಲ್ಚಿನ್ನಿ ಪುಡಿ ಸೇರಿಸಿ ಚೆನ್ನಾಗಿ ಕುದಿಸಿ. ನಂತರ ಜೇನುತುಪ್ಪ ಸೇರಿಸಿ ಕುಡಿದರೆ ಇದು ನೆಗಡಿಯಿಂದ ಉಪಶಮನವನ್ನು ನೀಡುವುದು ಮಾತ್ರವಲ್ಲದೆ ಗಂಟಲಿನ ನೋವಿಗೆ ಕೂಡ ಉತ್ತಮವಾಗಿದೆ.
6) ಬಿಸಿ ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.
ಶೀತ ಮತ್ತು ಕೆಮ್ಮಿನಿಂದ ದೂರವಿರಲು ತ್ವರಿತ ಸಲಹೆಗಳು
- * ಶೀತ ವೈರಸ್ಗಳು ಹರಡುವುದನ್ನು ತಡೆಯಲು ಕನಿಷ್ಠ 20 ಸೆಕೆಂಡುಗಳ ಕಾಲ ನಿಮ್ಮ ಕೈಗಳನ್ನು ಸಾಬೂನು ಮತ್ತು ನೀರಿನಿಂದ ಸರಿಯಾಗಿ ತೊಳೆಯಿರಿ.
- * ನಿಮ್ಮ ಮುಖ, ಕಣ್ಣು, ಮೂಗು ಮುಟ್ಟುವುದನ್ನು ತಪ್ಪಿಸಿ.
- * ನೆಗಡಿ ಮತ್ತು ಕೆಮ್ಮಿನಿಂದ ಬಳಲುತ್ತಿರುವವರಿಂದ 6 ಅಡಿ ಅಂತರ ಕಾಯ್ದುಕೊಳ್ಳಿ.
- * ನೀವು ಮನೆಯಿಂದ ಹೊರಗೆ ಕಾಲಿಟ್ಟಾಗ ನೀವು ಮಾಸ್ಕ್ ಧರಿಸಿ.
- * ನೀರಿನ ಸೇವನೆಯನ್ನು ಹೆಚ್ಚಿಸಿ ಮತ್ತು ಬಿಸಿ ಚಹಾ ಮತ್ತು ದ್ರವಗಳನ್ನು ಸೇವಿಸಿ.
- * ಬಿಸಿನೀರಿನ ಬಟ್ಟಲಿನಲ್ಲಿ 1-2 ಹನಿ ನೀಲಗಿರಿ ಎಣ್ಣೆಯನ್ನು ಸೇರಿಸುವ ಮೂಲಕ ಸ್ಟೀಮ್ ಇನ್ಹಲೇಷನ್ ಮಾಡಿ.
- * ಉಸಿರುಕಟ್ಟಿಕೊಳ್ಳುವ ಮೂಗಿನಿಂದ ಪರಿಹಾರ ಪಡೆಯಲು ದಿನಕ್ಕೆ 2-3 ಬಾರಿ ಪುನರಾವರ್ತಿಸಿ.
- * ವಿಟಮಿನ್ ಸಿ ಸಮೃದ್ಧವಾಗಿರುವ ಸಮತೋಲಿತ ಆಹಾರವನ್ನು ತೆಗೆದುಕೊಳ್ಳುವ ಮೂಲಕ ನಿಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸಿ.
- * ವ್ಯಾಯಾಮ ಅಥವಾ ಯೋಗದಲ್ಲಿ ತೊಡಗಿಸಿಕೊಳ್ಳಿ.
ಮಧ್ಯಾಹ್ನ ಮಲಗುವ ಅಭ್ಯಾಸ ಇದ್ಯಾ? ಹಾಗಿದ್ರೆ ನೀವು ಈ ಬಗ್ಗೆ ತಿಳಿಯುವುದು ಅವಶ್ಯಕ..