ನವದೆಹಲಿ: ಕಾರಿನ ಮೇಲೆ ಟ್ರಕ್ ಕಂಟೈನರ್ ಬಿದ್ದು ಇಬ್ಬರು ದಾರುಣವಾಗಿ ಮೃತಪಟ್ಟಿರುವ ಘಟನೆ ದೆಹಲಿಯ ಲಾಜ್ಪತ್ ನಗರದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ. ಕಾರಿನ ಮೇಲೆ ಬಿದ್ದಿದ್ದ ಕಂಟೈನರ್ ತೆಗೆಯಲು ಸುಮಾರು 1 ಗಂಟೆಗಳ ಕಾರ್ಯಾಚರಣೆ ನಡೆಸಲಾಯಿತು. ಈ ವೇಳೆ ಟ್ರಾಫಿಕ್ ಜಾಮ್ ಸಮಸ್ಯೆಯು ಉಂಟಾಯಿತು.
ಇಬ್ಬರು ವ್ಯಕ್ತಿಗಳು ಸ್ಥಳದಲ್ಲೇ ಸಾವಿಗೀಡಾಗಿದ್ದು, ಮೃತದೇಹಗಳನ್ನು ಹೊರಕ್ಕೆ ತೆಗೆಯಲಾಗಿದೆ. ಟ್ರಕ್ ಚಾಲಕನನ್ನು ಬಂಧಿಸಲಾಗಿದೆ.
ಮೃತರನ್ನು ಅಂಕಿತ್ ಮೆಲ್ಹೋತ್ರಾ ಮತ್ತು ರಂಜನ್ ಕಲ್ರಾ ಎಂದು ಗುರುತಿಸಲಾಗಿದ್ದು, ಇಬ್ಬರು 35 ವಯಸ್ಸಿನವರು. ದೆಹಲಿಯ ಮ್ಯಾನೇಜ್ಮೆಂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಘಟನೆ ನಡೆಯುವ ಮುನ್ನ ಅವರು ವಿಮಾನ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದ್ದರು.
ಇದನ್ನೂ ಓದಿ: ಹಾಥರಸ್ ಪ್ರಕರಣ- ಯುವತಿಯ ಕೊಲೆ ಮಾಡಿದ್ದು ಯಾರು ಎಂದು ತಿಳಿಸಿ ಪತ್ರ ಬರೆದ ಆರೋಪಿಗಳು!
ಕರ್ಕಾರ್ಡೂಮದಲ್ಲಿ ವಾಸವಿದ್ದ ಮೆಲ್ಹೋತ್ರಾ ಅವರು ಲಜ್ಪತ್ ನಗರದಲ್ಲಿದ್ದ ಸ್ನೇಹಿತ ಕಲ್ರಾರನ್ನು ಕರೆದುಕೊಂಡು ವಿಮಾನ ನಿಲ್ದಾಣಕ್ಕೆ ಹೋಗುವಾಗ ಮಾರ್ಗ ಮಧ್ಯೆ ದುರ್ಘಟನೆ ಸಂಭವಿಸಿದೆ. ಇಬ್ಬರು ಕೆಲಸದ ನಿಮಿತ್ತ ಕೋಲ್ಕತಾಗೆ ಹೋಗುವುದಕ್ಕಾಗಿ ವಿಮಾನ ನಿಲ್ದಾಣಕ್ಕೆ ತೆರಳಿದ್ದರು.
ಬುಧವಾರ ಬೆಳಗ್ಗೆ 3:45ರ ಸುಮಾರಿಗೆ ಅಪಘಾತ ಸಂಭವಿಸಿದೆ. ಟ್ರಕ್ ತಿರುವು ಪಡೆದುಕೊಳ್ಳವಾಗ ಅಕ್ಕಿ ತುಂಬಿದ್ದ ಕಂಟೈನರ್ ಕಾರಿನ ಮೇಲೆ ಬಿದ್ದಿದೆ. ಅಲ್ಲದೆ, ಟ್ರಕ್ ಸಹ ಉರುಳಿಬಿದ್ದಿದೆ. ತಕ್ಷಣ ಟ್ರಕ್ನಿಂದ ಹೊರಬಂದು ಚಾಲಕ ಪರಾರಿಯಾಗಲು ಯತ್ನಿಸಿದರೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಕಂಟೈನರ್ ಬಿದ್ದ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಇಬ್ಬರ ದೇಹವೂ ಸಹ ರಕ್ತಸಿಕ್ತವಾಗಿದ್ದವು. ರಸ್ತೆ ಮಧ್ಯೆದಲ್ಲೇ ಟ್ರಕ್ ಬಿದ್ದಿದ್ದರಿಂದ. ಎರಡು ಸಣ್ಣ ಕ್ರೇನ್ ಮತ್ತು ಒಂದು ಜೆಸಿಬಿಯಿಂದ ಕಂಟೈನರ್ ತೆರವುಗೊಳಿಸಲಾಯಿತು. ಕಂಟೈನರ್ನಲ್ಲಿದ್ದ ಅಕ್ಕಿ ರಸ್ತೆಯಲ್ಲ ಚೆಲ್ಲಿಕೊಂಡಿತ್ತು. ಸ್ಥಳದಲ್ಲಿ ಅಗ್ನಿಶಾಮಕ ಸಿಬ್ಬಂದಿಯು ಸಹ ಆಗಮಿಸಿ ತೆರವು ಕಾರ್ಯಾಚರಣೆಗೆ ಸಹಕರಿಸಿದರು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. (ಏಜೆನ್ಸೀಸ್)
ಸೊಸೆ ವಿರುದ್ಧ ಗುಡುಗಿದ ಗೌರಮ್ಮ ಕುರಿತು ಡಿ.ಕೆ.ರವಿ ಪತ್ನಿಯಿಂದ ಸ್ಫೋಟಕ ಹೇಳಿಕೆ