ಬೈಂದೂರು: ಉಪ್ಪುಂದ ವಲಯ ನಾಗರಬನ ಶ್ರೀರಾಮ ಭಜನಾ ಮಂದಿರದಲ್ಲಿ ಭಜನಾ ಕಮ್ಮಟ ತರಬೇತಿ ಶಿಬಿರ ಸಮಾರೋಪ ಸಮಾರಂಭದಲ್ಲಿ ಹಿರಿಯ ಹಾಗೂ ಕಿರಿಯ ಭಜನಾ ಹಾಡುಗಾರರನ್ನು ಗೌರವಿಸಲಾಯಿತು.
ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಕೃಷ್ಣ ಪೂಜಾರಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ತಾಲೂಕು ಯೋಜನಾಧಿಕಾರಿ ವಿನಾಯಕ ಪೈ, ಹಿರಿಯ ಭಜನೆಗಾರರಾದ ಈಶ್ವರ ಖಾರ್ವಿ, ಈಶ್ವರ ಮೊಗವೀರ, ಭಜನಾ ಮಂದಿರ ಅಧ್ಯಕ್ಷ ವಾಸುದೇವ ಖಾರ್ವಿ, ಮಂಜುನಾಥ ಖಾರ್ವಿ, ತಾಲೂಕು ಭಜನಾ ಪರಿಷತ್ ಪದಾಧಿಕಾರಿಗಳಾದ ಮಂಜು ಪೂಜಾರಿ, ರೋಹಿತ್ ಖಾರ್ವಿ, ಮಂಜುನಾಥ ಉಳ್ಳೂರು, ಕೃಷ್ಣ ಪೂಜಾರಿ ತ್ರಾಸಿ, ಮಂಜುನಾಥ ಪಡುಕೋಣೆ, ನಾರಾಯಣ ಖಾರ್ವಿ, ಜಯರಾಮ ಶೆಟ್ಟಿ ಉಪ್ಪುಂದ, ಪೂರ್ಣಿಮಾ, ಬಾಬು ದೇವಾಡಿಗ, ಸಂಪನ್ಮೂಲ ವ್ಯಕ್ತಿ ರಾಜೇಂದ್ರ, ಕಿರಣ ಮೊವಾಡಿ, ಕವಿತಾ, ಸಂದೇಶ, ವಿಶ್ವನಾಥ ಖಾರ್ವಿ ಇದ್ದರು.