ಭೋಪಾಲ್: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ ಕಂಟಕವಾಗಿ ಕಾಡಲಾರಂಭಿಸಿದೆ. ಜ್ಯೋತಿರಾದಿತ್ಯ ಸಿಂಧ್ಯಾ ರಾಜೀನಾಮೆ ಕಾಂಗ್ರೆಸ್ ಪಕ್ಷಕ್ಕೆ ನೀಡದ ಬೆನ್ನಲ್ಲೇ 19 ಶಾಸಕರು ರಾಜೀನಾಮೆಯನ್ನು ಸಲ್ಲಿಸಿದ್ದರು. ಇದೀಗ ಶಾಸಕ ಅದಾಲ್ ಸಿಂಗ್ ಕನ್ಸಾನ್ ಮತ್ತು ಮನೋಜ್ ಚೌಧರಿ ರಾಜೀನಾಮೆ ಸಲ್ಲಿಸಿದ್ದು ಪಕ್ಷ ತೊರೆದ ಶಾಸಕರ ಸಂಖ್ಯೆ 22ಕ್ಕೆ ಏರಿದೆ.
ಮಾಜಿ ಸಂಸದ ಜ್ಯೋತಿರಾದಿತ್ಯ ಸಿಂಧ್ಯಾ ಸೋಮವಾರ ರಾತ್ರಿ ರಾಜೀನಾಮೆ ಪತ್ರವನ್ನು ಸಲ್ಲಿಕೆ ವಿಚಾರವನ್ನು ಟ್ವೀಟ್ ಮೂಲಕ ಬಹಿರಂಗಪಡಿಸಿದ್ದರು. ಅದರ ಬೆನ್ನಲ್ಲೇ 19 ಶಾಸಕರು ಬೆಂಗಳೂರಿನಲ್ಲಿ ಇದ್ದುಕೊಂಡೇ ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯದ ವಿಧಾನಸಭೆಯ ಸ್ಪೀಕರ್ಗೆ ರವಾನಿಸಿದ್ದರು. ಇದೀಗ ಶಾಸಕ ಮನೋಜ್ ಚೌಧರಿ ಮತ್ತು ಅದಾಲ್ ಸಿಂಗ್ ಕನ್ಸಾನ್ ಕೂಡ ರಾಜೀನಾಮೆ ಸಲ್ಲಿಸಿರುವುದಾಗಿ ಮಾಹಿತಿ ಲಭಿಸಿದೆ.
ಶಾಸಕರ ಈ ನಡೆಯೊಂದಿಗೆ ಕಮಲನಾಥ ಸರ್ಕಾರದ ಬಹುಮತ ಕುಸಿದಿದೆ. ಮಧ್ಯಪ್ರದೇಶ ವಿಧಾನಸಭೆಯಲ್ಲಿ 228 ಶಾಸಕರಿದ್ದು, ಈ ಪೈಕಿ ಬಿಜೆಪಿಗೆ 109, ಬಿಎಸ್ಪಿ 2, ಸಮಾಜವಾದಿ ಪಕ್ಷ 1, ಪಕ್ಷೇತರ 4 ಸದಸ್ಯರಿದ್ದಾರೆ. ಆಡಳಿತ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್ಗೆ 114 ಸದಸ್ಯಬಲ ಇತ್ತು. ಈಗ 22 ಶಾಸಕರ ರಾಜೀನಾಮೆಯೊಂದಿಗೆ ಕಾಂಗ್ರೆಸ್ ಸದಸ್ಯ ಬಲ 93ಕ್ಕೆ ಕುಸಿದಿದೆ. (ಏಜೆನ್ಸೀಸ್)
ಬೆಂಗಳೂರಿನಲ್ಲಿ ಇದ್ದುಕೊಂಡೇ ಮಧ್ಯಪ್ರದೇಶ ವಿಧಾನಸಭೆ ಸ್ಪೀಕರ್ಗೆ ರಾಜೀನಾಮೆ ಪತ್ರ ರವಾನಿಸಿದ 19 ಕಾಂಗ್ರೆಸ್ ಶಾಸಕರು