More

    ಕೊಲೆ​ ಆರೋಪಿ ಎಸೆದ ಬಾಂಬ್​ಗೆ ಪೇದೆ ಸಾವು: ಮಾಡಿದ ಪಾಪಕ್ಕೆ ಅದೇ ಬಾಂಬ್​ಗೆ ಕೊಲೆಗಾರನೂ ಬಲಿ!

    ಚೆನ್ನೈ: ಡಬಲ್​ ಮರ್ಡರ್​ ಆರೋಪಿಯನ್ನು ಹಿಡಿಯಲು ಹೋಗಿದ್ದ ವಿಶೇಷ ಪೊಲೀಸ್​ ತಂಡದ ಮೇಲೆ ಆರೋಪಿ ದೇಸಿ ಬಾಂಬ್​ ದಾಳಿ ನಡೆಸಿದ ಪರಿಣಾಮ ಪೊಲೀಸ್​ ಕಾನ್ಸ್​ಟೇಬಲ್​ ಒಬ್ಬರು ದಾರುಣವಾಗಿ ಸಾವಿಗೀಡಾಗಿರುವ ಘಟನೆ ತಮಿಳುನಾಡಿನ ತೂತುಕುಡಿ ಜಿಲ್ಲಿಯ ಮನಕ್ಕರೈನಲ್ಲಿ ನಡೆದಿದೆ. ​

    ಆರೋಪಿ ಪೊಲೀಸ್​ ತಂಡದ ಮೇಲೆ ಎರಡು ಬಾಂಬ್​ಗಳನ್ನು ಎಸೆದಿದ್ದು, ಅದರಲ್ಲಿ ಎರಡನೇ ಬಾಂಬ್​ ಸ್ಪೋಟಗೊಂಡಿದ್ದರಿಂದ ಕಾನ್ಸ್​ಟೇಬಲ್​ ತಲೆಗೆ ತೀವ್ರ ಪೆಟ್ಟುಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಸುಬ್ರಮಣಿಯಂ ಎಂದು ಗುರುತಿಸಲಾಗಿದೆ. ಅಜವರ್ತಿರುನಗರಿ ಪೊಲೀಸ್​ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಬ್ರಮಣಿಯಂ ಇಂದು (ಮಂಗಳವಾರ) ಸಾವಿಗೀಡಾಗಿದ್ದಾರೆ. ಮೃತರು ಪತ್ನಿ ಹಾಗೂ 6 ತಿಂಗಳ ಮಗುವನ್ನು ಅಗಲಿದ್ದಾರೆ.

    ಇದನ್ನೂ ಓದಿ: ಬಳ್ಳಾರಿ ಮೀನುಗಾರಿಕೆ ಕಚೇರಿಯಲ್ಲಿ ಮಹಿಳೆಯ ಬರ್ಬರ ಕೊಲೆ, ವ್ಯಕ್ತಿಯ ಆತ್ಮಹತ್ಯೆ: ಏನಿದರ ಮರ್ಮ?

    ಆರೋಪಿಯು ಮೃತ
    ಮೇಲಮಂಗಲಕುರಿಚಿ ಮೂಲದ ಆರೋಪಿ ದೊರೈ ಮುತ್ತು ಬಾಂಬ್​ ಎಸೆಯುವಾಗ ಕೈಯಲ್ಲೇ ಬಾಂಬ್​ ಸ್ಪೋಟಗೊಂಡು ತೀವ್ರ ಗಾಯಗೊಂಡಿದ್ದ. ಆತನನ್ನು ಸಮೀಪದ ತಿರುನಲ್ವೇಲಿ ಆಸ್ಪತ್ರೆಗೆ ಸಾಗಿಸಿದಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ದೊರೈ ಮುತ್ತುವಿನ ವಿರುದ್ಧ ಎರಡು ಕೊಲೆ ಪ್ರಕರಣಗಳಿವೆ. ಆತ ಕಟ್ಟಡವೊಂದರಲ್ಲಿ ಅಡಗಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿ, ಆತನನ್ನು ಪೊಲೀಸರು ಬೆನ್ನಟ್ಟಿದಾಗ ಬಾಂಬ್​ ದಾಳಿ ನಡೆಸಿದ್ದಾನೆ.

    ಪರಿಹಾರ ಘೋಷಣೆ
    ಮಂಗಳವಾರ ಸಂಜೆ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರು ಪೊಲೀಸ್​ ಕಾನ್ಸ್​ಟೇಬಲ್​ ಸಾವಿಗೆ ಸಂತಾಪ ಸೂಚಿಸಿ, ಅವರ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಅಲ್ಲದೆ, ಕುಟುಂಬದ ಸದಸ್ಯರಿಗೆ ಉದ್ಯೋಗ ಭರವಸೆಯನ್ನು ನೀಡಿದ್ದಾರೆ. (ಏಜೆನ್ಸೀಸ್​)

    ಇದನ್ನೂ ಓದಿ: ಟ್ರೋಲ್ ಆಗುತ್ತಿರುವ ಕೊತ್ಮಿರಿ ಸೊಪ್ಪಿಗೆ ಹೊಸ ಆಯಾಮವನ್ನೇ ನೀಡಿದ ಕವಿರಾಜ್; ನಿಮಗೇನು ಅನ್ನಿಸುತ್ತದೆ ನೋಡಿ…

    ಪತಿಯ ಜನನಾಂಗ ಕತ್ತರಿಸಿ ಕೊಲೆಗೈದ ಮಹಿಳೆ ತನ್ನ ಮಕ್ಕಳಿಗೆ ಹೇಳಿದ್ದು ಶಾಕ್​ ಆಗುವ ವಿಚಾರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts