More

    7ರಿಂದ 42 ಕಿಮೀ ರೈತ ಕಲ್ಯಾಣ ನಡಿಗೆ

    ತೀರ್ಥಹಳ್ಳಿ: ಕಸ್ತೂರಿ ರಂಗನ್ ವರದಿ, ಅಕೇಶಿಯಾ ನೆಡá-ತೋಪು ವಿರೋಧಿಸಿ ನ.7ರಿಂದ ರೈತ ಕಲ್ಯಾಣ ನಡಿಗೆ’ ಹೆಸರಿನಲ್ಲಿ ತಾಲೂಕಿನ ಬಿದರಗೋಡಿನಿಂದ ತೀರ್ಥಹಳ್ಳಿವರೆಗೆ ಮೂರು ದಿನಗಳ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಎಂ.ಮಂಜುನಾಥಗೌಡ ತಿಳಿಸಿದರು.

    ಒಟ್ಟು 42 ಕಿಮೀ ಪಾದಯಾತ್ರೆಯನ್ನು ನ.7ರಂದು ಬೆಳಗ್ಗೆ 9ಕ್ಕೆ ಬಿದರಗೋಡಿನಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಉದ್ಘಾಟಿಸಲಿದ್ದಾರೆ. ರೈತ ಮುಖಂಡ ಕಡಿದಾಳು ಶಾಮಣ್ಣ, ಮಾಜಿ ಶಾಸಕರಾದ ಮಧು ಬಂಗಾರಪ್ಪ ಹಾಗೂ ಬೇಳೂರು ಗೋಪಾಲಕೃಷ್ಣ, ಪರಿಸರವಾದಿ ಕಲ್ಕುಳಿ ವಿಠಲ ಹೆಗ್ಡೆ ಮುಂತಾದವರು ಪಾಲ್ಗೊಳ್ಳಲಿದ್ದಾರೆ.

    ಕೆಂದಾಳುಬೈಲಿನಲ್ಲಿ ವರದಿ ಕುರಿತು ತಜ್ಞರಿಂದ ಮಾಹಿತಿ ಹಾಗೂ ಚರ್ಚೆಯನ್ನು ಏರ್ಪಡಿಸಲಾಗಿದ್ದು ನಾಲೂರಿನಲ್ಲಿ ಸಂಜೆ ವಿಚಾರಗೋಷ್ಠಿ ನಡೆಯಲಿದೆ. ನ.8ರಂದು ಬೆಳಗ್ಗೆ ನಾಲೂರಿನಿಂದ ಹೊರಟು ಶಿವರಾಜಪುರದವರೆಗೆ ಪಾದಯಾತ್ರೆ ನಡೆಸಿ ಮುಳುಬಾಗಿಲಿನಲ್ಲಿ ವಾಸ್ತವ್ಯ ಹೂಡಲಾಗುವುದು. ನ.9ರಂದು ಪಟ್ಟಣವನ್ನು ತಲುಪಿ ತಾಲೂಕು ಕಚೇರಿ ಎದುರು ಬಹಿರಂಗ ಸಭೆ ನಡೆಸಿ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts