More

    ಬಿಎಲ್ಒ ಕಾರ್ಯದಿಂದ ಬಿಡುಗಡೆಗೊಳಿಸಲು ಆಗ್ರಹ

    ತಿಕೋಟಾ: ಬಿಎಲ್ಒಗಳಿಗೆ ಗಳಿಕೆ ರಜೆ ಮಂಜೂರು ಹಾಗೂ ಬಿಎಲ್ಒ ಕಾರ್ಯದಿಂದ ಮುಕ್ತಗೊಳಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ತಾಲೂಕು ಘಟಕದ ವತಿಯಿಂದ ತಹಸೀಲ್ದಾರ್ ಸಂತೋಷ ಮ್ಯಾಗೇರಿಯವರಿಗೆ ಶನಿವಾರ ಮನವಿ ಸಲ್ಲಿಸಲಾಯಿತು.

    15 ವರ್ಷಗಳಿಂದ ಬಿಎಲ್ಒಗಳಾಗಿ ಪ್ರಾಥಮಿಕ ಶಾಲೆ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ನಮ್ಮ ವೇತನಾಧಿಕಾರಿಗಳು ಗಳಿಕೆ ರಜೆ ಕೊಡಲಿಕ್ಕೆ ಬರುವುದಿಲ್ಲವೆಂದು ತಿಳಿಸಿದ್ದಾರೆ. ಇದರಿಂದಾಗಿ ಈ ಕಾರ್ಯವು ನಮಗೆ ಹೆಚ್ಚುವರಿಯಾಗಿದೆ. ದಯವಿಟ್ಟು ಈ ಕೆಲಸವನ್ನು ಬೇರೆ ಇಲಾಖೆಗೆ ಅಥವಾ ನಿರುದ್ಯೋಗಿಗಳಿಗೆ ಹಂಚಿಕೆ ಮಾಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.

    ನೌಕರರ ಸಂಘದ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಟಕ್ಕಳಕಿ, ಖಜಾಂಚಿ ಹಣಮಂತ ಕಾಲೇಬಾಗ, ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎ.ಬಿ. ಧಡಕೆ, ಕಾರ್ಯದರ್ಶಿ ಬಜಂತ್ರಿ, ಜಿಒಸಿಸಿ ಬ್ಯಾಂಕ್ ನಿರ್ದೇಶಕ ಈರಪ್ಪ ತೇಲಿ, ಸಾಬು ಗಗನಮಾಲಿ, ಪುಷ್ಪಾ ಗಚ್ಚಿನಮಠ, ಸವಿತಾ ಬಿ.ಎಂ., ದ್ರೌಪದಿ ಕಬಾಡೆ, ಐ.ಬಿ. ಪಾಟೀಲ, ವಿದ್ಯಾವತಿ ಸವನಳ್ಳಿ, ಸೋಮನಾಥ ಬಾಗಲಕೋಟ, ಎಂ.ಐ. ಕಣಬೂರ, ಜೆ.ಎಚ್. ವಠಾರ, ಕುಮಾರ ಗಳತಗಿ, ಬಿ.ಎಸ್. ಸಾವಳಗಿ, ಎಸ್.ಎನ್. ತಡಲಗಿ, ಎಸ್.ಐ. ಬಾಗಲಕೋಟ, ಜಯಶ್ರೀ ಬಾಗಲಕೋಟ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts