ಚಾಮರಾಜನಗರ: ಲಾಕ್ಡೌನ್ ನಿರ್ಬಂಧ ಸಡಿಲಿಕೆಯಾಗಿದ್ದು ರಾಜ್ಯದಲ್ಲಿ ಒಂದೊಂದೇ ಚಟುವಟಿಕೆಗಳು ನಿಧಾನವಾಗಿ ಶುರುವಾಗುತ್ತಿವೆ. ಜೂ.8ರಿಂದ ಹಲವು ಆರ್ಥಿಕ ಚಟುವಟಿಕೆಗಳು ಶುರುವಾಗಲಿದ್ದು, ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿ ಕೂಡ ಆರಂಭವಾಗಲಿದೆ.
ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನಲ್ಲಿರುವ ಬಂಡೀಪುರದಲ್ಲಿ ಕೊವಿಡ್-19 ಹಿನ್ನೆಲೆಯಲ್ಲಿ ಕಳೆದ 85ದಿನಗಳಿಂದಲೂ ಸಫಾರಿ ಬಂದ್ ಆಗಿತ್ತು. ಜೂ.8ರಿಂದ ಮತ್ತೆ ಪ್ರಾರಂಭವಾಗಲಿದ್ದು, ಈ ಬಗ್ಗೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಹಾಗೂ ರಾಜ್ಯ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಇದನ್ನೂ ಓದಿ: ಡಬಲ್ ಗೇಮ್ ಮುಂದುವರಿಸಿದೆ ಪಾಕ್; ಭಾರತದ ಭದ್ರತಾ ಸಂಸ್ಥೆಗಳ ಕಾರ್ಯಾಚರಣೆಯಲ್ಲಿ ಬಯಲಾಯ್ತು ಸತ್ಯ
ಸಫಾರಿಗೆ ಬರುವ ಪ್ರವಾಸಿಗರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಫಾರಿ ವಾಹನ ಹತ್ತುವ ಮೊದಲು ಅವರಿಗೆಲ್ಲ ಸ್ಯಾನಿಟೈಸರ್ ನೀಡಲಾಗುತತದೆ. ಇನ್ನು ವಾಹನದ ಚಾಲಕರು, ಸಿಬ್ಬಂದಿಗೂ ಮಾಸ್ಕ್ ಕಡ್ಡಾಯ. ಸಫಾರಿ ವಾಹನದ ಶೇ.50ರಷ್ಟು ಸೀಟ್ಗಳು ಮಾತ್ರ ತುಂಬಿರಬೇಕು. ಪ್ರತಿ ಟ್ರಿಪ್ ನಂತರವೂ ವೆಹಿಕಲ್ನ್ನು ಸ್ಯಾನಿಟೈಸ್ ಮಾಡಲಾಗುತ್ತದೆ. ಒಟ್ಟಾರೆ ಎಲ್ಲರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಸಫಾರಿ ಆರಂಭ ಮಾಡಲಾಗುತ್ತದೆ ಎಂದು ಗುಂಡ್ಲುಪೇಟೆ ಶಾಸಕ ನಿರಂಜನ್ ಕುಮಾರ್ ಮಾಹಿತಿ ನೀಡಿದ್ದಾರೆ. (ದಿಗ್ವಿಜಯ ನ್ಯೂಸ್)