ತುಮಕೂರು: ಕಳ್ಳರು ಅದೆಷ್ಟೇ ಚಾಲಾಕಿಯಾಗಿದ್ದರೂ ಒಂದಲ್ಲ ಒಂದು ದಿನ ಸಿಕ್ಕಿಬೀಳ್ತಾರೆ ಎಂಬ ಮಾತಿಗೆ ಈ ಪ್ರಕರಣವೇ ಸಾಕ್ಷಿ. ಟಿಕ್ಟಾಕ್ ಗೀಳು ಈಗಾಗಲೇ ಹಲವರ ಸಾವು-ನೋವಿಗೂ ಕಾರಣವಾಗಿದೆ. ಈಗ ಇದೇ ಟಿಕ್ಟಾಕ್, ಮಾಂಸಕ್ಕಾಗಿ ಕಾಡುಮೊಲವನ್ನು ಕೊಂದಿದ್ದ ಬೇಟೆಗಾರರಿಬ್ಬರನ್ನು ಕಂಬಿ ಎಣಿಸುವಂತೆ ಮಾಡಿದೆ!
ಹೌದು, ಇಂತಹದೊಂದು ಪ್ರಕರಣ ಕೊರಟಗೆರೆ ತಾಲೂಕಿನ ಕರಿದುಗ್ಗನಹಳ್ಳಿಯಲ್ಲಿ ಶುಕ್ರವಾರ ನಡೆದಿದೆ. ಕಾಡುಮೊಲವನ್ನು ಕೊಂದ ಆರೋಪಿಗಳು ಅದರ ಚರ್ಮ ಸುಲಿದು, ಮಾಂಸ ಕತ್ತರಿಸುವಾಗ ಟಿಕ್ಟಾಕ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ವಿಡಿಯೋ ವೈರಲ್ ಆಗಿದ್ದು, ಕೂಡಲೇ ಪೊಲೀಸರು ಮತ್ತು ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳಾದ ಕರಿದುಗ್ಗನಹಳ್ಳಿಯ ವಿನಯ ಮತ್ತು ಎಸ್. ಗೊಲ್ಲಹಳ್ಳಿಯ ಜಿ.ಪಿ. ವಿನಯ್ ಕುಮಾರ್ನನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಎಣ್ಣೆ ಪ್ರಿಯರಿಗೆ ಸಿಹಿ ಸುದ್ದಿ: ಮಾರಾಟಕ್ಕೆ ಸಿಕ್ತು ಪರ್ಮಿಷನ್; ಹಾಗಾದ್ರೆ ಯಾವಾಗಿಂದ ಶುರುವಾಗ್ತವೆ ಮದ್ಯದಂಗಡಿಗಳು?