More

    ಮೂರು ಗೃಹಲಕ್ಷ್ಮೀ ಸೇವಾ ಕೇಂದ್ರ ಆರಂಭ

    ಬಾದಾಮಿ: ನಗರದ ಲೋಕೋಪಯೋಗಿ ಇಲಾಖೆ ಆವರಣ, ನಗರವನದ ಪುರಸಭೆಯ ಮಳಿಗೆ, ಸ್ಟೇಷನ್ ರಸ್ತೆಯ ಅಂಬೇಡ್ಕರ್ ಭವನದಲ್ಲಿ ಗುರುವಾರದಿಂದ ಆಡಳಿತ ಸರ್ಕಾರದ ಐದು ಗ್ಯಾರಂಟಿಗಳ ಪೈಕಿ ಗೃಹಲಕ್ಷ್ಮೀ ಯೋಜನೆಯ ಸೇವಾ ಕೇಂದ್ರಗಳು ಕಾರ್ಯಾರಂಭಗೊಂಡಿವೆ.

    ನಗರದ ಜನತೆ ಈ ಯೋಜನೆಯಡಿ ಸರ್ಕಾರದ ಹೆಲ್ಫ್‌ಲೈನ್ ನಂಬರ್‌ದಿಂದ ಫಲಾನುಭವಿಗಳ ಮೊಬೈಲ್ ನಂಬರ್‌ಗೆ ಅರ್ಜಿ ಸಲ್ಲಿಸಲು ಸಂದೇಶ ಬರುತ್ತದೆ.

    ಆಯಾ ಫಲಾನುಭವಿಗಳು ಸಂಬಂಧಿಸಿದ ಸೇವಾ ಕೇಂದ್ರಕ್ಕೆ ಪಡಿತರ ಕಾರ್ಡ್, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್, ಸಂದೇಶ ಬಂದಿರುವ ಮೊಬೈಲ್ ಮೂಲ ದಾಖಲಾತಿಗಳೊಂದಿಗೆ ಕೇಂದ್ರಕ್ಕೆ ಆಗಮಿಸಿ ಅರ್ಜಿ ಸಲ್ಲಿಸಬಹುದು.

    ಅರ್ಜಿ ಸಲ್ಲಿಸಿದ ನಂತರ ಸ್ವೀಕೃತ ಪ್ರತಿ ಪಡೆದುಕೊಳ್ಳಬೇಕೆಂದು ಪುರಸಭೆ ಮುಖ್ಯಾಧಿಕಾರಿ ಬಂದೇನವಾಜ್ ಡಾಂಗೆ ತಿಳಿಸಿದರು.

    ಪುರಸಭೆ ಸಿಬ್ಬಂದಿ ಐಟಿ ವಿಭಾಗದ ಮಹಾಂತೇಶ ನಾಗನೂರ, ಕಿರಿಯ ಅಭಿಯಂತರ ಸಹಾಯಕ ಮಂಜು ಮಡಿವಾಳರ, ಲಕ್ಷ್ಮೀ ಪಟ್ಟಣಶೆಟ್ಟಿ, ಸದ್ದಾಂಹುಸೇನ್ ದೊಡಮನಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts