ಕೋಲಾರ: ಅಂದುಕೊಂಡಂತೆಯೇ ಎಲ್ಲವೂ ಆಗಿದ್ದಿದ್ದರೆ ಈ ಮೂವರೂ ಜೀವಂತ ಇರುತ್ತಿದ್ದರು. ಆದರೆ ರೈಲು ಬರುವುದು ತಡವಾಗಿದ್ದೇ ತಪ್ಪಾಯಿತು. ಗ್ಯಾಪಲ್ಲಿ ಸ್ವಲ್ಪ ವಿಹರಿಸುವ ಎಂದು ವಾಪಸಾದ ಇವರು ಮೋಜಿಗೆಂದು ನೀರಿಗಿಳಿದು ವಾಪಸ್ ಬರಲಾಗದ ಲೋಕಕ್ಕೆ ಹೋಗಿದ್ದಾರೆ.
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ನೇರಳೆಕೆರೆ ಬಳಿ ಈ ದುರಂತ ಸಂಭವಿಸಿದೆ. ಚಿಕ್ಕವಲಗಮಾದಿ ನವೀನ್ (32), ನೇರಳೆಕೆರೆ ರಾಜೇಂದ್ರ (32), ಮೋಹನ್ (28) ಸಾವಿಗೀಡಾದವರು. ಇವರೊಂದಿಗಿದ್ದ ಶಿವರಾಜ್ ಎಂಬ ಊಟ ತರಲು ಹೋಗಿದ್ದರಿಂದ ಬಚಾವಾಗಿದ್ದಾನೆ.
ಇಂದು ಮುಂಜಾನೆ ರೈಲು ತಡವಾದ ಕಾರಣ ಇವರು ವಾಪಸ್ ಆಗಿ ಕೆರೆಲ ಬಳಿ ಪಾರ್ಟಿ ಮಾಡಿದ್ದಲ್ಲದೆ, ತೆಪ್ಪದಲ್ಲಿ ಮೋಜು ಮಾಡಲು ರೌಂಡ್ಸ್ ಹೋಗಿದ್ದರು. ಆದರೆ ತೆಪ್ಪ ಮಗುಚಿ ಮೂವರು ನೀರಲ್ಲಿ ಮುಳುಗಿದ್ದಾರೆ. ಸ್ಥಳೀಯರು ತಕ್ಷಣ ಧಾವಿಸಿದರೂ ಕೆರೆ ಮಧ್ಯದಲ್ಲಿ ಅವಘಡವಾದ್ದರಿಂದ ರಕ್ಷಣೆ ಸಾಧ್ಯವಾಗಲಿಲ್ಲ.
ನೀರಲ್ಲಿ ಮುಳುಗಿ ಕಣ್ಮರೆ ಆಗಿರುವವರ ಪತ್ತೆಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಹುಡುಕುತ್ತಿದ್ದಾರೆ. ಸ್ಥಳಕ್ಕೆ ಕೆಜಿಎಫ್ ಎಸ್ಪಿ ಡಿ.ಕೆ. ಧರಣಿದೇವಿ ಭೇಟಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅವಘಡ ಸಂಭವಿಸಿದೆ.
15 ಸಾವಿರ ಶಿಕ್ಷಕರ ನೇಮಕಾತಿಗೆ ಮೇನಲ್ಲಿ ಸ್ಪರ್ಧಾತ್ಮಕ ಪರೀಕ್ಷೆ..