More

    ಸನಾತನ ಧರ್ಮವನ್ನು ಗೌರವಿಸದಿದ್ದರೆ ಸಂವಿಧಾನವನ್ನು ಅವಮಾನಿಸಿದಂತೆ: ಕೇಂದ್ರ ಸಚಿವ ಅರ್ಜುನ್​ ಮೇಘವಾಲ್​

    ನವದೆಹಲಿ: ಯಾರು ಧರ್ಮವನ್ನು ಗೌರವಿಸುವುದಿಲ್ಲವೋ ಅದು ಸಂವಿಧಾನಕ್ಕೆ ಮಾಡುವ ಅವಮಾನವಾಗಿದೆ. ಸಾಂವಿಧಾನಿಕ ಹುದ್ದೆಯಲ್ಲಿರುವವರು ಎಲ್ಲರೂ ಸಹ ಧರ್ಮವನ್ನು ಗೌರವಿಸಬೇಕೆಂದು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್​​ ಮೇಘವಾಲ್​ ಹೇಳಿದ್ದಾರೆ.

    ತಮಿಳುನಾಡು ಸಿಎಂ ಸ್ಟಾಲಿನ್​ ಅವರ ಪುತ್ರ, ಸಚಿವ ಉದಯನಿಧಿ ಸನಾತನ ಧರ್ಮದ ಕುರಿತ ಹೇಳಿಕೆಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಅರ್ಜುನ್​ ಮೇಘವಾಲ್​ ವಿಪಕ್ಷಗಳ ಒಕ್ಕೂಟ ಇಂಡಿಯಾ ಮೈತ್ರಿಕೂಟಕ್ಕೆ ಚಾಟಿ ಬೀಸಿದ್ದಾರೆ.

    ಇದನ್ನೂ ಓದಿ: VIDEO| ಜಿಮ್​ನಲ್ಲಿ ವರ್ಕೌಟ್​ ಮಾಡುವಾಗಲೇ ಹೃದಯಾಘಾತದಿಮದ ಪ್ರಾಣಬಿಟ್ಟ ಯುವಕ

    ಇದಲ್ಲದೆ ಸನಾತನ ಧರ್ಮದ ಕುರಿತು ಹೇಳಿಕೆ ನೀಡಿರುವ ವಿಪಕ್ಷಗಳ ನಾಯಕರ ಮಾತನ್ನು ಇಂಡಿಯಾ ಒಕ್ಕೂಟ ಒಪ್ಪಲು ಸಿದ್ದವಾಗಿದೆಯೇ. ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿಗಳು ಎಲ್ಲರನ್ನೂ ಗೌರವಿಸಬೇಕು. ಸನತಾನ ಧರ್ಮಕ್ಕೆ ಅಗೌರವ ತೋರಿಸಿರುವ ಇವರು ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆ.

    ಇಂಡಿಯಾ ಮೈತ್ರಿಕೂಟದ ಸದಸ್ಯರು ನಿರಂತರವಾಗಿ ಇಲ್ಲಸ್ಲಲದ ಹೇಳಿಕೆ ನೀಡುವ ಮೂಲಕ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡುತ್ತಿದ್ದಾರೆ. ಜನರು ಮುಂದಿನ ದಿನಗಳಲ್ಲಿ ಇದಕ್ಕೆ ತಕ್ಕ ಪಾಠ ಕಲಿಸಲಿದ್ಧಾರೆ ಎಂದು ಕೇಂದ್ರ ಸಚಿವ ಅರ್ಜುನ್​ ರಾಮ್​ ಮೇಘವಾಲ್​ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts