ಬೆಂಗಳೂರು: ಲಾಕ್ಡೌನ್ ಹಿನ್ನೆಲೆಯಲ್ಲಿ ಮನರಂಜನಾ ವಾಹಿನಿಗಳಲ್ಲಿ ಹಳೇ ಸಂಚಿಕೆಗಳೆಲ್ಲ ಮರುಪ್ರಸಾರ ಆರಂಭಿಸಿವೆ. ಅದರಲ್ಲಿ ವೀಕೆಂಡ್ ವಿತ್ ರಮೇಶ್ ರಿಯಾಲಿಟಿ ಶೋ ಸಹ ಸಾಧಕರ ಕಥೆಯನ್ನು ಮತ್ತೆ ತೆರೆಮೇಲೆ ತೋರಿಸುತ್ತಿದ್ದಾರೆ. ಈಗಾಗಲೇ ಹಲವು ಸಾಧಕರ ಜೀವನ ಮರುಪ್ರಸಾರವಾಗಿದೆ. ಇದೀಗ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮತ್ತು ಖ್ಯಾತ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರ ಸಂಚಿಕೆಗಳು ಮರು ಪ್ರಸಾರಕ್ಕೆ ಸಿದ್ಧವಾಗಿವೆ.
ಈಗಾಗಲೇ ಅಂಬರೀಶ್, ದರ್ಶನ್, ಪುನೀತ್, ಸುದೀಪ್, ಯಶ್, ಸುಧಾರಾಣಿ ಸೇರಿ ಸಾಕಷ್ಟು ತಾರೆಯರ ಏಪಿಸೋಡ್ಗಳು ಮರುಪ್ರಸಾರವಾಗಿವೆ. ಇದೀಗ ಮೇ. 2 2020ರ ಶನಿವಾರ ಮಧ್ಯಾಹ್ನ 1 ಗಂಟೆಗೆ ಡಾ. ವೀರೇಂದ್ರ ಹೆಗ್ಗಡೆ ಏಪಿಸೋಡ್, ಭಾನುವಾರ ಮಧ್ಯಾಹ್ನ 1 ಗಂಟೆಗೆ ಗೋಲ್ಡನ್ ಸ್ಟಾರ್ ಗಣೇಶ್ ಎಪಿಸೋಡ್ ಪ್ರಸಾರವಾಗಲಿದೆ.