ಮುಂಬೈ: ಕ್ರೂಸ್ ಶಿಪ್ ಡ್ರಗ್ಸ್ ಪಾರ್ಟಿ ಕೇಸಿನಲ್ಲಿ ಬಂಧಿತನಾಗಿ ಜಾಮೀನಿನ ಮೇಲೆ ಹೊರಬಂದಿರುವ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ರನ್ನು ಪ್ರಕರಣದಲ್ಲಿ ತಪ್ಪಾಗಿ ಸಿಕ್ಕಿಹಾಕಿಸಲಾಗುತ್ತಿದೆ ಎಂದು ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಮೊದಲಿನಿಂದ ಹೇಳುತ್ತಾ ಬಂದಿದ್ದಾರೆ. ಇದೀಗ ಆ ಬಗ್ಗೆ ಮತ್ತಷ್ಟು ಸ್ಫೋಟಕ ಹೇಳಿಕೆಗಳನ್ನು ನೀಡಿದ್ದಾರೆ.
ಕ್ರೂಸ್ ಪಾರ್ಟಿಗೆ ಆರ್ಯನ್ ಖಾನ್ ಟಿಕೆಟ್ ಖರೀದಿಸಿಯೇ ಇರಲಿಲ್ಲ. ಪ್ರತೀಕ್ ಗಾಬ ಮತ್ತು ಆಮೀರ್ ಫರ್ನೀಚರ್ವಾಲಾ ಎಂಬುವರು ಅವನನ್ನು ಅಲ್ಲಿಗೆ ಕರೆದುಕೊಂಡುಬಂದಿದ್ದರು ಎಂದಿರುವ ಮಲಿಕ್, “ಇದು ಕಿಡ್ನ್ಯಾಪ್ ಮತ್ತು ಹಣದ ಬೇಡಿಕೆಯ ಸಂಗತಿಯಾಗಿದೆ. ಮೋಹಿತ್ ಕಾಂಬೋಜ್ ಇದರ ಮಾಸ್ಟರ್ಮೈಂಡ್ ಆಗಿದ್ದು, ಹಣದ ಬೇಡಿಕೆ ಮಾಡುವಲ್ಲಿ ಸಮೀರ್ ವಾಂಖೆಡೆಯ ಪಾರ್ಟ್ನರ್ ಆಗಿದ್ದಾನೆ” ಎಂದು ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ: ನಟ ಕಮಲ್ ಹಾಸನ್ ಜನ್ಮದಿನ: ಇದೇ ನನಗೆ ಉಡುಗೊರೆ ಎಂದು ಕೇಳಿದ್ದೇನು?
ಬಿಜೆಪಿ ನಾಯಕರಾದ ಮೋಹಿತ್ ಕಾಂಬೋಜ್ ಮತ್ತು ವಾಂಖೆಡೆ ಅಕ್ಟೋಬರ್ 7 ರಂದು ಓಶಿವಾರಾ ಸ್ಮಶಾನದ ಹೊರಗೆ ಭೇಟಿಯಾಗಿದ್ದರು. ತದನಂತರ ವಾಂಖೆಡೆ ಗಾಬರಿಗೊಂಡು ತಮ್ಮನ್ನು ಹಿಂಬಾಲಿಸಲಾಗುತ್ತಿದೆ ಎಂದು ಪೊಲೀಸರಿಗೆ ದೂರು ನೀಡಿದರು. ಹತ್ತಿರದ ಸಿಸಿಟಿವಿ ಕೆಲಸ ಮಾಡುತ್ತಿರಲಿಲ್ಲದ್ದು ಅವರ ಅದೃಷ್ಟ. ಇಲ್ಲದಿದ್ದರೆ ಆ ಫೂಟೇಜನ್ನು ನಾವು ತೋರಿಸಬಹುದಿತ್ತು ಎಂದು ಎನ್ಸಿಪಿ ನಾಯಕರೂ ಆದ ಸಚಿವ ಮಲಿಕ್ ಎಎನ್ಐ ಸುದ್ದಿ ಸಂಸ್ಥೆಗೆ ಹೇಳಿದ್ದಾರೆ. (ಏಜೆನ್ಸೀಸ್)
ಮಹಾ ಸಚಿವ ನವಾಬ್ ಮಲಿಕ್ ವಿರುದ್ಧ ಮಾನನಷ್ಟ ಮೊಕದ್ದಮೆ; 1.25 ಕೋಟಿ ರೂ. ಪರಿಹಾರ ಬೇಡಿಕೆ