ಹೈದರಾಬಾದ್: ಒನ್ ಸೈಡ್ ಲವ್, ಕಿಡ್ನಾಪ್, ಮೋಸ…ಯಾವ ಕ್ರೈಂ ಥ್ರಿಲ್ಲರ್ಗೂ ಕಡಿಮೆ ಇಲ್ಲದ ವಿಚಿತ್ರ ಘಟನೆಯೊಂದು ಹೈದರಾಬಾದ್ನ ಉಪ್ಪಾಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಉದ್ಯಮಿಯೊಬ್ಬರು ಟಿವಿ ಆ್ಯಂಕರ್ ಪ್ರಣವ್ ಸಿಸ್ಲಾ ಅವರನ್ನು ಅಪಹರಿಸಿದ್ದಾರೆ. ಆದರೆ ಹೇಗೋ ಆ್ಯಂಕರ್ ಉದ್ಯಮಿಯ ಹಿಡಿತದಿಂದ ತಪ್ಪಿಸಿಕೊಂಡಿದ್ದಾರೆ. ಆ್ಯಂಕರ್ ದೂರಿನ ಮೇರೆಗೆ ಪೊಲೀಸರು ಉದ್ಯಮಿ ಭೋಗಿರೆಡ್ಡಿ ತೃಷ್ಣಾಳನ್ನು ಬಂಧಿಸಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾಗಿದ್ದ ತೃಷ್ಣಾ ಅವರ ನಾಲ್ವರು ಸ್ನೇಹಿತರು ಇನ್ನೂ ತಲೆಮರೆಸಿಕೊಂಡಿದ್ದಾರೆ. ಅವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
Hyderabad, Telangana | A kidnapping case was registered in the Malkajgiri subdivision, under the Uppal police station by Pranav Sista, a software engineer and TV Anchor against a woman named Bogireddy Trishna who wanted to marry him. Pranav refused to marry her. The woman has… pic.twitter.com/XAw37catzL
— ANI (@ANI) February 24, 2024
ಐದು ಸ್ಟಾರ್ಟಪ್ ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕಿ
ಪೊಲೀಸರ ಪ್ರಕಾರ, ಉದ್ಯಮಿ ಭೋಗಿರೆಡ್ಡಿ ತೃಷ್ಣಾ ಐದು ಸ್ಟಾರ್ಟಪ್ ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕಿ. ಅವರು ಡಿಜಿಟಲ್ ಮಾರ್ಕೆಟಿಂಗ್ ನಡೆಸುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ಭಾರತ್ ಮ್ಯಾಟ್ರಿಮೋನಿ ಮೂಲಕ ಚೈತನ್ಯ ರೆಡ್ಡಿ ಎಂಬ ಯುವಕನ ಪರಿಚಯವಾಗಿತ್ತು. ಚೈತನ್ಯ ತಮ್ಮ ಐಡಿಯಲ್ಲಿ ಆ್ಯಂಕರ್ ಪ್ರಣವ್ ಸಿಸ್ಲಾ ಅವರ ಫೋಟೋ ಬಳಸುತ್ತಿದ್ದರು. ಚೈತನ್ಯನನ್ನು ಪ್ರಣವ್ ಎಂದು ತಪ್ಪಾಗಿ ಭಾವಿಸಿದ ತೃಷ್ಣ, ಪ್ರಣವ್ ರನ್ನು ಇಷ್ಟಪಡಲಾರಂಭಿಸಿದಳು.
ಸಂಭಾಷಣೆ ಮುಂದುವರೆದಂತೆ, ಅವರು ವಾಟ್ಸಾಪ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ಚಾಟ್ ಮಾಡಲು ಪ್ರಾರಂಭಿಸಿದರು. ಚೈತನ್ಯ ನಂತರ ತೃಷ್ಣಗೆ ತನ್ನ ವ್ಯವಹಾರದಲ್ಲಿ ಹೂಡಿಕೆ ಮಾಡಲು ಕೇಳುತ್ತಾನೆ, ಉತ್ತಮ ಆದಾಯದ ಭರವಸೆ ನೀಡುತ್ತಾನೆ. ಪೊಲೀಸರ ಪ್ರಕಾರ, ತೃಷ್ಣ ಯುಪಿಐ ಮೂಲಕ ಚೈತನ್ಯಗೆ 40 ಲಕ್ಷ ರೂ. ಹಾಕುತ್ತಾಳೆ. ಕೊನೆಗೆ ಆ ನಂಬರ್ ಪ್ರಣವ್ ಅವರದ್ದು ಎಂದು ತಿಳಿದು ಬಂದಿದ್ದು, ತನಗೆ ಮೋಸ ಆಗಿರುವುದನ್ನು ಅರಿತ ಮಹಿಳೆ ಪ್ರೊಫೈಲ್ ನಲ್ಲಿ ನೀಡಿದ್ದ ಫೋನ್ ನಂಬರ್ ಗೆ ಸಂಪರ್ಕಿಸಿದ್ದಾಳೆ. ಅದು ಟಿವಿ ಆ್ಯಂಕರ್ ಪ್ರಣವ್ ಅವರದ್ದು ಎಂದು ತಿಳಿದುಬಂದಿದೆ.
ಚೈತನ್ಯ ರೆಡ್ಡಿ ಎಂಬ ಅಪರಿಚಿತ ವ್ಯಕ್ತಿ ತನ್ನ ಫೋಟೋವನ್ನು ಬಳಸಿ ಭಾರತ್ ಮ್ಯಾಟ್ರಿಮೋನಿಯಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿದ್ದಾನೆ ಎಂಬುದು ಪ್ರಣವ್ಗೂ ತಿಳಿದಿದೆ. ಕೊನೆಗೆ ತೃಷ್ಣಾ ಪ್ರಣವ್ನನ್ನು ಭೇಟಿಯಾಗಿ ಸಂಪೂರ್ಣ ಸತ್ಯವನ್ನು ಹೇಳಿದ್ದು, ಇಬ್ಬರೂ ಪೊಲೀಸ್ ಠಾಣೆಯ ಸೈಬರ್ ಕ್ರೈಂ ವಿಭಾಗದಲ್ಲಿ ದೂರು ದಾಖಲಿಸಿದ್ದಾರೆ.
ಪೊಲೀಸರ ಪ್ರಕಾರ, ಪ್ರಣವ್ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದು, ಹವ್ಯಾಸವಾಗಿ ಸಂಗೀತ ಕಂಪನಿಯೊಂದರಲ್ಲಿ ಆ್ಯಂಕರಿಂಗ್ ಮಾಡುತ್ತಿದ್ದಾರೆ. ಆ್ಯಂಕರ್ ಪ್ರಣವ್ ಅವರ ಚಟುವಟಿಕೆಗಳನ್ನು ಪತ್ತೆಹಚ್ಚಲು ತೃಷ್ಣಾ ಅವರ ಕಾರಿನಲ್ಲಿ ಏರ್ಟ್ಯಾಗ್ (ಜಿಪಿಎಸ್ ಟ್ರ್ಯಾಕರ್) ಅನ್ನು ಸಹ ಅಳವಡಿಸಿದ್ದಳು. ಅವನ ಪ್ರತಿ ಹೆಜ್ಜೆಯ ಮೇಲೂ ನಿಗಾ ಇಡುತ್ತಿದ್ದಳು. ಆದರೆ ಪ್ರಣವ್ ತೃಷ್ಣಾಳನ್ನು ಪ್ರೀತಿಸಲಿಲ್ಲ. ತೃಷ್ಣಾ ಪದೇ ಪದೇ ಕರೆ ಮಾಡುವುದರಿಂದ ಪ್ರಣವ್ ಬೇಸತ್ತಿದ್ದಾನೆ. ಅವನು ಅವಳ ಸಂಖ್ಯೆಯನ್ನು ಬ್ಲಾಕ್ ಮಾಡಿದ್ದಾನೆ.
ತನ್ನ ಕಚೇರಿಯಲ್ಲಿ ಕೆಲಸ ಮಾಡುವ ಇನ್ನೊಬ್ಬ ವ್ಯಕ್ತಿಯನ್ನು ಅಪಹರಣ ಕೆಲಸಕ್ಕೆ ಬಳಸಿಕೊಂಡ ತೃಷ್ಣಾ 50,000 ರೂ.ಕೊಟ್ಟು, ಫೆಬ್ರವರಿ 11 ರಂದು ಪ್ರಣವ್ನನ್ನು ಅಪಹರಿಸಿ ತನ್ನ ಕಚೇರಿಗೆ ಕರೆದೊಯ್ದು ಅಲ್ಲಿ ಅವರ ಮೇಲೆ ಹಲ್ಲೆ ನಡೆಸಿ, ಮದುವೆಯಾಗುವಂತೆ ಒತ್ತಾಯಿಸಲಾಗಿದೆ. ಪೊಲೀಸರ ಪ್ರಕಾರ, ತೃಷ್ಣಾ ಅವರ ಪ್ರತಿಯೊಂದು ಕರೆಗೆ ಉತ್ತರಿಸುವಂತೆ ಪ್ರಣವ್ ರನ್ನು ಒತ್ತಾಯಿಸಲಾಗಿದೆ. ಅಷ್ಟರಲ್ಲಿ ಪ್ರಣವ್ಗೆ ಪರಾರಿಯಾಗುವ ಅವಕಾಶ ಸಿಕ್ಕಿದ್ದು, ನೇರವಾಗಿ ಠಾಣೆಗೆ ತೆರಳಿ ತಮಗಾದ ಸಂಕಷ್ಟವನ್ನು ವಿವರಿಸಿದ್ದಾರೆ.
ಪ್ರಣವ್ ದೂರಿನ ಮೇರೆಗೆ ಪೊಲೀಸರು ಆರೋಪಿ ತೃಷ್ಣಾರನ್ನು ಬಂಧಿಸಲಾಗಿದೆ. ಅವರನ್ನು ರಿಮಾಂಡ್ಗೆ ಕಳುಹಿಸಲಾಗಿದೆ. ಅಪಹರಣದಲ್ಲಿ ಭಾಗಿಯಾಗಿರುವ ಉಳಿದ ನಾಲ್ವರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಫಾಲೋವರ್ಸ್ ಹೆಚ್ಚಿಸಿಕೊಳ್ಳಲು ಪ್ರಾಣವನ್ನೇ ಪಣಕ್ಕಿಟ್ಟ ಮಾಡೆಲ್…ವಿಡಿಯೋ ನೋಡಿ ಥಂಡಾ ಹೊಡೆದ ನೆಟ್ಟಿಜನ್ಸ್