ಬೆಂಗಳೂರು: ಕರೊನಾ ಹಿನ್ನೆಲೆಯಲ್ಲಿ ಪ್ರತಿ ಭಾನುವಾರ ರಾಜ್ಯಾದ್ಯಂತ ಜಾರಿಯಲ್ಲಿದ್ದ ಕರ್ಫ್ಯೂವನ್ನು ಸರ್ಕಾರ ಸಡಿಲಗೊಳಿಸಿದ್ದು, ನಾಳೆ(ಮೇ 31) ಕಂಪ್ಲೀಟ್ ಲಾಕ್ಡೌನ್ ಇರುವುದಿಲ್ಲ.
ಸಾರ್ವಜನಿಕರ ಬೇಡಿಕೆ ಹಿನ್ನೆಲೆಯಲ್ಲಿ ಹಾಗೂ ರಾಜ್ಯದ ಜನತೆಯ ಹಿತದೃಷ್ಟಿಯಿಂದ ನಾಳೆ (ಭಾನುವಾರ) ದೈನಂದಿನ ಚಟುವಟಿಕೆ ಎಂದಿನಂತೆ ಇರಲಿದೆ ಎಂದು ಸಿಎಂ ಕಚೇರಿಯಿಂದ ಅಧಿಕೃತ ಘೋಷಣೆ ಬಂದಿದೆ. ಬಸ್, ಕ್ಯಾಬ್, ಆಟೋ ಸಂಚಾರದ ಜತೆಗೆ ಬೇರೆ ಯಾವ ವಹಿವಾಟಿಗೆ ಅವಕಾಶವಿದೆ ಎಂಬುದರ ಡಿಟೇಲ್ಸ್ ಇಲ್ಲಿದೆ ನೋಡಿ…
ಇದನ್ನೂ ಓದಿರಿ ಕರೊನಾ ಲಾಕ್ಡೌನ್ ಅವಧಿ-ಜಲಮಂಡಳಿ ಬಿಲ್ ಸಂಗ್ರಹದಲ್ಲಿ ಏರಿಕೆ
ನಾಳೆ ಬೆಳಗ್ಗೆ 7ರಿಂದ ಸಂಜೆ 7ರ ವರೆಗೆ ಬಸ್ ಸಂಚಾರ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ. ಅಂದು 3,500 ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಬಸ್ಗಳು ಸಂಚರಿಸಲಿವೆ. ಅಂತರ ರಾಜ್ಯ ಸಂಚಾರ ಕೂಡ ಇರುತ್ತದೆ. ಆಟೋ, ಕ್ಯಾಬ್ಗಳ ಸಂಚಾರಕ್ಕೂ ಅವಕಾಶವಿದೆ.
ಸಲೂನ್, ತರಕಾರಿ, ದಿನಸಿ, ಬ್ಯೂಟಿ ಪಾರ್ಲರ್ ಸೇರಿ ಇತರ ಅಂಗಡಿಗಳು ತೆರೆದಿರುತ್ತವೆ. ಹೋಟೆಲ್ನಲ್ಲಿ ಪಾರ್ಸೆಲ್ಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಎಂದಿನಂತೆ ನಿಗದಿತ ಸಮಯದವರೆಗೆ ಪಾರ್ಕ್ಗಳು ತೆರೆದಿರುತ್ತವೆ. ಮದ್ಯದಂಗಡಿಗಳೂ ಓಪನ್ ಆಗುತ್ತವೆ.
ಇದನ್ನೂ ಓದಿರಿ ಕಾರ್ಪೋರೇಟರ್ಗೆ ಪಾಸಿಟಿವ್
ಕರೊನಾ ಸೋಂಕು ಹರಡುವಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ಮೇ 18ರಂದು ರಾಜ್ಯ ಸರ್ಕಾರ ಲಾಕ್ಡೌನ್ ಮಾರ್ಗಸೂಚಿ ಹೊರಡಿಸಿತ್ತು. ಅದರಂತೆ ಪ್ರತಿದಿನ ಸಂಜೆ 7ರಿಂದ ಬೆಳಗ್ಗೆ 7ರ ವರೆಗೆ ಕರ್ಫ್ಯೂ ಜಾರಿ, ಪ್ರತಿ ಭಾನುವಾರದಂದು ಪೂರ್ಣದಿನದ ಲಾಕ್ಡೌನ್ ಘೋಷಿಸಿತ್ತು.
ಸದ್ಯ ಈ ಬಾನುವಾರದ ಲಾಕ್ಡೌನ್ ನಿಯಮವನ್ನು ಸಾರ್ವಜನಿಕರ ಕೋರಿಕೆ ಮೇರೆಗೆ ಮಾರ್ಪಾಡು ಮಾಡಿ ಆದೇಶ ಹೊರಡಿಸಿದೆ. ಆದರೆ, ಎಂದಿನಂತೆ ಸಂಜೆ 7ರಿಂದ ಬೆಳಗ್ಗೆ 7ರ ವರೆಗೆ ಯಥಾಪ್ರಕಾರ ಕರ್ಫ್ಯೂ ಜಾರಿಯಲ್ಲಿರಲಿದೆ ಎಂದು ಸಿಎಂ ಕಚೇರಿ ಆದೇಶ ಹೊರಡಿಸಿದೆ.
ಇದನ್ನೂ ಓದಿರಿ ಕ್ವಾರಂಟೈನ್ ಕೇಂದ್ರದಲ್ಲಿ ಕಾಂಡೋಮ್ ರಾಶಿ!