ಬೆಂಗಳೂರು: ಮುರುಗೇಶ್ ಪಾಳ್ಯ ಬಳಿಯ ನವರತನ್ ಜುವೆಲ್ಲರಿ ಮಳಿಗೆಗೆ ಗ್ರಾಹಕರ ಸೋಗಿನಲ್ಲಿ ಬಂದಿದ್ದ ಯುವಕ-ಯುವತಿ ಮಾಡಬಾರದ್ದನ್ನು ಮಾಡಿ ಮಾಲೀಕರ ಕಣ್ಣೆದುರೇ ಸಿನಿಮೀಯ ರೀತಿ ಎಸ್ಕೇಪ್ ಆಗಿದ್ದಾರೆ.
ನ. 10ರಂದು ಚಿನ್ನದ ಸರ ಖರೀದಿಸುವ ನೆಪದಲ್ಲಿ ಆಭರಣ ಮಳಿಗೆಗೆ ಚಾಲಾಕಿ ಜೋಡಿ ಬಂದಿತ್ತು. ಟ್ರಯಲ್ ನೋಡುವ ನೆಪದಲ್ಲಿ 40 ಗ್ರಾಂ ತೂಕದ ಚಿನ್ನದ ಸರವನ್ನು ಯುವತಿ ಕೊರಳಿಗೆ ಹಾಕಿಕೊಂಡು ಮಿರರ್ ಮುಂದೆ ನಿಂತು ಕೆಲ ಕ್ಷಣ ನೋಡಿದಳು. ನಂತರ ಬ್ಯಾಗ್ನಿಂದ ಹಣ ತೆಗೆದು ಅಂಗಡಿಯವನ ಮುಂದೆ ಎಣಿಸಿ ಕಡಿಮೆ ಇದೆ ಎಂದ ಆಕೆ, ಬಾಕಿ ಹಣಕ್ಕೆ ಎಟಿಎಂ ಕಾರ್ಡ್ ಸ್ವೈಪ್ ಮಾಡ್ತೀರಾ? ಎಂದೂ ಕೇಳಿದಳು.
ಯುವತಿ ಜತೆ ಬಂದಿದ್ದ ಯುವಕ ಬೈಕ್ನ ಡಿಕ್ಕಿಯಲ್ಲಿ ಎಟಿಎಂ ಕಾರ್ಡ್ ಇದೆ. ಅದನ್ನು ತರುವೆ ಎಂದು ಅಂಗಡಿಯಿಂದ ಹೊರ ಬಂದ. ಈ ವೇಳೆ ಇನ್ನೊಂದು ಸರ ತೋರಿಸಿ ಎಂದ ಆಕೆ, ಅಂಗಡಿಯವನ ಗಮನ ಬೇರೆಡೆ ಸೆಳೆಯುತ್ತಿದ್ದಳು. ಅಷ್ಟೊತ್ತಿಗೆ ಎಟಿಎಂ ಕಾರ್ಡ್ ತರಲು ಹೋದ ವ್ಯಕ್ತಿ ಅಂಗಡಿ ಹೊರಗೆ ಬೈಕ್ ಸ್ಟಾರ್ಟ್ ಮಾಡುತ್ತಿದ್ದಂತೆ ಟ್ರಯಲ್ಗೆ ಪಡೆದ 40 ಗ್ರಾಂ ಚಿನ್ನದ ಸರದ ಜತೆ ಅಂಗಡಿಯಿಂದ ಹೊರ ಹೋದ ಯುವತಿ ಬೈಕ್ ಹತ್ತಿ ಎಸ್ಕೇಪ್ ಆದಳು.
ಆಕೆ ಬೈಕ್ ಹತ್ತಿ ಹೋಗುತ್ತಿದ್ದಂತೆ ಎಚ್ಚೆತ್ತ ಅಂಗಡಿಯವ ಹೊರ ಹೋಡಿದರೂ ಚಾಲಾಕಿ ಕಳ್ಳ ಜೋಡಿ ಸಿಗಲಿಲ್ಲ. ಆರೋಪಿಗಳ ಸಂಪೂರ್ಣ ಕೃತ್ಯ ಅಂಗಡಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಜುವೆಲ್ಲರಿ ಶಾಪ್ ಮಾಲೀಕ ಜೀವನ್ ಭೀಮಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಘಟನೆ ಸಂಬಂಧ ಅರೋಪಿ ರಾಘವೇಂದ್ರ ಎಂಬಾತನನ್ನು ಬಂಧಿಸಲಾಗಿದೆ.
ರಾತ್ರೋರಾತ್ರಿ ಮನೆಯಲ್ಲೇ ಪತ್ನಿಯನ್ನು ಕೊಚ್ಚಿ ಹಾಕಿದ ಭೂಪ! ಕಾರಣ ಕೇಳಿದ್ರೆ ಶಾಕ್ ಆಗ್ತೀರಿ
ತಂಗಿ ಗಂಡನಿಂದಲೇ ನಡೆಯಿತು ಘೋರ ಕೃತ್ಯ, ರಕ್ತದ ಮಡುವಲ್ಲಿ ಒದ್ದಾಡುತ್ತಾ ಪ್ರಾಣಬಿಟ್ಟ ಅತ್ತಿಗೆ!