More

    ಜೈನ ಸಮುದಾಯದ ಕಾರ್ಯ ಶ್ಲಾಘನೀಯ

    ನಾಲತವಾಡ: ಧಾರ್ಮಿಕ ನೆಲೆಗಟ್ಟಿನ ಮೇಲೆ ಬದುಕು ಕಟ್ಟಿಕೊಂಡು ಹೆತ್ತ ಮಕ್ಕಳನ್ನು ತಮ್ಮ ಧರ್ಮದ ಪ್ರಚಾರಕ್ಕೆ ಅನುವು ಮಾಡಿಕೊಡುವ ಜೈನ ಸಮುದಾಯದ ಕಾರ್ಯ ಶ್ಲಾಘನೀಯ ಎಂದು ಮಾಜಿ ಸಚಿವ ಸಿ.ಎಸ್.ನಾಡಗೌಡ ಹೇಳಿದರು.

    ಪಟ್ಟಣದ ದಿನೇಶ ಓಸ್ವಾಲ ಅವರ ಪುತ್ರ ಕುಶಾಲಕುಮಾರ ಅವರ ಸನ್ಯಾಸ ದಿಕ್ಷೆಯ ನಿಮಿತ್ತ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.

    ರಾಜಸ್ಥಾನದ ನಾಕೂಡಾಜಿ ಜೈನ್ ತೀರ್ಥ ಸ್ಥಾನದಲ್ಲಿ ನ.19 ರಂದು ಲೋಕ ಕಲ್ಯಾಣಕ್ಕಾಗಿ ಸನ್ಯಾಸತ್ವ ಸ್ವೀಕರಿಸುತ್ತಿರುವುದು ನಿಜಕ್ಕೂ ಧರ್ಮದ ಅದ್ಭುತ ಕಾರ್ಯ ಎಂದರು.

    ಈ ವೇಳೆ ಸನ್ಯಾಸತ್ವ ಸ್ವೀಕರಿಸಲಿರುವ ಕುಶಾಲಕುಮಾರ ಮಾತನಾಡಿದರು. ಪಪಂ ಸದಸ್ಯರಾದ ಪೃಥ್ವಿರಾಜ ನಾಡಗೌಡ, ಶಂಕರರಾವ್ ದೇಶಮುಖ, ಗುರುಪ್ರಸಾದ ದೇಶಮುಖ, ಅಮರ ದೇಶಮುಖ, ಎಂ.ಎಸ್.ಪಾಟೀಲ, ಶಿವಪ್ಪಗೌಡ ತಾತರಡ್ಡಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts