ಶಿರಸಿ: ಗಂಡನ ಮೇಲಿನ ಸಿಟ್ಟಿಗೆ ಮಗುವಿನೊಂದಿಗೆ ಮಹಿಳೆಯೋರ್ವಳು ನೆಲಬಾವಿಗೆ ಜಿಗಿದ ಘಟನೆ ತಾಲೂಕಿನ ಮಂಜುಗುಣಿ ಸಮೀಪದ ತೆಪ್ಪಾರಿನಲ್ಲಿ ಗುರುವಾರ ಸಂಜೆ ನಡೆದಿದೆ. ಆದರೆ, ಪುಟಾಣಿ ಮಗು ಸಾವಿಗೀಡಾಗಿದ್ದು, ಮಹಿಳೆಯನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಇಲ್ಲಿಯ ನಾಗವೇಣಿ ವೆಂಕಟ್ರಮಣ ಮರಾಠಿ ಈ ಕೃತ್ಯ ಮಾಡಿದ್ದಾಳೆ. ಗಂಡನೊAದಿಗೆ ಜಗಳವಾಡಿ ಮನೆ ಬಿಟ್ಟು ಬಂದಿದ್ದ ಈಕೆ ತನ್ನ ೧.೬ ವರ್ಷದ ಮಗು ಹರ್ಷಿತಾಳೊಂದಿಗೆ ಮನೆ ಸೀಪದ ಗದ್ದೆಯಲ್ಲಿದ್ದ ಬಾವಿಗೆ ಜಿಗಿದಿದ್ದಾಳೆ. ಆದರೆ, ಬಾವಿಯಲ್ಲಿ ಮುಳುಗುವಷ್ಟು ನೀರಿಲ್ಲದ ಕಾರಣ ಬಾವಿಗೆ ಜೋಡಿಸಲಾಗಿದ್ದ ಪಂಪ್ ಸೆಟ್ ನ ಪೈಪ್ ಹಿಡಿಕೊಂಡು ಚೀರಾಡಿದ್ದಾಳೆ. ಮಹಿಳೆಯ ಚೀರಾಟವನ್ನು ಕೇಳಿದ ಸ್ಥಳೀಯರು ಆಕೆ ಮತ್ತು ಮಗುವನ್ನು ಮೇಲಕ್ಕೆತ್ತಿ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಮಗು ಅಷ್ಟರೊಳಗೆ ಇಹಲೋಕ ತ್ಯಜಿಸಿತ್ತು.
ಮಗುವಿನ ಸಾವಿಗೆ ಕಾರಣಳಾದ ತಾಯಿ ಅಪರಾಧಿ ಎಂದು ಪರಿಗಣಿಸಲಾಗಿದ್ದು, ಆಕೆಯ ಮೇಲೆ ಕೊಲೆ ಮಾಡಿದ ಪ್ರಕರಣ ಗ್ರಾಮೀಣ ಠಾಣೆಯಲ್ಲಿ ದಾಖಲಾಗಿದೆ.
ಇದನ್ನೂ ಓದಿ: ಹುಡುಗಿಯ ಹುಚ್ಚಿನಲ್ಲಿ ಗೆಳೆಯನಿಗೇ ಚಾಕು ಇರಿದವನಿಗೆ 10 ವರ್ಷ ಜೈಲು