ಮದುವೆಯಾಗಿ ಕೆಲ ತಿಂಗಳು ಕಳೆದ ಬಳಿಕ ದಂಪತಿಗೆ ಸಾಮಾನ್ಯವಾಗಿ ಎದುರಾಗುವ ಪ್ರಶ್ನೆ ಏನೆಂದರೆ ಏನಾದರೂ ವಿಶೇಷ ಇದೆಯೇ? ಎಂಬುದು. ಅಂದರೆ, ಮಗು ಮಾಡಿಕೊಳ್ಳುತ್ತಿದ್ದೀರಾ ಎಂಬುದು ಈ ಮಾತಿನ ಅರ್ಥ. ಮದುವೆಯಾಗಿ ಒಂದೆರೆಡು ವರ್ಷಗಳ ಕಳೆದರಂತೂ ಸಂಬಂಧಿಕರು ಅಥವಾ ಸ್ನೇಹಿತರ ಮನೆಗೆ ಹೋದಾಗ ನಿಮಗೆ ಎಷ್ಟು ಮಕ್ಕಳು ಎಂದು ಮೊದಲು ಕೇಳುತ್ತಾರೆ. ಮದುವೆಯಾಗಿ ಮಕ್ಕಳಾಗದ ಇಂತಹ ಪ್ರಶ್ನೆಗಳಿಂದ ಇರುಸು ಮುರುಸು ಅನುಭವಿಸುವುದು ಸಹಜ. ಇದೀಗ ಇಂಥದ್ದೇ ಪರಿಸ್ಥಿತಿಯನ್ನು ತಾರಾದಂಪತಿ ಎದುರಿಸಿರುವುದಾಗಿ ಕ್ಯಾಮೆರಾ ಮುಂದೆಯೇ ಬಹಿರಂಗಪಡಿಸಿದ್ದಾರೆ.
ಸಾಮಾನ್ಯ ಜನರಾಗಲಿ ಅಥವಾ ಸೆಲೆಬ್ರಿಟಿಗಳಾಗಲಿ ಜನರ ದೃಷ್ಟಿಯಲ್ಲಿ ಮದುವೆಯಾದ ಕೂಡಲೇ ಮಕ್ಕಳಾಗಬೇಕು. ನಟಿ ಲಾವಣ್ಯ ಭಾರಧ್ವಾಜ್ ಹಾಗೂ ಶಶಿ ಹೆಗಡೆ ಧಾರಾವಾಹಿಯಲ್ಲಿ ನಟಿಸುವ ಮೂಲಕ ಕನ್ನಡಿಗರಿಗೆ ಚಿರಪರಿಚಿತರು. ಲಾವಣ್ಯ ಅವರು ಶ್ರೀರಸ್ತು ಶುಭಮಸ್ತು ಸೀರಿಯಲ್ನಲ್ಲಿ ನಟಿಸುತ್ತಿದ್ದರೆ, ಶಶಿ ಹೆಗಡೆ ಅಮೃತಧಾರೆ ಸೀರಿಯಲ್ನಲ್ಲಿ ನಟನೆ ಮಾಡುತ್ತಿದ್ದಾರೆ. ಈ ಎರಡೂ ಸೀರಿಯಲ್ ಜೀ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿದೆ. ನಟನೆ ಮಾತ್ರವಲ್ಲದೆ, ಸಾಮಾಜಿಕ ಜಾಲತಾಣಗಳಲ್ಲೂ ಈ ಜೋಡಿ ಸಕ್ರಿಯವಾಗಿದೆ.
ಈ ಸೆಲೆಬ್ರಿಟಿ ಜೋಡಿ ಮದುವೆಯಾಗಿ ಎರಡು ವರ್ಷಗಳಾಗಿವೆ. ಆದರೆ, ಅವರಿಗೆ ಇನ್ನೂ ಮಕ್ಕಳಿಲ್ಲ. ಈ ವಿಷಯದ ಬಗ್ಗೆ ಆಗಾಗ ಈ ಜೋಡಿಗೆ ಪ್ರಶ್ನೆ ಎದುರಾಗುತ್ತಲೇ ಇದೆ. ಈ ಪ್ರಶ್ನೆಯನ್ನು ಕೇಳಿ ಇಬ್ಬರು ಬೇಸತ್ತಿದ್ದಾರೆ. ಇನ್ನು ಮುಂದೆ ಬೇರೆ ಯಾರೂ ತಮಗೆ ಇಂಥಾ ಪ್ರಶ್ನೆಯನ್ನು ಕೇಳಬಾರದು ಅಂತ ತಮ್ಮ ನಡುವಿನ ಪರಿಸ್ಥಿತಿಯನ್ನು ಲಾವಣ್ಯ ಬಿಚ್ಚಿಟ್ಟಿದ್ದಾರೆ. ಈ ಎರಡು ಷರತ್ತಿನಿಂದಾಗಿ ಇನ್ನೂ ಮಕ್ಕಳಾಗುತ್ತಿಲ್ಲ ಎಂದು ಲಾವಣ್ಯ ಹೇಳಿದ್ದಾರೆ. ಆ ಷರತ್ತುಗಳು ಏನು ಎಂಬುದನ್ನು ಸ್ಟಾರ್ ಸುವರ್ಣ ವಾಹಿನಿಯ ಸುವರ್ಣ ಸೂಪರ್ ಸ್ಟಾರ್ ಶೋನಲ್ಲಿ ಬಹಿರಂಗಪಡಿಸಿದ್ದಾರೆ.
ಮದುವೆಗೂ ಮುನ್ನ ಲಾವಣ್ಯ ಅವರು ಶಶಿ ಹೆಗಡೆಗೆ ಎರಡು ಷರತ್ತುನ್ನು ಹಾಕಿದ್ದಾರಂತೆ. ಆ ಷರತ್ತಿಗೆ ಒಪ್ಪಿದರೆ ಮಾತ್ರ ಮಕ್ಕಳು ಮಾಡಿಕೊಳ್ಳುವುದಾಗಿ ಹೇಳಿದ್ದರಂತೆ. ಆ ಷರತ್ತುಗಳು ಏನು ಅಂದರೆ, ಮೊದಲನೆಯದು ಮದುವೆ ಬಳಿಕ ಹನಿಮೂನ್ಗೆ ಕರೆದೊಯ್ಯಬೇಕು ಎಂಬುದು. ಎರಡನೇ ಷರತ್ತು ಏನೆಂದರೆ, ಮನಾಲಿ ಅಥವಾ ವಿದೇಶದಲ್ಲೇ ಹನಿಮೂನ್ ಆಗಬೇಕು ಎಂಬುದು. ಆದರೆ, ಮದುವೆಯಾಗಿ ಎರಡು ವರ್ಷವಾದರೂ ಈ ಎರಡು ಕಂಡೀಷನ್ ಅನ್ನು ಶಶಿ ಹೆಗಡೆ ಪೂರೈಸಿಲ್ಲ. ಈ ಕಾರಣಕ್ಕೆ ಇನ್ನೂ ಮಕ್ಕಳಾಗಿಲ್ಲ ಎನ್ನುತ್ತಾರೆ ಲಾವಣ್ಯ.
ಹನಿಮೂನ್ ಎರಡು ಬಾರಿ ಮುಂದೂಡಿಕೆ
ಈ ಹಿಂದೆ ಎರಡು ಬಾರಿ ಹನಿಮೂನ್ಗೆಂದು ಪ್ಲಾನ್ ಮಾಡಿದಾಗ ಸಂಬಂಧಿಕರು ತೀರಿಕೊಂಡ ಹಿನ್ನೆಯಲ್ಲಿ ಎರಡು ಬಾರಿಯೂ ಹನಿಮೂನ್ ರದ್ದಾಯಿತು ಎಂದು ಲಾವಣ್ಯ ಹೇಳಿದರು. ಇದೀಗ ಮತ್ತೆ ಹನಿಮೂನ್ ಪ್ಲಾನ್ ಮಾಡಿರುವುದಾಗಿ ಇದೇ ಸಂದರ್ಭದಲ್ಲಿ ಲಾವಣ್ಯ ತಿಳಿಸಿದರು. ಮುಂದಿನ ಜೂನ್ನಲ್ಲಿ ಹನಿಮೂನ್ಗೆ ಹೋಗುವುದಾಗಿ ತಿಳಿಸಿದ್ದಾರೆ. ಈ ಕಂಡೀಷನ್ಗಳಿಂದ ನಮಗಿನ್ನೂ ಮಕ್ಕಳಾಗಿಲ್ಲ ಎಂದು ಲಾವಣ್ಯ ಕ್ಯಾಮೆರಾ ಮುಂದೆ ಬಹಿರಂಗಪಡಿಸುವ ಮೂಲಕ ಪ್ರಶ್ನೆ ಕೇಳುವವರ ಬಾಯಿ ಮುಚ್ಚಿಸಿದ್ದಾರೆ.
ಅಂದಹಾಗೆ ಲಾವಣ್ಯ ಮತ್ತು ಶಶಿ ಹೆಗಡೆ ಇಬ್ಬರು ‘ರಾಜಾ ರಾಣಿ ಸೀರಿಯಲ್’ ಸೆಟ್ನಲ್ಲಿ ಭೇಟಿಯಾದರು. ಈ ಸೀರಿಯಲ್ನಲ್ಲಿ ಇಬ್ಬರು ಅಣ್ಣ-ತಂಗಿ ಪಾತ್ರವನ್ನು ಮಾಡುತ್ತಿದ್ದರು. ಹೀಗಾಗಿ ಲಾವಣ್ಯ, ಶಶಿ ಹೆಗಡೆ ಅವರನ್ನು ಬ್ರೋ ಎಂದು ಕರೆಯುತ್ತಿದ್ದರು. ಆದರೆ, ಬ್ರೋ ಆಗಿದ್ದ ಶಶಿ ಇದೀಗ ಪತಿಯಾಗಿದ್ದಾರೆ. ಸದ್ಯ ಲಾವಣ್ಯ-ಶಶಿ ಹೆಗಡೆ ಹನಿಮೂನ್ ಕಂಡೀಷನ್ ವಿಡಿಯೋ ತುಣುಕು ವೈರಲ್ ಆಗುತ್ತಿದೆ.
ಹಿಟ್ಮ್ಯಾನ್ ರೋಹಿತ್ ಶರ್ಮಗಾಗಿ ನನ್ನ ಜೀವನವನ್ನೇ ಪಣಕ್ಕಿಡುತ್ತೇನೆ ಅಂದಿದ್ದೇಕೆ ಪ್ರೀತಿ ಝಿಂಟಾ?