More

    ಶ್ರೀಶೈಲ ಜಗದ್ಗುರುಗಳ ಮೌನ ಅನುಷ್ಠಾನ ಆ. 5ರಿಂದ

    ದಾಂಡೇಲಿ: ಲೋಕ ಕಲ್ಯಾಣಕ್ಕಾಗಿ ಕುಂಬಾರವಾಡದ ಕಲಸಾಯಿ ಗ್ರಾಮದ ಬಳಿಯ ಶಾಖಾ ಮಠದಲ್ಲಿ ಆ. 5ರಿಂದ 11ರವರೆಗೆ ಶ್ರೀಶೈಲ ಜಗದ್ಗುರು ಪಂಡಿತ ಆರಾಧ್ಯ ಶಿವಾಚಾರ್ಯ ಡಾ. ಚನ್ನಸಿದ್ಧ್ದಾಮ ಮಹಾಸ್ವಾಮಿಜಿಗಳ ಮೌನ ಅನುಷ್ಠಾನ ಕಾರ್ಯಕ್ರಮದ ಪೂರ್ವಭಾವಿ ಸಭೆ ಶುಕ್ರವಾರ ನಡೆಯಿತು.

    ಅಧ್ಯಕ್ಷತೆ ವಹಿಸಿದ್ದ ಅಂಬಿಕಾನಗರದ ಶ್ರೀ ಈಶ್ವರ ಪಂಡಿತಾರಾಧ್ಯ ಶಿವಾಚಾರ್ಯರು ಮಾತನಾಡಿ, ಆ. 5ರಿಂದ 11ರವರೆಗೆ ಮೌನ ಅನುಷ್ಠಾನ ಮತ್ತು ಸಂಜೆ 4 ರಿಂದ 5 ಗಂಟೆಯವರೆಗೆ ಜಗದ್ಗುರುಗಳ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

    ಆ. 12ರಂದು ಕುಂಬಾರವಾಡದ ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ 8.30ರಿಂದ ಜಗದ್ಗುರುಗಳ ಮಹಾ ಪೂಜೆ, ಲಿಂಗ ದಿಕ್ಷೆ, ಧರ್ಮ ಸಭೆ, ಮಂಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 11.30ರ ನಂತರ ಆಶೀರ್ವಚನ ಏರ್ಪಡಿಸಲಾಗಿದೆ ಎಂದರು.

    ಸಭೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಉ.ಕ. ಜಿಲ್ಲೆಯ ಅಧ್ಯಕ್ಷ ಉದಯ ಹೂಲಿ, ಉ.ಕ. ಜಿಲ್ಲೆಯ ಜಾನಪದ ಸಾಹಿತ್ಯದ ಅಧ್ಯಕ್ಷ ಶಿವ ದೇಸಾಯಿ, ಸಂಘಟನಾ ಸಮಿತಿಯ ಖಜಾಂಚಿ ಶಂಕರ ಜಡೆಹಿರೇಮಠ, ಸದಸ್ಯ ಶೇಖರ ಹಂಚಿನಾಳಮಠ, ನಗರದ ವೀರಶೈವ ಸೇವಾ ಸಂಘದ ಅಧ್ಯಕ್ಷ ಬಸವರಾಜ ಕಲಶೆಟ್ಟಿ ಇದ್ದರು.

    ಅಖಿಲ ಭಾರತೀಯ ವೀರಶೈವ ಮಹಾಸಭಾದ ಕಾರ್ಯದರ್ಶಿ ಮಲ್ಲಿಕಾರ್ಜುನ ಕೋರಗಲ್ ಸ್ವಾಗತಿಸಿ, ನಿರೂಪಿಸಿದರು. ದಾಂಡೇಲಿ ತಾಲೂಕು ಅಧ್ಯಕ್ಷ ಯು.ಎಸ್ ಪಾಟೀಲ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts