More

    ಕರೊನಾದಿಂದ ಗುಣಮುಖರಾಗಿದ್ದರೂ ಸಾವಿಗೀಡಾದ ಕೈದಿ; ಹಾಗಾದರೆ ಆಗಿದ್ದೇನು?

    ಶಿವಮೊಗ್ಗ: ಕೋವಿಡ್​-19 ಸೋಂಕಿಗೆ ಒಳಗಾಗಿ ಗುಣಮುಖರಾಗಿದ್ದರೂ ಈ ಕೈದಿ ಬದುಕಿ ಉಳಿಯಲಿಲ್ಲ. ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿದ್ದ ಇಸ್ಮಾಯಿಲ್​ ಖಾನ್​ (72) ಇಂದು ಮೆಗ್ಗಾನ್​ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

    ಶಿವಮೊಗ್ಗದ ಟ್ಯಾಂಕ್ ಮೊಹಲ್ಲಾ ನಿವಾಸಿ ಇಸ್ಮಾಯಿಲ್ ಖಾನ್​ ಜಿಲ್ಲಾ ಖಜಾನೆ ಅಧಿಕಾರಿ ಆಗಿ ನಿವೃತ್ತರಾಗಿದ್ದರು. ಆದರೆ ನಿವೃತ್ತಿಗೂ ಮುನ್ನ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅನ್ವಯ ದಾಖಲಾಗಿದ್ದ ಪ್ರಕರಣದಿಂದಾಗಿ ಇವರಿಗೆ ಜೈಲು ಶಿಕ್ಷೆಯಾಗಿತ್ತು.

    ಈ ಪ್ರಕರಣದಲ್ಲಿ ಇವರಿಗೆ ಕಳೆದ ಏಪ್ರಿಲ್ 5ರಂದು 1 ವರ್ಷ ಸಾದಾ ಶಿಕ್ಷೆ ಮತ್ತು 1.5 ಲಕ್ಷ ರೂಪಾಯಿ ದಂಡ ವಿಧಿಸಿ ಶಿವಮೊಗ್ಗ ನ್ಯಾಯಾಲಯ ಆದೇಶ ಹೊರಡಿಸಿತ್ತು. ಹೀಗೆ ಜೈಲುಪಾಲಾಗಿದ್ದ ಇಸ್ಮಾಯಿಲ್ ಕೆಲವೇ ದಿನಗಳಲ್ಲಿ ಕೋವಿಡ್​ ಸೋಂಕಿಗೆ ಒಳಗಾಗಿದ್ದರು. ನಂತರ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಗುಣಮುಖರಾಗಿದ್ದರಿಂದ ಪುನಃ ಜೈಲಿಗೆ ಕರೆತರಲಾಗಿತ್ತು.

    ಇದನ್ನೂ ಓದಿ: ಹೆಂಡತಿಯನ್ನು ಇನ್ನೊಬ್ಬನ ಜತೆ ನೋಡಬಾರದ ಸ್ಥಿತಿಯಲ್ಲಿ ನೋಡಿದ ಗಂಡ; ಇಬ್ಬರನ್ನೂ ಹೊರಕ್ಕೆಳೆದು ಕಂಬಕ್ಕೆ ಕಟ್ಟಿ ಥಳಿಸಿದ..

    ಹೀಗೆ ಕರೊನಾದಿಂದ ಗುಣಮುಖರಾಗಿ ಕಾರಾಗೃಹಕ್ಕೆ ಮರಳಿದ್ದ ಇಸ್ಮಾಯಿಲ್ ಖಾನ್​ ಆರೋಗ್ಯದಲ್ಲಿ ಮೇ 24ರಂದು ಏರುಪೇರಾಗಿತ್ತು. ಇದರಿಂದ ತೀವ್ರ ಅಸ್ವಸ್ಥಗೊಂಡ ಇವರನ್ನು ಮೆಗ್ಗಾನ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಇವರು ಇಂದು ಹೃದಯಾಘಾತಕ್ಕೆ ಒಳಗಾಗಿ ಕೊನೆಯುಸಿರೆಳೆದರು.

    ಫಸ್ಟ್ ಡೋಸ್​ ಲಸಿಕೆ ತೆಗೆದುಕೊಳ್ಳುತ್ತಿದ್ದಂತೆ ಫಸ್ಟ್​ ಹೀಗೇನಾದ್ರೂ ಮಾಡ್ಬಿಟ್ಟೀರಾ ಜೋಕೆ..!!!

    ಏನಾಗುತ್ತೆ ವಾಟ್ಸ್​ಆ್ಯಪ್​, ಫೇಸ್​ಬುಕ್, ಟ್ವಿಟರ್ ಭವಿಷ್ಯ?; ಕೇಂದ್ರ ಸರ್ಕಾರದಿಂದ ಹೊರಬಿತ್ತು ಮತ್ತೊಂದು ಸೂಚನೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts