ಹುಬ್ಬಳ್ಳಿ: ಅಬಕಾರಿ ಇಲಾಖೆಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ನ್ಯಾಯಾಧೀಶರು 1 ವರ್ಷ ಜೈಲು ಶಿಕ್ಷೆ ಆದೇಶ ಪ್ರಕಟಿಸಿದ್ದರಿಂದ ಬೇಸರಗೊಂಡ ಅಪರಾಧಿ ತಿಪ್ಪಯ್ಯ ಕೊರವರ ಕೋರ್ಟ್ನ ನಾಲ್ಕನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿ, ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾನೆ.
ಬುಧವಾರ ಸಂಜೆ ಶಿಕ್ಷೆ ಪ್ರಕಟವಾದ ಮೇಲೆ ಕೋರ್ಟ್ ಹಾಲ್ನಿಂದ ಹೊರಗೆ ಬಂದ ಅಪರಾಧಿ, ಪೊಲೀಸರಿಂದ ತಪ್ಪಿಸಿಕೊಂಡು ನಾಲ್ಕನೇ ಮಹಡಿ ಯಿಂದ ಜಿಗಿದುಬಿಟ್ಟ. ಆದರೆ, ಕೋರ್ಟ್ ಸಂಕೀರ್ಣದ ಮೊದಲ ಮಹಡಿಯಲ್ಲಿ ಕಟ್ಟಿದ್ದ ನೆಟ್ನಲ್ಲಿ ಆತ ಸಿಲುಕಿಕೊಂಡ. ಎಚ್ಚೆತ್ತುಕೊಂಡ ಪೊಲೀಸರು ಬಲೆಯನ್ನು ಕತ್ತರಿಸಿ ಆತನನ್ನು ರಕ್ಷಿಸಿ ಕಾರಾಗೃಹಕ್ಕೆ ಕರೆದೊಯ್ದರು.
ಟೆಕ್ಕಿಗಳೇ ಹುಷಾರ್!: ಬೆಂಗಳೂರಿನ ಎರಡು ಟಾಪ್ ಟೆಕ್ ಕಂಪನಿಗಳಲ್ಲೇ ಕರೊನಾ ಕಾಣಿಸಿಕೊಂಡಿದ್ದು