More

    ‘ಮಸೀದಿ, ದರ್ಗಾಗಳಲ್ಲಿ ರಾಮನಾಮ ಜಪಿಸಿ ದೀಪ ಬೆಳಗಿಸಿ’: ಮೌಲ್ವಿ ವಿಡಿಯೋ ವೈರಲ್

    ನವದೆಹಲಿ: ‘ಶ್ರೀರಾಮ್ ಜೈ ರಾಮ್ ಜೈ ಜೈ ರಾಮ್… ಎಲ್ಲರೂ ಮಸೀದಿ, ಮನೆಗಳ ಬಳಿ ದೀಪ ಹಚ್ಚಿ ಭಕ್ತಿಯಿಂದ ರಾಮನಾಮ ಜಪಿಸಿ…’ ಹೀಗೆ ಕರೆ ಕೊಟ್ಟವರು ಹಿಂದುವಲ್ಲ, ಅವರೊಬ್ಬ ಮುಸ್ಲಿಂ ಮೌಲ್ವಿ. ಅವರು ಆಡಿರುವ ಮಾತುಗಳ ವಿಡಿಯೋ ವೈರಲ್ ಆಗಿದೆ.

    ಇದನ್ನೂ ಓದಿ: ಅಯೋಧ್ಯೆ ರಾಮಮಂದಿರ ನಿರ್ಮಾಣ ವೆಚ್ಚ ಎಷ್ಟು? ಇದರಲ್ಲಿ ಸರ್ಕಾರಗಳ ಪಾಲೇನು? ಸಂಪೂರ್ಣ ವಿವರ ಇಲ್ಲಿದೆ..
    ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರ ಎಲ್ಲರ ಆರಾಧ್ಯ ದೈವ. ನಮ್ಮ ಪೂರ್ವಿಕರು ರಾಮನನ್ನು ಪೂಜಿಸುತ್ತಿದ್ದರು. ಅಯೋಧ್ಯೆಯ ರಾಮಜನ್ಮಸ್ಥಳದಲ್ಲಿ ಶ್ರೀರಾಮನ ವಿಗ್ರಹ ಪ್ರಾಣ ಪ್ರತಿಷ್ಠಾಪನಾ ಕಾರ್ಯ ವಿಧಾನಗಳ ನಡುವೆ ನಾವು ನಮ್ಮ ದರ್ಗಾಗಳಲ್ಲೂ ಕೂಡ ದೀಪ ಹಚ್ಚಿ ನಮಿಸೋಣ ಎಂದು ಭಾರತದಲ್ಲಿರುವ ಎಲ್ಲ ಮುಸಲ್ಮಾನರಿಗೂ ನಾನು ಮನವಿ ಮಾಡುತ್ತೇನೆ ಎಂದು ಆ ಮೌಲ್ವಿ ಹೇಳಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್​ ಆಗಿದೆ.

    ಮೊಘಲರ ಆಡಳಿತದ ವೇಳೆ ಅದೆಷ್ಟೋ ದೇವಸ್ಥಾನಗಳನ್ನು ಕೆಡವಲಾಗಿತ್ತು ಮತ್ತು ಮಸೀದಿಗಳನ್ನು ಕಟ್ಟಲಾಗಿದೆ. ಇದು ಸತ್ಯ ಘಟನೆಯಾಗಿದ್ದು, ಇದನ್ನು ಮರೆಮಾಚಬಾರದು. ಈಗ ಸಮಯ ಬಂದಿದೆ. ದೇವಾಲಯದ ಮೇಲೆ ಯಾವ ಯಾವ ಮಸೀದಿಗಳು ಇವೆಯೋ ಅವನ್ನು ಈಗ ನಾವೇ ಖುದ್ದಾಗಿ ತೆರವು ಮಾಡಿಕೊಡಬೇಕು. ಕೆಲವರು ನಿಮ್ಮನ್ನು ತಡೆಯಬಹುದು. ಆದರೆ, ವಾಸ್ತವವನ್ನು ಅರಿಯಬೇಕು. ಶ್ರೀರಾಮನನ್ನು ಭಜಿಸುವ ಜತೆಗೆ ದೇವಾಲಯಗಳಿಗೆ ತೆರಳಿ ಭಕ್ತಿಯಿಂದ ದೀಪ ಹಚ್ಚಿ ಎಂದು ಅವರು ಕರೆ ನೀಡಿದ್ದಾರೆ.

    ಬಿಜೆಪಿಯವರಿಗೆ ಟಾಂಗ್​ ಕೊಟ್ಟ ಕಾಂಗ್ರೆಸ್​ ನಾಯಕ ಬಿ ಕೆ ಹರಿಪ್ರಸಾದ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts