ಗುತ್ತಲ: ದೇಶಕ್ಕೆ ರೈತರು, ಸೈನಿಕರ ಸೇವೆ ಪ್ರಮುಖ. ಅದೇ ರೀತಿ ಹೆಸ್ಕಾಂಗಳಲ್ಲಿ ವಿದ್ಯುತ್ನ ಸಂಪರ್ಕ ಹಾಗೂ ದುರಸ್ತಿ ವೇಳೆ ಪ್ರಾಣದ ಹಂಗು ತೊರೆದು ಕಾರ್ಯ ಮಾಡುವ ಲೈನ್ ಮನ್ಗಳ ಕೆಲಸವೂ ಪ್ರಮುಖವಾಗಿದೆ ಎಂದು ಬಿಎಸ್ಎಫ್ ಯೋಧ ಅಶೋಕ ಹಾವೇರಿ ಹೇಳಿದರು.
ಪಟ್ಟಣದ ಹೆಸ್ಕಾಂ ಕಚೇರಿಯಲ್ಲಿ ಹಿಂದು ಜಾಗರಣ ವೇದಿಕೆ ಹಾಗೂ ಯುವಾ ಬ್ರಿಗೇಡ್ನ ಆಶ್ರಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಲೈನ್ವುನ್ಗಳ (ಶಕ್ತಿಮಾನ್) ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರವಾಹ ಹಾಗೂ ಅತಿವೃಷ್ಟಿ ಸಮಯದಲ್ಲಿ ಹಾಗೂ ಮಳೆ ನಿಂತ ನಂತರ ಲೈನ್ವುನ್ಗಳು ಪ್ರಾಣದ ಹಂಗು ತೊರೆದು ಕಾರ್ಯ ನಿರ್ವಹಿಸಿದ್ದಾರೆ. ಇಂದು ಅವರನ್ನು ಸನ್ಮಾನಿಸುತ್ತಿರುವುದು ಹೆಮ್ಮಯ ಹಾಗೂ ಶ್ಲಾಘನೀಯ ಕಾರ್ಯ ಎಂದರು.
ಬಂಜಾರ ಸಂಘದ ಜಿಲ್ಲಾಧ್ಯಕ್ಷ ಈರಪ್ಪ ಲಮಾಣಿ ಮಾತನಾಡಿ, ಅತಿವೃಷ್ಟಿಯಾದ ಸಂದರ್ಭದಲ್ಲಿ ಲೈನ್ವುನ್ಗಳ ಕಾರ್ಯ ಸವಾಲಿನಿಂದ ಕೂಡಿರುತ್ತದೆ. ಅಂಥ ವೇಳೆ ಜನರಿಗೆ ತೊಂದರೆಯಾಗದ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ನಮ್ಮ ಸಂಸ್ಕೃತಿ ಅಲ್ಲದ ಪ್ರೇಮಿಗಳ ದಿನಾಚರಣೆ ಬದಲು ಲೈನ್ವುನ್ಗಳನ್ನು ಗೌರವಿಸುತ್ತಿರುವುದು ಅರ್ಥ ಪೂರ್ಣ ಕಾರ್ಯಕ್ರಮವಾಗಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಕಲ್ಮಠದ ಶ್ರೀ ಗುರುಸಿದ್ಧ ಸ್ವಾಮೀಜಿ, ದಸಾರ ಉತ್ಸವ ಸಮಿತಿ ಅಧ್ಯಕ್ಷ ಚನ್ನಪ್ಪ ಕಲಾಲ, ಹೆಸ್ಕಾಂ ಸಹಾಯಕ ಂಜಿನಿಯರ್ ಕಿರಣಕುಮಾರ ಯಾದವ, ಕಿರಿಯ ಇಂಜಿನಿಯರ್ ಶಿವಾಜಿ ಸಂಗಮ್ಮನವರ ಮಾತನಾಡಿದರು.
ಗುತ್ತಲ ಹೆಸ್ಕಾಂನ 15 ಹಾಗೂ ನೀರಲಗಿ ವಿಭಾಗದ 5 ಲೈನ್ವುನ್ಗಳನ್ನು ಇದೇ ವೇಳೆ ಸನ್ಮಾನಿಸಲಾಯಿತು. ಎಪಿಎಂಸಿ ಅಧ್ಯಕ್ಷ ರಮೇಶ ಚಾವಡಿ, ಪಪಂ ಸದಸ್ಯ ರಮೇಶ ಮಠದ, ಲಿಂಗೇಶ ಬೆನ್ನೂರ, ಪರಮೇಶ ಕುರವತ್ತಿಗೌಡರ, ಬಸಣ್ಣ ಕಂಬಳಿ, ಪರಶುರಾಮ ಸಂಗಮ್ಮನವರ, ಸೋಮಣ್ಣ ಕಾಳಶೆಟ್ಟಿ, ಯುವಾ ಬ್ರಿಗೇಡ್ನ ಮೃತ್ಯುಂಜಯ ರಿತ್ತಿಮಠ, ಕುಮಾರ ಚಿಗರಿ ಇತರರು ಉಪಸ್ಥಿತರಿದ್ದರು.