More

    ರಮೇಶ್​​ ಅರವಿಂದ್ ಜತೆ ನಟಿಸಿದ್ದ ಬಾಲನಟಿ ಇಂದು ಐಎಎಸ್ ಆಫೀಸರ್

    ಬೆಂಗಳೂರು:  ಸ್ಯಾಂಡಲ್​​ವುಡ್​ ನಟ ರಮೇಶ್​​ ಅರವಿಂದ್​ ಅವರ ಜತೆ ತೆರೆ ಹಂಚಿಕೊಂಡಿದ್ದ ಬಾಲನಟಿ ಇಂದು ಐಎಎಸ್​​ ಅಧಿಕಾರಿಯಾಗಿ ಸೇವೆಸಲ್ಲಿಸುತ್ತಿದ್ದಾರೆ. ಈ ನಟಿ ಯಾರು? ಎನ್ನುವ ಮಾಹಿತಿ ಇಲ್ಲಿದೆ…

    90ರ ದಶಕದ ಕನ್ನಡ ಚಿತ್ರಗಳನ್ನು ನೋಡಿದವರಿಗೆ ಕೀರ್ತನಾ ಎಂಬ ಬಾಲನಟಿ ಚಿರಪರಿಚಿತ. ಕರ್ಪೂರದ ಗೊಂಬೆ, ಗಂಗಾ ಯಮುನ, ಮುದ್ದಿನ ಅಳಿಯ, ಉಪೇಂದ್ರ ಸರ್ಕಲ್ ಇನ್ಸ್‌ಪೆಕ್ಟರ್, ಓ ಮಲ್ಲಿಗೆ, ಲೇಡಿ ಕಮಿಷನರ್, ಹಬ್ಬ, ದೊರೆ, ​​ಸಿಂಹಾದ್ರಿ ಮುಂತಾದ ಜನಪ್ರಿಯ ಚಿತ್ರಗಳಲ್ಲಿ ಚೂಟಿ ಪುಟಾಣಿಯಾಗಿ ಕಾಣಿಸಿಕೊಂಡಿದ್ದರು ಕೀರ್ತನಾ. ಮತ್ತು ಟಿವಿ ಧಾರಾವಾಹಿಗಳಲ್ಲೂ ಕೂಡಾ ಕಾಣಿಸಿಕೊಂಡಿದ್ದಾರೆ.

    ಕೀರ್ತನಾ ಅವರು UPSC CSE 2020 ರಲ್ಲಿ AIR ರ್ಯಾಂಕ್ 167 ಅನ್ನು ಪಡೆದು ಇಂದು ಐಎಎಸ್ ಆಫೀಸರ್ ಆಗಿದ್ದಾರೆ.  ಭಾರತದ ಅತ್ಯಂತ ಕಠಿಣ ಪರೀಕ್ಷೆ ಪಾಸ್ ಮಾಡಿದ್ದಾರೆ. ತನ್ನ UPSC CSE ಸಿದ್ಧತೆಗಳನ್ನು ಪ್ರಾರಂಭಿಸುವ ಮೊದಲು, ಕೀರ್ತನಾ 2011 ರಲ್ಲಿ ಕರ್ನಾಟಕ ಆಡಳಿತ ಸೇವೆ (KAS) ಪರೀಕ್ಷೆ ತೆಗೆದುಕೊಂಡು ಉತ್ತೀರ್ಣರಾಗಿದ್ದರು.

    ರಮೇಶ್​​ ಅರವಿಂದ್ ಜತೆ ನಟಿಸಿದ್ದ ಬಾಲನಟಿ ಇಂದು ಐಎಎಸ್ ಆಫೀಸರ್

    ಕೆಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವಾಗNS ಅವರು ಐಎಎಸ್ ಅಧಿಕಾರಿಯಾಗಿ ರಾಷ್ಟ್ರಕ್ಕೆ ಹೆಚ್ಚಿನ ಕೊಡುಗೆ ನೀಡಬಹುದು ಎಂಬ ಕಾರಣಕ್ಕೆ ಯುಪಿಎಸ್ಸಿ ಪರೀಕ್ಷೆಗೆ ಸಿದ್ಧತ ನಡೆಸತೊಡಗಿದರು. 6ನೇ ಪ್ರಯತ್ನದಲ್ಲಿ ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡಿದ ಕೀರ್ತನಾ IAS ಅಧಿಕಾರಿಯಾಗಿ ತಮ್ಮ ಮೊದಲ ಪೋಸ್ಟಿಂಗ್‌ನಲ್ಲಿ, ಮಂಡ್ಯ ಜಿಲ್ಲೆಯ ಸಹಾಯಕ ಆಯುಕ್ತರಾಗಿ ಆಡಳಿತಾತ್ಮಕ ಪಾತ್ರವನ್ನು ವಹಿಸಿಕೊಂಡರು. ಅಂದು ಬಾಲನಟಿಯಾಗಿ ಸಾಲು..ಸಾಲು ಸಿನಿಮಾ ಮಾಡಿದ್ದ ನಟಿ ಇಂದು ಸರ್ಕಾರಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

    ಪತ್ನಿಯ ದೇಹವನ್ನು 224 ತುಂಡುಗಳಾಗಿ ಕತ್ತರಿಸಿ ನದಿಗೆ ಎಸೆದ

    ಸಮುದ್ರದಲ್ಲಿ ದೋಣಿ ಮುಳುಗಿ 90 ಜನ ಜಲಸಮಾಧಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts