ಬೆಂಗಳೂರು: ಜಿರಳೆ ಸಾಯಿಸಲು ಹೋಗಿ ಆರು ವರ್ಷದ ಬಾಲಕಿಯೊಬ್ಬಳ ಸಾವಿಗೆ ಮನೆ ಮಾಲೀಕನೊಬ್ಬ ಕಾರಣನಾದ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ವಸಂತನಗರದ ಐದನೇ ಅಡ್ಡರಸ್ತೆ ಬಳಿ ಇರುವ ಶಿವಶಂಕರ್ ಎಂಬವರ ಮಾಲೀಕತ್ವದ ಮನೆಯಲ್ಲಿ ಈ ಪ್ರಕರಣ ನಡೆದಿದೆ. ಶಿವಶಂಕರ್ ಅವರಿಗೆ ಸೇರಿದ್ದ ಕಟ್ಟಡದ ಮನೆಯಲ್ಲಿ ವಿನೋದ್ ಎಂಬವರ ಸಂಸಾರ ನೆಲೆಸಿತ್ತು.
ಇದನ್ನೂ ಓದಿ: ಮನೆ ಮೇಲೇ ಕುಸಿದ ಗುಡ್ಡ, ಮಣ್ಣಿನಡಿ ಸಿಲುಕಿಕೊಂಡಿದ್ದಾರೆ ಇಬ್ಬರು ಮಕ್ಕಳು…
ಮನೆಯಲ್ಲಿ ಜಿರಳೆ ಕಾಟ ಎಂದು ಮನೆ ಮಾಲೀಕ ಜಿರಳೆ ಔಷಧ ಸಿಂಪಡಿಸಿದ್ದ. ಆದರೆ ವಾರದ ಹಿಂದೆ ಊರಿಗೆ ಹೋಗಿದ್ದ ವಿನೋದ್, ಸಂಸಾರ ಸಮೇತರಾಗಿ ಮನೆಗೆ ಮರಳಿದ್ದಾಗ ಈ ವಿಚಾರ ಗೊತ್ತಿರದೆ ಹಾಗೇ ಮಲಗಿದ್ದರು. ಹೀಗಾಗಿ ಜಿರಳೆ ಔಷಧದಿಂದ ಉಸಿರುಗಟ್ಟಿ ಅವರ ಪುತ್ರಿ ಆರು ವರ್ಷದ ಅಹನಾ ಸಾವಿಗೀಡಾಗಿದ್ದಾಳೆ. ಇನ್ನು ಅಸ್ವಸ್ಥಗೊಂಡಿರುವ ಮನೆಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಮನೆ ಮಾಲೀಕನ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಳೆ ‘ವಿಜಯಾನಂದ’ ಟೀಸರ್ ರಿಲೀಸ್; ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆ
‘ಸರ್ಕಾರದಿಂದ’ ಮಹಿಳೆಯರಿಗೆ ಅರಿಶಿನ-ಕುಂಕುಮ, ಹಸಿರು ಬಳೆ ವಿತರಣೆ; ಮುಜರಾಯಿ ದೇವಸ್ಥಾನಗಳಿಗೆ ಸೂಚನೆ