More

    ಜಿರಳೆ ಸಾಯಿಸಲು ಹೋಗಿ ಆರು ವರ್ಷದ ಬಾಲಕಿಯ ಸಾವಿಗೆ ಕಾರಣನಾದ ಮನೆ ಮಾಲೀಕ!

    ಬೆಂಗಳೂರು: ಜಿರಳೆ ಸಾಯಿಸಲು ಹೋಗಿ ಆರು ವರ್ಷದ ಬಾಲಕಿಯೊಬ್ಬಳ ಸಾವಿಗೆ ಮನೆ ಮಾಲೀಕನೊಬ್ಬ ಕಾರಣನಾದ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

    ಬೆಂಗಳೂರಿನ ವಸಂತನಗರದ ಐದನೇ ಅಡ್ಡರಸ್ತೆ ಬಳಿ ಇರುವ ಶಿವಶಂಕರ್ ಎಂಬವರ ಮಾಲೀಕತ್ವದ ಮನೆಯಲ್ಲಿ ಈ ಪ್ರಕರಣ ನಡೆದಿದೆ. ಶಿವಶಂಕರ್ ಅವರಿಗೆ ಸೇರಿದ್ದ ಕಟ್ಟಡದ ಮನೆಯಲ್ಲಿ ವಿನೋದ್ ಎಂಬವರ ಸಂಸಾರ ನೆಲೆಸಿತ್ತು.

    ಇದನ್ನೂ ಓದಿ: ಮನೆ ಮೇಲೇ ಕುಸಿದ ಗುಡ್ಡ, ಮಣ್ಣಿನಡಿ ಸಿಲುಕಿಕೊಂಡಿದ್ದಾರೆ ಇಬ್ಬರು ಮಕ್ಕಳು…

    ಮನೆಯಲ್ಲಿ ಜಿರಳೆ ಕಾಟ ಎಂದು ಮನೆ ಮಾಲೀಕ ಜಿರಳೆ ಔಷಧ ಸಿಂಪಡಿಸಿದ್ದ. ಆದರೆ ವಾರದ ಹಿಂದೆ ಊರಿಗೆ ಹೋಗಿದ್ದ ವಿನೋದ್, ಸಂಸಾರ ಸಮೇತರಾಗಿ ಮನೆಗೆ ಮರಳಿದ್ದಾಗ ಈ ವಿಚಾರ ಗೊತ್ತಿರದೆ ಹಾಗೇ ಮಲಗಿದ್ದರು. ಹೀಗಾಗಿ ಜಿರಳೆ ಔಷಧದಿಂದ ಉಸಿರುಗಟ್ಟಿ ಅವರ ಪುತ್ರಿ ಆರು ವರ್ಷದ ಅಹನಾ ಸಾವಿಗೀಡಾಗಿದ್ದಾಳೆ. ಇನ್ನು ಅಸ್ವಸ್ಥಗೊಂಡಿರುವ ಮನೆಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಮನೆ ಮಾಲೀಕನ ವಿರುದ್ಧ ಹೈಗ್ರೌಂಡ್ಸ್​ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ನಾಳೆ ‘ವಿಜಯಾನಂದ’ ಟೀಸರ್​ ರಿಲೀಸ್; ಆನಂದ್​ ಆಡಿಯೋ ಯೂಟ್ಯೂಬ್​ ಚಾನೆಲ್​ನಲ್ಲಿ ಬಿಡುಗಡೆ

    ‘ಸರ್ಕಾರದಿಂದ’ ಮಹಿಳೆಯರಿಗೆ ಅರಿಶಿನ-ಕುಂಕುಮ, ಹಸಿರು ಬಳೆ ವಿತರಣೆ; ಮುಜರಾಯಿ ದೇವಸ್ಥಾನಗಳಿಗೆ ಸೂಚನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts