More

    ಕೊನೆಯುಸಿರೆಳೆದ ಮಹಾಲಕ್ಷ್ಮೀ ದೇವಸ್ಥಾನದ ಆನೆ; ದುಃಖದಲ್ಲಿ ಗ್ರಾಮಸ್ಥರು

    ಬೆಳಗಾವಿ: ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಚಿಪ್ಪಲಕಟ್ಟಿಯ ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಬಿಟ್ಟಿದ್ದ ಸುಧಾರಾಣಿ ಎಂಬ 60 ವರ್ಷದ ಹೆಣ್ಣು ಆನೆಯು ಅನಾರೋಗ್ಯದಿಂದ ಇಂದು ಬೆಳಿಗ್ಗೆ ಸಾವಪ್ಪಿದೆ.

    1975ರಲ್ಲಿ ಚಿಪ್ಪಲಕಟ್ಟಿ ಗ್ರಾಮದ ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಆಗಮಿಸಿದ್ದ ಆನೆ, ಸುಧಾರಾಣಿ, ವಿವಿಧ ರಾಜ್ಯಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿತ್ತು. ಆದರೆ, ಒಂದು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿತ್ತು. ಆನೆಯ ಹಿಂದಿನ ಬಲಗಾಲಿಗೆ ಗಾಯವಾಗಿದ್ದು, ಒಂದು ತಿಂಗಳಿನಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ನಸುಕಿನ ಜಾವ ಮೃತಪಟ್ಟಿತು.

    ಇದನ್ನೂ ಓದಿ: ಬಿಟ್ ಕಾಯಿನ್ ಬಗ್ಗೆ ಕೇಳುತ್ತಿದ್ದಂತೆ ಸಿಡಿಮಿಡಿಗೊಂಡ ಸಿಎಂ ಬೊಮ್ಮಾಯಿ‌

    ದೇವಸ್ಥಾನದ ಆನೆಯ ಸಾವಿನಿಂದ ಚಿಪ್ಪಲಕಟ್ಟಿ ಗ್ರಾಮಸ್ಥರಲ್ಲಿ ದುಃಖ ಮಡುಗಟ್ಟಿದೆ. ಆನೆಯ ದರ್ಶನಕ್ಕೆ ಸುತ್ತಮುತ್ತಲಿನ ಗ್ರಾಮಸ್ಥರು ಆಗಮಿಸುತ್ತಿದ್ದಾರೆ. ಸಕಲ ಗೌರವಗಳೊಂದಿಗೆ ಮೃತ ಆನೆಯ ಅಂತ್ಯಕ್ರಿಯೆಗೆ ಸಿದ್ಧತೆ ನಡೆದಿದೆ.

    ದೆಹಲಿ ವಾಯುಮಾಲಿನ್ಯ: ತುರ್ತು ಸಭೆ ನಡೆಸಲು ಕೇಂದ್ರಕ್ಕೆ ಸೂಚನೆ; ವರ್ಕ್​ ಫ್ರಂ ಹೋಂ ಸೂತ್ರಕ್ಕೆ ಸುಪ್ರೀಂ ಒಲವು!

    VIDEO| ಮಗುವಿಗೂ ಬೇಕು, ಮಂಗನಿಗೂ ಬೇಕು ಈ ಮೊಬೈಲು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts