ಇತ್ತೀಚೆಗಷ್ಟೇ ತೆಲಂಗಾಣ ಸರ್ಕಾರ, ಸಿನಿಮಾ ಮತ್ತು ಕಿರುತೆರೆ ಕಲಾವಿದರಿಗೆ ವಿನಾಯಿತಿ ನೀಡಿ, ಶೂಟಿಂಗ್ಗೆ ಅನುಮತಿ ಕೊಟ್ಟಿತ್ತು. ಅದರಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಶೂಟಿಂಗ್ ಸಹ ಶುರು ಮಾಡಲಾಗಿತ್ತು. ಅದೆಲ್ಲದರ ನಡುವೆಯೂ ಇದೀಗ ಕಿರುತೆರ ನಟಿಯೊಬ್ಬರಿಗೆ ಕರೊನಾ ಪಾಸಿಟಿವ್ ಇರುವುದು ಖಚಿತವಾಗಿದೆ.
ತೆಲುಗಿನ ಕಿರುತೆರೆಯ ಖ್ಯಾತ ನಟಿ ನವ್ಯಾ ಸ್ವಾಮಿಗೆ ಕರೊನಾ ಪಾಟಿಸಿವ್ ಇರುವುದು ಧೃಡಪಟ್ಟಿದೆ. ನಾ ಪೇರು ಮೀನಾಕ್ಷಿ ಧಾರಾವಾಹಿ ಶೂಟಿಂಗ್ ವೇಳೆ ಬೇರೊಬ್ಬರಿಂದ ಸೋಂಕು ತಗುಲಿರಬಹುದು ಎಂದು ಶಂಕಿಸಲಾಗಿದ್ದು, ನವ್ಯಾ ಸದ್ಯ ಹೋಮ್ ಕ್ವಾರಂಟೈನ್ನಲ್ಲಿದ್ದಾರೆ. ಅಚ್ಚರಿ ಏನೆಂದರೆ ನವ್ಯಾ ಮೂಲತಃ ಕರ್ನಾಟಕದವರಾಗಿದ್ದು, ಈ ಹಿಂದೆ ಹಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದರು. ಟಿವಿ ಕಾರ್ಯಕ್ರಮಗಳನ್ನು ನಿರೂಪಿಸುವುದು ಸೆರಿ ನಟನೆಯಲ್ಲೂ ತೊಡಗಿಸಿಕೊಂಡಿದ್ದರು.
ಇದನ್ನೂ ಓದಿ: ಈ ಬಾರಿ ಸ್ಟಾರ್ಗಳ ಹುಟ್ಟುಹಬ್ಬದ ಸಂಭ್ರಮ ಇಲ್ಲ …
ಹಲವು ಧಾರಾವಾಹಿಗಳ ಭಾಗವಾಗಿರುವ ನವ್ಯಾ, ವಾಣಿ ರಾಣಿ, ಆರ್ಣಮನೈ ಕಿಲೈ, ರನ್ ಆ್ಯಂಡ್ ಆಮೆ ಕಥಾ ಧಾರಾವಾಹಿಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಗುಣಲಕ್ಷಣಗಳೇನು ಕಂಡುಬರದಿದ್ದ ಕಾರಣ, ಬೇಗ ಚೇತರಿಸಿಕೊಳ್ಳಲಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನು ನವ್ಯಾಗೆ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಅವರೊಂದಿಗೆ ಸಂಪರ್ಕದಲ್ಲಿದ್ದ ಹಲವು ಕಲಾವಿದರು, ಐಸೋಲೇಷನ್ಗೆ ಹೋಗಲು ನಿರ್ಧರಿಸಿದ್ದಾರೆ.
ಇದನ್ನೂ ಓದಿ: ಕಮಾಂಡೋ ಪರವಾಗಿ ಕಂಗನಾ ಬ್ಯಾಟಿಂಗ್!
ಇನ್ನು ಇತ್ತೀಚೆಗಷ್ಟೇ ತೆಲುಗಿನ ಕಿರುತೆರ ಕಲಾವಿದರೊಬ್ಬರಿಗೆ ಕರೊನಾ ಪಾಸಿಟಿವ್ ವರದಿಯಾಗಿತ್ತು. ಈ ಸುದ್ದಿ ಎಲ್ಲೆಡೆ ಹರಿದಾಡುತ್ತಿದ್ದಂತೆ.ತೆಲುಗು ಕಿರುತೆರೆಯ ನಿರ್ಮಾಪಕ ಸಂಘದ ಖಜಾಂಚಿಯಾಗಿರುವ ಕೆ. ರಮೇಶ್ ಬಾಬು, ಸೂಕ್ತ ಮುಂಜಾಗೃತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಿ ಎಂದು ಎಲ್ಲ ಧಾರಾವಾಹಿ ತಂಡಗಳಿಗೆ ಕಟ್ಟುನಿಟ್ಟಾಗಿ ಆದೇಶಿಸಿದ್ದರು. ಇದೀಗ ಒಂದಾದ ಮೇಲೊಂದರಂತೆ ಪ್ರಕರಣಗಳು ಕಂಡುಬರುತ್ತಿವೆ. (ಏಜೆನ್ಸೀಸ್)
‘ಲಕ್ಷ್ಮೀ ಬಾಂಬ್’ ಮತ್ತು ‘ಭುಜ್’, ಓಟಿಟಿಗೆ ಸೇಲ್ ಆಗಿದ್ದು ಎಷ್ಟಕ್ಕೆ ಗೊತ್ತಾ?