More

    ಮದ್ವೆಯಾದ ಒಂದೇ ತಿಂಗಳಲ್ಲಿ ನವದಂಪತಿ ಆತ್ಮಹತ್ಯೆ ಯತ್ನ: ಹುಡುಗ ಸಾವು, ಕಣ್ಣೀರು ತರಿಸುವಂತಿದೆ ಡೆತ್​ನೋಟ್​ ಬರಹ!

    ಹೈದರಾಬಾದ್​: ನವದಂಪತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತೆಲಂಗಾಣದ ನಿಜಾಮಾಬಾದ್​ ಜಿಲ್ಲೆಯ ಕೊಟಗಿರಿ ಮಂಡಲದಲ್ಲಿ ಗುರುವಾರ ನಡೆದಿದ್ದು, ಚಿಕಿತ್ಸೆ ಫಲಕಾರಿಯಾಗದೇ ಹುಡಗ ಸಾವಿಗೀಡಾದರೆ, ಆತನ ಪತ್ನಿಯ ಸ್ಥಿತಿ ಗಂಭೀರವಾಗಿದೆ.

    ಘಟನೆಯ ವಿವರಣೆಗೆ ಬರುವುದಾದರೆ, ಪ್ರಣೀತ್​ ಮತ್ತು ವಿಜಯಾ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆಗೆ ಪಾಲಕರ ಅನುಮತಿಯನ್ನು ಕೋರಿದ್ದರು. ಯಾವಾಗ ಪ್ರಣೀತ್​ ಕುಟುಂಬ ಮದುವೆ ವಿರೋಧಿಸಿತು ಇಬ್ಬರು ಓಡಿ ಹೋಗಿ ದೇವಸ್ಥಾನದಲ್ಲಿ ಮದುವೆ ಆಗಿದ್ದರು. ಇಬ್ಬರ ಮದುವೆಗೆ ವಧು ವಿಜಯಾಳ ತಾಯಿ ಸಾವಿತ್ರಿ ಸಮ್ಮತವಿತ್ತು. ಬಳಿಕ ಪ್ರಣೀತ್​, ವಿಜಯಾ ಜತೆ ಅತ್ತೆ ಮನೆಯಲ್ಲೇ ವಾಸವಿದ್ದನು.

    ಇದನ್ನೂ ಓದಿ: ಪೊಲೀಸ್​ ಪೇದೆ ಮತ್ತು ಹೆಂಡತಿಯ ಕೊಲೆ! ಅಪ್ಪ ಅಮ್ಮ ಚೀರಿಕೊಳ್ಳುತ್ತಿದ್ದರೆ ಏನೂ ಗೊತ್ತಿಲ್ಲದವಳಂತೆ ಸುತ್ತಾಡಿದ ಮಗಳು!

    ಮದ್ವೆಯಾದ ಒಂದೇ ತಿಂಗಳಲ್ಲಿ ನವದಂಪತಿ ಆತ್ಮಹತ್ಯೆ ಯತ್ನ: ಹುಡುಗ ಸಾವು, ಕಣ್ಣೀರು ತರಿಸುವಂತಿದೆ ಡೆತ್​ನೋಟ್​ ಬರಹ!

    ಆದರೆ, ಇಬ್ಬರ ಸಂತೋಷ ಹೆಚ್ಚು ದಿನ ಇರಲಿಲ್ಲ. ಮದುವೆಯಾದ ಕೆಲವೇ ದಿನಗಳಲ್ಲಿ ಸಾವಿತ್ರಿ ಮಗಳು ಮತ್ತು ಅಳಿಯನಿಗೆ ಕಿರುಕುಳ ನೀಡಲು ಆರಂಭಿಸಿದರು. ಬಳಿಕ ಪ್ರಣೀತ್​, ವಿಜಯಾಳನ್ನು ಕರೆದುಕೊಂಡು ತನ್ನ ಮನೆ ಸೇರಿದ್ದ. ಆದರೂ ಸಾವಿತ್ರಿ ಇಬ್ಬರೊಂದಿಗೆ ಜಗಳ ಆಡುವುದನ್ನು ನಿಲ್ಲಿಸಿರಲಿಲ್ಲ. ಸಾವಿತ್ರಿಯ ವರ್ತನೆಯಿಂದ ಬೇಸತ್ತ ಪ್ರಣೀತ್​ ಮತ್ತು ವಿಜಯಾ ಡೆತ್​ನೋಟ್​ ಬರೆದಿಟ್ಟು ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರು.

    ಆತ್ಮಹತ್ಯೆ ಯತ್ನ ಬಗ್ಗೆ ತಿಳಿದ ಪ್ರಣೀತ್​ ಪಾಲಕರು ತಕ್ಷಣ ಮನೆಗೆ ಬಂದು ಇಬ್ಬರು ಆಸ್ಪತ್ರೆಗೆ ದಾಖಲಿಸಿದಾದರೂ, ಚಿಕಿತ್ಸೆ ಫಲಿಸದೇ ಪ್ರಣೀತ್​ ಸಾವಿಗೀಡಾಗಿದ್ದಾನೆ. ವಿಜಯಾ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಈ ಸಂಬಂಧ ಪ್ರಕರಣವೂ ದಾಖಲಾಗಿದೆ.

    ಇದನ್ನೂ ಓದಿ: ಅಂಕಲ್​-ಅಪ್ರಾಪ್ತೆಯ ಲವ್ವಿಡವ್ವಿ ಸೂಸೈಡ್ ಪ್ರಕರಣಕ್ಕೆ ಹೊಸ ಟ್ವಿಸ್ಟ್​: ಬಾಲಕಿ ಬಲಿಪಶುವಾದಳಾ?

    ಮದ್ವೆಯಾದ ಒಂದೇ ತಿಂಗಳಲ್ಲಿ ನವದಂಪತಿ ಆತ್ಮಹತ್ಯೆ ಯತ್ನ: ಹುಡುಗ ಸಾವು, ಕಣ್ಣೀರು ತರಿಸುವಂತಿದೆ ಡೆತ್​ನೋಟ್​ ಬರಹ!

    ಮದುವೆಯಾದಗಿನಿಂದ ಅಮ್ಮ ನಮಗೆ ಸಾಕಷ್ಟು ತೊಂದರೆ ನೀಡಿದ್ದಾರೆ. ನಾನೆಂದು ಅಮ್ಮನನ್ನು ಕ್ಷಮಿಸಲಾರೆ. ಅವಳಿಂದಾಗಿಯೇ ನಾನು ವಿಷ ಸೇವಿಸುತ್ತಿದ್ದೇನೆ ಎಂದು ವಿಜಯಾ ಡೆತ್​​ನೋಟ್​ನಲ್ಲಿ ಉಲ್ಲೇಖಿಸಿದ್ದಾಳೆ. ಅಲ್ಲದೆ, ಅತ್ತೆ ಮನೆಯಲ್ಲೂ ಬೆದರಿಕೆ ಇತ್ತೆಂದು ಆರೋಪಿಸಿದ್ದಾಳೆ. ಪ್ರಣೀತ್​ ಸಹ ಇನ್ನೊಂದು ಜನ್ಮ ಇದ್ದರೆ, ನೀವು ನಿಮ್ಮ ಮಗಳಾಗಿ ಜನಿಸಬೇಕೆಂದು ದೇವರು ಬಯಸುತ್ತಾನೆಂದು ಸಾವಿತ್ರಿ ವಿರುದ್ಧ ಬರೆದಿದ್ದಾನೆಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ. (ಏಜೆನ್ಸೀಸ್​)

    2017ರಲ್ಲಿ ಹೆಗಲೇರಿದ ಪಾಪದ ಪ್ರಾಯಶ್ಚಿತ್ತಕ್ಕಾಗಿ ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ಡಿಕೆಶಿ ಭೇಟಿ!

    ಉಜಿರೆ ಬಾಲಕನ ಅಪಹರಣ ಪ್ರಕರಣ: ಬಿಡುಗಡೆಗೆ 17 ಕೋಟಿ ರೂ.ಗೆ ಬೇಡಿಕೆಯಿಟ್ಟ ಅಪಹರಣಕಾರರು!

    ಕಾರ್ ಕಳಿಸ್ತೀನಿ ಪ್ಲೀಸ್ ಬನ್ನಿ: ಮುಳ್ಳಿನಬೇಲಿ ಹಾಕಿದ್ದವರಿಂದಲೇ ಸ್ವಾಗತ | ಮತಕ್ಕಾಗಿ ಡಿಮಾಂಡ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts