ಕೋಟ: ಮಂಡ್ಯ ಮೂಲದ ಕರೊನಾ ಸೋಂಕಿತ ವ್ಯಕ್ತಿ ತೆಕ್ಕಟ್ಟೆ ಪೆಟ್ರೋಲ್ ಬಂಕ್ ಸಂಪರ್ಕ ದ ಪ್ರಕರಣದಿಂದ ಬುಧವಾರ ಮತ್ತೋರ್ವ ಬಂಕ್ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.
ಸೋಮವಾರ ರಾತ್ರಿ ಪೆಟ್ರೋಲ್ ಬಂಕ್ನ 7ಮಂದಿಯನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿತ್ತು. ಮಂಗಳವಾರ ಮೂವರು, ಪೆಟ್ರೋಲ್ ಬಂಕ್ನ ಸುತ್ತಮುತ್ತಲಿನ ಮನೆಗಳು ಹಾಗೂ ಬಂಕ್ ಸಿಬ್ಬಂದಿ ಮನೆಯ ಆಸುಪಾಸಿನವರನ್ನು ಆಶಾ ಕಾರ್ಯಕರ್ತೆಯರ ಮೂಲಕ ಸರ್ವೇ ನಡೆಸಿ ಮನೆಯಿಂದ ಹೊರಬರದಂತೆ ಆದೇಶ ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ತೆಕ್ಕಟ್ಟೆ ಪೆಟ್ರೋಲ್ ಬಂಕ್ ಆಸುಪಾಸು ಪ್ರವೇಶಿಸದಂತೆ ಕಟ್ಟೆಚ್ಚರ ವಹಿಸಲಾಗಿದೆ.
ಸಾಸ್ತಾನ ಟೋಲ್ ಮತ್ತೆ ಪ್ರಾರಂಭ: ಮಂಡ್ಯ ಮೂಲದ ಸೋಂಕಿತ ವ್ಯಕ್ತಿ ವಾಹನ ಮೂಲಕ ಸಾಸ್ತಾನ ಟೋಲ್ ಪ್ರವೇಶಿಸಿದ ಹಿನ್ನೆಲೆಯಲ್ಲಿ ಮಂಗಳವಾರ ಟೋಲ್ ಸಂಗ್ರಹ ಬಂದ್ ಮಾಡಿ ಕೇವಲ ಒಂದೊಂದು ಗೇಟ್ ತೆರೆಯಲಾಗಿತ್ತು. ಇಲ್ಲಿನ 7 ಸಿಬ್ಬಂದಿಯನ್ನು ಕ್ವಾರಂಟೈನ್ಗೆ ಒಳಪಡಿಸಿ ರಕ್ತದ ಮಾದರಿಯನ್ನು ಲ್ಯಾಬ್ಗೆ ಕಳುಹಿಸಲಾಗಿದೆ. ಉಳಿದ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ತಲಪಾಡಿಯ ಟೋಲ್ಗೇಟ್ನಿಂದ ಇಬ್ಬರು ಸಿಬ್ಬಂದಿಯನ್ನು ಕರೆಸಿಕೊಂಡು ಬುಧವಾರದಿಂದ ಮತ್ತೆ ಟೋಲ್ ಸಂಗ್ರಹ ಆರಂಭಿಸಲಾಗಿದೆ.