More

    ವರ್ಷದ ಹಿಂದಷ್ಟೇ ಮದ್ವೆಯಾಗಿದ್ದ ಟೆಕ್ಕಿ ನೇಣಿಗೆ ಶರಣು: ಗಂಡನ ದಿಢೀರ್​ ಬದಲಾವಣೆಯೇ ಕಾರಣ!

    ಹೈದರಾಬಾದ್​: ತೆಲಂಗಾಣದ ನಿಜಾಮಾಬಾದ್​ ಜಿಲ್ಲೆಯ ಕಾಮರೆಡ್ಡಿ ಮೂಲದ ಸಾಫ್ಟ್​ವೇರ್​ ಉದ್ಯೋಗಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಗಸ್ಟ್​ 7ರಂದು ಬೆಂಗಳೂರಿನಲ್ಲಿ ನಡೆದಿದೆ.

    ಮೃತಳನ್ನು ಸರಣ್ಯ (25) ಎಂದು ಗುರುತಿಸಲಾಗಿದೆ. ಈಕೆ ತನ್ನ ಕ್ಲಾಸ್​ಮೇಟ್​ ರೋಹಿತ್​ ಎಂಬುವನೊಂದಿಗೆ ವರ್ಷದ ಹಿಂದಷ್ಟೇ ಮದುವೆಯಾಗಿದ್ದಳು. ಇಬ್ಬರು ಸಹ ಕಾಮರೆಡ್ಡಿ ಮೂಲದವರಾಗಿದ್ದರು. ಕಳೆದ ಒಂದು ವರ್ಷದಿಂದ ಉದ್ಯೋಗನಿಮಿತ್ತ ಬೆಂಗಳೂರಿನಲ್ಲಿ ವಾಸವಿದ್ದರು.

    ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಆದರೆ, ನಂತರ ದಿನಗಳಲ್ಲಿ ರೋಹಿತ್​ ಮದ್ಯ ವ್ಯಸನಿಯಾಗಿದ್ದ. ಅಲ್ಲದೆ, ಸರಣ್ಯ ಮೇಲೆಯೂ ಆತ ಅನೇಕ ಬಾರಿ ಹಲ್ಲೆ ಮಾಡಿದ್ದರಿಂದ ಆಕೆ ತವರಿಗೂ ಆಗಮಿಸಿದ್ದಳು. ಬಳಿಕ ಸ್ಥಳೀಯ ನ್ಯಾಯಾಲಯದಲ್ಲಿ ಇಬ್ಬರು ರಾಜಿ ಮಾಡಿಕೊಂಡಿದ್ದರು. 3 ತಿಂಗಳ ಹಿಂದೆ ಮತ್ತೆ ಬೆಂಗಳೂರಿಗೆ ಮರಳಿದ್ದರು ಎಂದು ಸರಣ್ಯ ಕುಟುಂಬದವರು ತಿಳಿಸಿದ್ದಾರೆ.

    ಬೆಂಗಳೂರಿಗೆ ಮರಳಿ ಬಂದಾಗಲೂ ಕೆಲವು ದಿನಗಳವರೆಗೆ ಸುಮ್ಮನಿದ್ದ ರೋಹಿತ್​ ಮತ್ತೆ ತನ್ನ ಹಳೆ ವರಸೆ ತೆಗೆದಿದ್ದಾನೆ. ಇದರಿಂದ ಮನನೊಂನ ಸರಣ್ಯ ಆತ್ಮಹತ್ಯೆ ಹಾದಿ ತುಳಿದಿದ್ದಾಳೆಂದು ಆಕೆಯ ಕುಟುಂಬಸ್ಥರು ಆರೋಪಿಸಿದ್ದು, ರೋಹಿತ್​ಗೆ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts