More

    ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ ಕಲಿಸಿ

    ಸಿದ್ದಾಪುರ: ದೇಶದ ಹಾಗೂ ಸಮಾಜದ ಅಭಿವೃದ್ಧಿ ಆಗಬೇಕಾದರೆ ಶಿಕ್ಷಣ ಅತ್ಯವಶ್ಯ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಲ್ಲಿ ಯಾವುದೇ ತಾರತಮ್ಯ ಇರಬಾರದು. ಹಿರಿಯರು ಕಂಡ ಕನಸು ನನಸಾಗಬೇಕು. ಎಲ್ಲರೂ ನಮ್ಮ ಮಕ್ಕಳು ಎನ್ನುವ ಭಾವನೆ ಇರಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.

    ತಾಲೂಕಿನ ತಾರೇಸರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರ ಮಕ್ಕಳಿಗೆ ಶಿಕ್ಷಣಕ್ಕಾಗಿ ಎಲ್ಲ ಸೌಲಭ್ಯ ನೀಡುತ್ತಿದೆ. ಸರ್ಕಾರಿ ಶಾಲೆಗಳು ಎಂದು ಯಾರೂ ಹಿಂಜರಿಯುವುದು ಬೇಡ, ಸರ್ಕಾರಿ ಶಾಲೆಯಲ್ಲಿ ಉತ್ತಮ ಶಿಕ್ಷಕರ ತಂಡ ಇದೆ. ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುವುದರೊಂದಿಗೆ ನಮ್ಮ ದೇಶದ ಅಭಿವೃದ್ಧಿಗೆ ಪಾಲಕರು ಮುಂದಾಗಬೇಕು. ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕೃತಿ ಹಾಗೂ ಸಂಸ್ಕಾರವನ್ನು ಕಲಿಸಬೇಕು ಎಂದರು.

    ಹೆಗ್ಗರಣಿ ಗ್ರಾಪಂ ಅಧ್ಯಕ್ಷೆ ಅನ್ನಪೂರ್ಣ ಹರಿಜನ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷ ಮಂಜುನಾಥ ಮಡಿವಾಳ, ಗ್ರಾಪಂ ಸದಸ್ಯ ನವೀನ ಹೆಗಡೆ, ಬಿಇಒ ಜಿ.ಐ. ನಾಯ್ಕ, ಊರಿನ ಹಿರಿಯರಾದ ಮಂಜುನಾಥ ಹೆಗಡೆ ತಾರೇಸರ, ಸುಬ್ರಾಯ ಹೆಗಡೆ ಮೇಲಿನ ಹಿರೇಕೈ, ಮಂಜುನಾಥ ಹೆಗಡೆ ಕೆಳಗಿನ ಹಿರೇಕೈ, ವೆಂಕಟರಮಣ ತಿಮ್ಮ ನಾಯ್ಕ ಹೆಗ್ಗಾರಬೈಲ್, ಸುಬ್ರಾಯ ಹೆಗಡೆ ಗುಬ್ಬಗೋಣ, ಮಹಾಬಲೇಶ್ವರ ಹೆಗಡೆ ಕೆಳಗಿನ ಹಿರೇಕೈ, ಎಸ್​ಡಿಎಂಸಿ ಅಧ್ಯಕ್ಷ ಸತೀಶ ಗೋಪಾಲ ಹೆಗಡೆ ಮಾಗೋಡಜಡ್ಡಿ, ಶಿಕ್ಷಣ ಸಂಯೋಜಕ ಮಹೇಶ ಹೆಗಡೆ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ ಹೆಗಡೆ, ಇತರರಿದ್ದರು. ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರು, ಅತಿಥಿ ಶಿಕ್ಷಕರು ಹಾಗೂ ಎಸ್​ಡಿಎಂಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರನ್ನು ಗೌರವಿಸಲಾಯಿತು. ವಿನಾಯಕ ಹೆಗಡೆ ಮೇಲಿನ ಹಿರೇಕೈ, ಮುಖ್ಯಾಧ್ಯಾಪಕಿ ಮಹಾಸತಿ ದೇವಾಡಿಗ ಹಾಗೂ ವಿನಾಯಕ ಹೆಗಡೆ ಕೆಳಗಿನ ಹಿರೇಕೈ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts