ಬೀದರ್: ಕರೊನಾ ವೈರಸ್ ಸೋಂಕಿನಿಂದ ಬಳಲುತ್ತಿರುವ ಶಂಕೆಯಲ್ಲಿ ಕ್ವಾರಂಟೈನ್ನಲ್ಲಿ ಇರಿಸಲಾಗಿರುವ ತಬ್ಲಿಘಿ ಜಮಾತ್ನ ಸದಸ್ಯರು ಪುಂಡಾಟ ಮುಂದುವರಿಸಿದ್ದಾರೆ.
ಕರ್ತವ್ಯನಿರತ ವೈದ್ಯರು ಮತ್ತು ನರ್ಸ್ಗಳ ಜತೆ ಅಸಭ್ಯವಾಗಿ ವರ್ತಿಸುತ್ತಾ ಕಿರಿಕಿರಿ ಮಾಡುತ್ತಿದ್ದಾರೆ. ಅಲ್ಲದೆ, ತಮಗೆ ಊಟಕ್ಕೆ ಅದೇ ಬೇಕು, ಇದೇ ಬೇಕು ಎಂದು ಹಟ ಹಿಡಿದು ಊಟ ಮಾಡಲು ನಿರಾಕರಿಸುತ್ತಿದ್ದಾರೆ.
ತಮ್ಮೆಲ್ಲರನ್ನೂ ಐಷಾರಾಮಿ ಕೊಠಡಿಗಳಲ್ಲಿ ಇರಿಸುವಂತೆ ಆಗ್ರಹಿಸುತ್ತಿದ್ದಾರೆ. ತಮ್ಮ ಈ ಬೇಡಿಕೆ ಈಡೇರಿಸದಿದ್ದರೆ ನಿಮ್ಮೆಲ್ಲರನ್ನೂ ಮುಟ್ಟಿ ಇಲ್ಲವೇ ಉಗುಳಿ ಸೋಂಕು ಹರಡುವುದಾಗಿ ಬೆದರಿಸುತ್ತಿದ್ದಾರೆ.
ಇವರೆಲ್ಲರ ಬೆದರಿಕೆ ತಂತ್ರದಿಂದ ವೈದ್ಯರು ಮತ್ತು ನರ್ಸ್ಗಳು ಆತಂಕಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಐಸೋಲೇಷನ್ ವಾರ್ಡ್ನಲ್ಲಿ ಪೊಲೀಸ್ ಭದ್ರತೆ ಏರ್ಪಡಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ತಬ್ಲಿಘಿ ಜಮಾತ್ ದೇಶದ ಕರೊನಾ ವೈರಸ್ ಹಾಟ್ಸ್ಪಾಟ್: 1,023 ಸೋಂಕಿತರಿಗೆ ತಬ್ಲಿಘಿ ನಂಟು