ಸುಶಾಂತ್ ಆತ್ಮಹತ್ಯೆಯ ಕೇಸು ಇತ್ತೀಚಿನ ದಿನಗಳಲ್ಲಿ ಎಲ್ಲೆಲ್ಲೋ ಹೋಗುತ್ತಿದೆ. ಇದೀಗ ಸ್ವಜನಪಕ್ಷಪಾತದ ಬಗ್ಗೆ ಬಾಲಿವುಡ್ನಲ್ಲಿ ಹೆಚ್ಚುಹೆಚ್ಚು ಚರ್ಚೆಗಳಾಗುತ್ತಿದ್ದು, ಈ ನಿಟ್ಟಿನಲ್ಲಿ ಹಿಂದಿ ಚಿತ್ರರಂಗದಲ್ಲಿ ಎರಡು ಪಂಗಡಗಳಾಗಿವೆ.
ಅದಕ್ಕೆ ಸರಿಯಾಗಿ ಕಂಗನಾ ರಣಾವತ್, ಸ್ವಜನಪಕ್ಷಪಾತದ ವಿರುದ್ಧವಾಗಿ ಮಾತಾಡುತ್ತಲೇ ಬಂದಿದ್ದಾರೆ. ಇನ್ನೂ ಕೆಲವರು ನೆಪೋಟಿಸಂ ಬಗ್ಗೆ ಚರ್ಚೆ ಮಾಡದಿದ್ದರೂ, ಸುಶಾಂತ್ ಸಾವಿಗೆ ಅದೇ ಕಾರಣ ಎಂದು ಹೇಳಲಿಕ್ಕಾಗದು ಎಂದು ಹೇಳಿದ್ದೇ, ಅವರ ವಿರುದ್ಧ ಕಂಗನಾ ತಿರುಗಿ ಬಿದ್ದಿದ್ದಾರೆ. ಪ್ರಮುಖವಾಗಿ ತಾಪ್ಸಿ ಪನ್ನು, ಸ್ವರಾ ಭಾಸ್ಕರ್ ಮತ್ತು ರಿಚಾ ಚಡ್ಡಾ ವಿರುದ್ಧ ತಿರುಗಿ ಬಿದ್ದಿರುವ ಕಂಗನಾ ಅವರನ್ನು ಬಿ ಗ್ರೇಡ್ ನಟಿಯರು ಎಂದು ಕರೆದಿದ್ದಾರೆ.
ಇದನ್ನೂ ಓದಿ: ಫೋನ್ ಭೂತ್ನಲ್ಲಿ ಕತ್ರೀನಾ ಕೈಫ್ ಅವತಾರ
ಅಷ್ಟೇ ಆಗಿದ್ದರೆ ಪರವಾಗಿಲ್ಲ. ಕೆಲವರಿಗೆ ಅವರದ್ದೇ ಆದ ಕಮಿಟ್ಮೆಂಟ್ ಇರುತ್ತದೆ, ಪ್ರತಿ ತಿಂಗಳು ಇಎಂಐ ಕಟ್ಟುವುದಿರುತ್ತದೆ, ಅದೇ ಕಾರಣಕ್ಕೆ ಅವರು ಬಾಲಿವುಡ್ನ ಪ್ರಭಾವಿಗಳನ್ನು ಎದುರು ಹಾಕಿಕೊಳ್ಳುತ್ತಿಲ್ಲ ಎಂದು ತಾಪ್ಸಿ, ಸ್ವರಾ ಮತ್ತು ರಿಚಾ ಅವರ ಹೆಸರುಗಳನ್ನು ತೆಗೆಯದೇ ಪರೋಕ್ಷವಾಗಿ ಹೇಳಿದ್ದಾರೆ. ಈ ವಿಷಯ ಇದೀಗ ಸಾಕಷ್ಟು ಚರ್ಚೆಯಾಗುತ್ತಿದೆ.
ಈಗಾಗಲೇ ತಾಪ್ಸಿ ಪನ್ನು, ಕಂಗನಾಗೆ ಟಾಂಗ್ ಕೊಟ್ಟಿದ್ದಾರೆ. ‘ಕರಣ್ ಜೋಹರ್ ಮುಂತಾದವರ ಜತೆಗೆ ನನ್ನ ಹೆಸರನ್ನು ಕಂಗನಾ ಯಾಕೆ ತಳುಕು ಹಾಕುತ್ತಿದ್ದಾರೋ ಗೊತ್ತಿಲ್ಲ. ಕರಣ್ ಅಥವಾ ಬಾಲಿವುಡ್ನ ದೊಡ್ಡ ಗ್ಯಾಂಗ್ ನಿರ್ಮಿಸುತ್ತಿರುವ ಯಾವುದೇ ಚಿತ್ರದಲ್ಲೂ ನಾನು ನಟಿಸುತ್ತಿಲ್ಲ. ಅಷ್ಟೇ ಅಲ್ಲ, ಕರಣ್ ನನಗೆ ಇಷ್ಟ ಅಂತ ಎಲ್ಲೂ ಹೇಳಿಲ್ಲ. ಹಾಗೆಯೇ ಅವರನ್ನು ದ್ವೇಷಿಸುತ್ತೇನೆ ಎಂದು ಸಹ ಮಾತಾಡಿಲ್ಲ. ನಾನು ಯಾರನ್ನೋ ದ್ವೇಷಿಸುತ್ತಿಲ್ಲ ಎಂದರೆ, ನಾನು ಅವರನ್ನು ಇಷ್ಟಪಡುತ್ತೀನಿ ಎಂಬ ಅರ್ಥ ಕಲ್ಪಿಸುವುದು ಸರಿಯಲ್ಲ. ಇಷ್ಟಕ್ಕೂ ನನಗೆ ಕರಣ್ ಹೆಚ್ಚು ಪರಿಚಯವಿಲ್ಲ, ಹಾಯ್, ಹೆಲೋ, ಥ್ಯಾಂಕ್ ಯೂ ಮಿಗಿಲಾಗಿ ಮಾತುಕಥೆ ನಡೆದಿಲ್ಲ’ ಎಂದು ತಾಪ್ಸಿ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: PHOTO: ಸಾಮಾಜಿಕ ಜಾಲತಾಣದಲ್ಲಿ ಸ್ತನ ಪ್ರದರ್ಶಿಸಿದ ನಟಿ!; ನೆಟ್ಟಿಗರ ಕಟುಮಾತಿಗೆ ನೊಂದು ಈ ನಿರ್ಧಾರ…
ಈಗ ಈ ವಿಷಯವಾಗಿ ಅವರು ಇನ್ನೊಂದು ಟ್ವೀಟ್ ಮಾಡಿದ್ದಾರೆ. ಪ್ರಮುಖವಾಗಿ ಇಎಂಐ ಕಟ್ಟಬೇಕಾಗಿರುವುದರಿಂದ, ಎಲ್ಲಿ ಸಿಗುವ ಕೆಲಸವೂ ತಪ್ಪುತ್ತದೆ ಎಂಬ ಭಯದಿಂದ ಕೆಲವರು ಮಾತಾಡುತ್ತಿಲ್ಲ ಎಂಬ ವಿಷಯ, ತಾಪ್ಸಿಯನ್ನು ಇನ್ನಷ್ಟು ಕೆರಳಿಸಿದೆ.
ಈ ಕುರಿತು ಮಾತನಾಡಿರುವ ಅವರು, ‘ನಮ್ಮ ಬಗ್ಗೆ ಕೆಲವರಿಗೆ ವಿಪರೀತ ಎನ್ನುವಷ್ಟು ಕಾಳಜಿ ಇದೆ. ಚಿತ್ರರಂಗದಲ್ಲಿ ಇಂತಹ ಸಹೃದಯರು ಇದ್ದಾರೆ ಎಂದು ಗೊತ್ತಿರಲಿಲ್ಲ. ಅದರಲ್ಲೂ ಬಿ ಗ್ರೇಡ್ ನಟಿಯರ ಕುರಿತಾಗಿ ಅವರು ತೋರಿಸುತ್ತಿರುವ ಪ್ರೀತಿ ಮತ್ತು ಗೌರವ ಖುಷಿ ಕೊಡುತ್ತದೆ’ ಎಂದು ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.
ಸುಶಾಂತ್ಗಿತ್ತು ವಿಚಿತ್ರ ಕಾಯಿಲೆ; ವಿಚಾರಣೆ ವೇಳೆ ಸತ್ಯ ಬಾಯ್ಬಿಟ್ಟ ಸೈಕಿಯಾಟ್ರಿಸ್ಟ್ !