ಕೆಲವೊಮ್ಮೆ ಗಾಡಿಯಲ್ಲಿ ಪೆಟ್ರೋಲ್ ಖಾಲಿಯಾಗುತ್ತೆ ಅನ್ನೋದನ್ನ ಮರೆತು ನಾವು ದೂರದ ಪ್ರದೇಶಕ್ಕೆ ಪ್ರಯಾಣ ಬೆಳೆಸಲು ಹೋಗಿರುತ್ತೇವೆ. ಪೆಟ್ರೋಲ್ ಖಾಲಿ ಆಯ್ತು ಅನ್ನೋ ಸಂದರ್ಭ ವಾಹನಗಳನ್ನ ಹತ್ತಿರದ ಪೆಟ್ರೋಲ್ ಬಂಕ್ಗೆ ಕೊಂಡೊಯ್ಯಲು ಪರದಾಡಿರುತ್ತೇವೆ.
ಅದೇ ರೀತಿ ಇದೀಗ ಬೆಂಗಳೂರಿನ ನಿರ್ಜನ ರಸ್ತೆಯಲ್ಲಿ ತಡರಾತ್ರಿ ಶ್ರವಣ್ ಟಿಕೂ ಎಂಬ ವ್ಯಕ್ತಿ ಪೆಟ್ರೋಲ್ ಖಾಲಿಯಾಗಿ ಅಲ್ಲೇ ಬೈಕ್ ನಿಲ್ಲಿಸಿ ಸ್ಚವಲ್ಪ ಹೊತ್ತು ಪರದಾಡಿದ್ದಾನೆ.
ಕೋರಮಂಗಲದಲ್ಲಿರುವ ಸ್ನೇಹಿತರೊಬ್ಬರ ಮನೆಯಿಂದ ಸರ್ಜಾಪುರ ರಸ್ತೆಯಲ್ಲಿರುವ ತಮ್ಮ ಮನೆಗೆ ಹಿಂದಿರುಗುತ್ತಿದ್ದಾಗ ದ್ವಿಚಕ್ರ ವಾಹನ ಏಕಾಏಕಿ ಪೆಟ್ರೋಲ್ ಖಾಲಿಯಾಗಿ ನಿಂತಿದೆ.
ಮರಾತ್ರಿಯ ಬೈಕ್ನಲ್ಲಿ ಇಂಧನ ಖಾಲಿಯಾಗಿದ್ದರಿಂದ ಸುಮಾರು 2.5 ಕಿಲೋಮೀಟರ್ ದೂರದಲ್ಲಿದ್ದ ಪೆಟ್ರೋಲ್ ಬಂಕ್ಗೆ, ಅವನು ತನ್ನ ಬೈಕನ್ನು ಎಳೆಯಲು ಪ್ರಾರಂಭಿಸಿದ್ದಾನೆ.
ಅಲ್ಲೇ ಹತ್ತಿರದಲ್ಲಿದ್ದ ಓರ್ವ ಸ್ವಿಗ್ಗಿ ಡೆಲಿವರಿ ಬಾಯ್ ವ್ಯಕ್ತಿ ವಾಹನವನ್ನ ತಳ್ಳುತ್ತಿರೋದನ್ನ ಕಂಡ ಆತನ ಸಹಾಯಕ್ಕೆ ಆಗಮಿಸಿದ್ದಾನೆ. ಈತ ಡೆಲಿವರಿ ತಲುಪಿಸಬೇಕಿದ್ದರೂ ಅಪರಿಚಿತ ವ್ಯಜಕ್ತಿಗೆ ಸಹಾಯ ಮಾಡೋಕೆ ಮುಂದಾಗಿದ್ದಾನೆ. ಪೆಟ್ರೋಲ್ ಬಂಕ್ ಕಡೆಗೆ ಟಿಕೂನ ಬೈಕನ್ನು ಎಳೆದುಕೊಂಡು ಹೋಗಲು ಅವನು ತನ್ನ ಸ್ವಂತ ಮೋಟಾರ್ ಸೈಕಲ್ ಉಪಯೋಗಿಸಿದ್ದು, ಪೆಟ್ರೋಲ್ ಬಂಕ್ಗೆ ಇಬ್ಬರೂ ಜತೆಯಾಗಿ ತೆರಳಿದ್ದಾರೆ.
ಆದರೆ ಇವರಿಬ್ಬರೂ ಪೆಟ್ರೋಲ್ ಬಂಕ್ಗೆ ತೆರಳಿದಾಗ ಅದು ಮುಚ್ಚಲ್ಪಟ್ಟಿತ್ತು. ಇಬ್ಬರೂ ಅಲ್ಲಿಂದ ಮತ್ತೆ 3 ಕಿ.ಮೀ. ದುರದಲ್ಲಿದ್ದ ಪೆಟ್ರೋಲ್ ಬಂಕ್ಗೆ ಬೈಕನ್ನ ಎಳೆದೊಯ್ದಿದ್ದಾರೆ ನಂತರ ಪೆಟ್ರೋಲ್ ಹಾಕಿಸಿಕೊಂಡಿದ್ದಾರೆ.
ಟಿಕೂ ಸ್ವಿಗ್ಗಿ ಬಾಯ್ಗೆ 500ರೂ. ಗಳನ್ನ ನೀಡೋಕೆ ಮುಂದಾಗಿದ್ದು, ಏಜೆಂಟ್ ಸಹಾಯ್ಕಾಗಿ ಕೃತಜ್ಞತೆ ಸಲ್ಲಿಸಿದ್ದಾರೆ. ಟಿಕೂ ಏಜೆಂಟ್ಗೆ 500 ರೂಪಾಯಿಗಳನ್ನು ಮೆಚ್ಚುಗೆಯ ಸಂಕೇತವಾಗಿ ನೀಡಿಲು ಮುಂದಾದರೂ ಕೂಡಾ ಏಜೆಂಟ್ ಹಣವನ್ನು ನಿರಾಕರಿಸಿದ್ದಾರೆ.
ಸದ್ಯ ಟುಕೂ ತಮ್ಮ ಮತ್ತು ಡೆಲಿವರಿ ಬಾಯ್ ಜತೆಗಿನ ಸೆಲ್ಫಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಭಾರೀ ಮಟ್ಟಿನಲ್ಲಿ ವೈರಲ್ ಆಗಿದೆ. ಜತೆಗೆ ಡೆಲಿವರಿ ಬಾಯ್ ಸಹಾಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.