ಬೆಂಗಳೂರು: ಕೇರಳದ 30 ಕಿಲೋ ಚಿನ್ನ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಮತ್ತು ಸಂದೀಪ್ ನಾಯರ್ನನ್ನು ಬೆಂಗಳೂರಿನಲ್ಲಿ ಇಂದು ಬಂಧಿಸಲಾಗಿದ್ದು, ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿ ಅವರನ್ನು ತನ್ನ ಕಸ್ಟಡಿಗೆ ತೆಗೆದುಕೊಂಡಿದೆ.
ತಿರುವನಂತಪುರ ಇಂಟರ್ನ್ಯಾಷನಲ್ ಏರ್ಪೋರ್ಟ್ನಲ್ಲಿ ಡಿಪ್ಲೋಮ್ಯಾಟಿಕ್ ಲಗೇಜ್ ಮೂಲಕ 30 ಕಿಲೋ ಚಿನ್ನವನ್ನು ಕಳ್ಳಸಾಗಣೆ ಮೂಲಕ ಸಾಗಿಸುವ ಪ್ರಯತ್ನ ವಿಫಲವಾಗಿ ಕೇರಳದಲ್ಲಿ ರಾಜಕೀಯ ತಲ್ಲಣ ಸೃಷ್ಟಿಸಿದ ಪ್ರಕರಣದಲ್ಲಿ ಸ್ವಪ್ನಾ ಸುರೇಶ್ ಪ್ರಮುಖ ಆರೋಪಿ. ಈಕೆ ಯುಎಇ ಕಾನ್ಸುಲೇಟ್ನ ಮಾಜಿ ಉದ್ಯೋಗಿ. ಈ ಪ್ರಕರಣದಲ್ಲಿ ಎನ್ಐಎ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದೆ.
ಇದನ್ನೂ ಓದಿ: ಚಿನ್ನದ ರಾಣಿಯ ಮನೆಯಲ್ಲಿ ಪಾರ್ಟಿ ಮಾಡುತ್ತಿದ್ದ ಹಿರಿಯ ಅಧಿಕಾರಿಗಳು!
ಶನಿವಾರ ಸಂಜೆ ಸ್ವಪ್ನಾ ಮತ್ತು ಸಂದೀಪ್ ಅವರನ್ನು ಕಸ್ಟಡಿಗೆ ತೆಗೆದುಕೊಂಡಿರುವ ಎನ್ಐಎ ಅಧಿಕಾರಿಗಳು ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಇನ್ನೋರ್ವ ಆರೋಪಿ ಫೈಜಲ್ ಫರೀದ್ ಎರ್ನಾಕುಲಂ ಕಳ್ಳಸಾಗಣೆಯ ಇನ್ನೊಬ್ಬ ಆರೋಪಿ. ಈತ ತಲೆಮರೆಸಿಕೊಂಡಿದ್ದು ದುಬೈಗೆ ಹೋಗಿರುವ ಶಂಕೆ ಇದೆ. ಸರಿತ್ ಎಂಬ ಮತ್ತೊಬ್ಬ ಆರೋಪಿಯನ್ನೂ ಪೊಲೀಸರು ಬಂಧಿಸಿದ್ದಾರೆ. (ಏಜೆನ್ಸೀಸ್)
ಸ್ವಪ್ನಾ ಸುರೇಶ್ ವಿರುದ್ಧ ಉಗ್ರ ಚಟುವಟಿಕೆಗೆ ನಿಧಿ ಸಂಗ್ರಹದ ಆರೋಪ: ಎನ್ಐಎ ಹೊಸ ಎಫ್ಐಆರ್