ಕೊಚ್ಚಿ: ಕೇರಳದ ಚಿನ್ನ ಕಳ್ಳ ಸಾಗಣೆ ಪ್ರಕರಣದ ರೋಚಕ ಕಥೆಗಳು ಒಂದೊಂದಾಗಿ ಬಹಿರಂಗವಾಗುತ್ತಿವೆ. ಬಂಧಿತ ಸರಿತ್ ಮತ್ತು ಸ್ವಪ್ನಾ ಸುರೇಶ್ ವಿಚಾರಣೆ ವೇಳೆ ಬಾಯ್ಬಿಟ್ಟ ಅಂಶಗಳು ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಚಿನ್ನ ಕಳ್ಳಸಾಗಣೆ ಕೇಸ್ನಲ್ಲಿ ಬಂಧಿತರು ನೀಡಿರುವ ಮಾಹಿತಿ ಪ್ರಕಾರ, ಇದಕ್ಕೂ ಮುನ್ನ ಯುಎಇ ಕಾನ್ಸುಲೇಟ್ಗೆ 12 ಸಲ ತಿರುವನಂತಪುರ ವಿಮಾನ ನಿಲ್ದಾಣದ ಮೂಲಕವೇ ಚಿನ್ನ ಕಳ್ಳಸಾಗಣೆ ಮಾಡಿದ್ದಾರೆ!
ವರದಿಗಳ ಪ್ರಕಾರ, ಯುಎಇಯ ನಕಲಿ ಲಾಂಛನ ಮತ್ತು ಡಿಪ್ಲೋಮ್ಯಾಟಿಕ್ ಬ್ಯಾಗೇಜ್ಗೆ ನಕಲಿ ಸ್ಟಿಕ್ಕರ್ಗಳನ್ನು ತಯಾರಿಸಿ ಅಂಟಿಸಲಾಗಿತ್ತು. ಸ್ವಪ್ನಾ ಅಥವಾ ಸರಿತ್ ಯಾರೇ ಆದರೂ ಏರ್ಪೋರ್ಟ್ನಿಂದ ಚಿನ್ನ ಸಾಗಿಸುವುದಿದ್ದರೆ ಅದನ್ನು ಮೊದಲು ಸಂದೀಪ್ ನಾಯರ್ ಎಂಬುವವರ ಕಾರ್ಬನ್ ಡಾಕ್ಟರ್ ಎಂಬ ವರ್ಕ್ಶಾಪ್ಗೆ ಕೊಂಡೊಯ್ಯುತ್ತಿದ್ದರು. ಏರ್ಪೋರ್ಟ್ನಿಂದ ಡಿಪ್ಲೋಮ್ಯಾಟಿಕ್ ಬ್ಯಾಗೇಜ್ಗಳನ್ನು ಕೊಂಡೊಯ್ಯಲು ಕಾನ್ಸುಲೇಟ್ ಲಾಂಛನ ಇರುವ ವಾಹನವೇ ಬರಬೇಕಾಗಿತ್ತು. ಆ ವಾಹನವನ್ನು ಸಂದೀಪ್ ನಾಯರ್ ಒದಗಿಸಿದ್ದ. ಹಾಗಾಗಿ ಸರಿತ್ ಮತ್ತು ಸ್ವಪ್ನಾ 12 ನಕಲಿ ಲಾಂಛನ ಬಳಸಿಯೇ ಡಿಪ್ಲೋಮ್ಯಾಟಿಕ್ ಬ್ಯಾಗೇಜ್ ತಂದಿದ್ದಾರೆ.
ಇದನ್ನೂ ಓದಿ: ಚಿನ್ನದ ರಾಣಿಯ ಮನೆಯಲ್ಲಿ ಪಾರ್ಟಿ ಮಾಡುತ್ತಿದ್ದ ಹಿರಿಯ ಅಧಿಕಾರಿಗಳು!
ಶಿವಶಂಕರ್ ಕಸ್ಟಮ್ಸ್ ಅಧಿಕಾರಿಗಳಿಗೆ ನೀಡಿದ ಮಾಹಿತಿ ಪ್ರಕಾರ, ಸಂದೀಪ್ ನಾಯರನ್ನು ಶಿವಶಂಕರ್ಗೆ ಪರಿಚಯಿಸಿದ್ದು ಸ್ವಪ್ನಾ. ಸಂದೀಪ್ ನಾಯರ್ ಉಪಕಾರಕ್ಕೆ ಪ್ರತಿಯಾಗಿ ಕೆಎಸ್ಆರ್ಟಿಸಿ ಬಸ್ ಎಂಜಿನ್ಗಳ ನಿರ್ವಹಣೆಯ ಗುತ್ತಿಗೆಯನ್ನು ಕೊಡಿಸುವುದಾಗಿ ಮುಖ್ಯಮಂತ್ರಿಯ ಮಾಜಿ ಪ್ರಿನ್ಸಿಪಲ್ ಸೆಕ್ರೆಟರಿ ಎಂ.ಶಿವಶಂಕರ್ ಆಶ್ವಾಸನೆ ನೀಡಿದ್ದರು. ಇದೀಗ ಈ ವರ್ಕ್ಶಾಪ್ಗೆ ಭೇಟಿ ನೀಡುತ್ತಿದ್ದ ರಾಜಕಾರಣಿಗಳು, ಅಧಿಕಾರಿಗಳ ಹೆಸರು ಕೂಡ ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ತಳುಕು ಹಾಕಿಕೊಂಡಿದೆ. (ಏಜೆನ್ಸೀಸ್)
ಜೂನ್ ಒಂದೇ ತಿಂಗಳಲ್ಲಿ 70 ಕಿಲೋ ಚಿನ್ನ ಕಳ್ಳಸಾಗಣೆ- ಇದು ಕೇರಳದ “ಬಂಗಾರಿ” ಗ್ಯಾಂಗ್ನ ಕಥೆ